Advertisement

ಹುನಗುಂದ: ಐಟಿಐ ಕಾಲೇಜಿನಲ್ಲಿ ಸೌಲಭ್ಯಗಳದ್ದೇ ಕೊರತೆ

04:54 PM Jan 10, 2024 | Team Udayavani |

ಉದಯವಾಣಿ ಸಮಾಚಾರ
ಹುನಗುಂದ: ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಪಟ್ಟಣದಲ್ಲಿ ಆರಂಭಿಸಿರುವ ಕೈಗಾರಿಕಾ ತರಬೇತಿ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಹಳೆ ಟಿಸಿಎಚ್‌ ವಸತಿ ನಿಲಯದಲ್ಲಿ 2014ರಲ್ಲಿ ಸರ್ಕಾರಿ ಐಟಿಐ ಕಾಲೇಜು ಆರಂಭವಾಯಿತು. ಈ ಕಟ್ಟಡ ಶಿಥಿಲವಾಗಿದ್ದು, ವಿದ್ಯುತ್‌ ಸಂಪರ್ಕವೂ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಇಲ್ಲಿ ಕಲಿಕೆಗೆ ಹೆಚ್ಚಿಗೆ ಆಸಕ್ತಿ ತೋರಲಿಲ್ಲ.

Advertisement

ಸದ್ಯ ಪಟ್ಟಣದಿಂದ ನಾಲ್ಕು ಕಿಲೋ ಮೀಟರ್‌ ದೂರದ ರಾಷ್ಟ್ರೀಯ ಹೆದ್ದಾರಿ-50ರ ಹೊಂದಿಕೊಂಡ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಚಾರ ಮತ್ತು ವಿದ್ಯಾರ್ಥಿ ವರ್ಗಕ್ಕೆ ಸೂಕ್ತ ಮಾಹಿತಿ ಇರದೆ ಇರುವುದರಿಂದ ಕಡಿಮೆ ವಿದ್ಯಾರ್ಥಿಗಳು ಇಲ್ಲಿ
ಓದುತ್ತಿದ್ದಾರೆ. ಆದರೆ ಆಸಕ್ತ ವಿದ್ಯಾರ್ಥಿಗಳಿಗೆ ಅದರ ಮಾಹಿತಿ ಸಿಗುತ್ತಿಲ್ಲ. ಕಟ್ಟಡ ಶಿಥಿಲಾವಸ್ಥೆಗೊಂಡಿದೆ.

ವಿದ್ಯುತ್‌ ರಹಿತ ಜತೆಗೆ ಇತರೆ ಸೌಲಭ್ಯಗಳ ಕೊರತೆ, ಕಲಿಕಾ ಸಾಮಗ್ರಿಗಳ ಕೊರತೆಯಿಂದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕಾಲೇಜಿನಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದೇ ಇರುವುದರಿಂದ ಯಾವುದೇ ಪ್ರಾಯೋಗಿಕ ತರಗತಿಗಳು ನಡೆಯುತ್ತಿಲ್ಲ.

ಪ್ರಸಕ್ತ ಈ ಕಾಲೇಜು 4 ಕಿ.ಮೀ ದೂರದಲ್ಲಿ ರಸ್ತೆಗೆ ಸೂಚನಾ ಫಲಕ ಕಾಣದಂತೆ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವರ್ಗ ಪ್ರವೇಶಕ್ಕೆ ಪತ್ರಿಕೆ ಸಾರ್ವಜನಿಕ ಕ್ಷೇತ್ರಕ್ಕೆ ಮಾಹಿತಿ ಇಲ್ಲದೇ ಇರುವುದರಿಂದ ಆಸಕ್ತ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗುತ್ತದೆ.

ನಾನು ಕಳೆದ 6 ತಿಂಗಳಿಂದ ಈ ಕಾಲೇಜಿಗೆ ಪ್ರಭಾರಿ ಪ್ರಾಂಶುಪಾಲನಾಗಿ ಬಂದಿದ್ದೇನೆ. ಸಕಲ ಸೌಲಭ್ಯ ಹೊಂದಿದ ಬಾಡಿಗೆ ಕಟ್ಟಡದಲ್ಲಿ ಹೆಚ್ಚಿನ ಸ್ಥಳಾವಕಾಶದಲ್ಲಿ ಕಲಿಕಾ ಸಾಮಗ್ರಿ ಸಂಗ್ರಹಿಸಿ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜು ಆರಂಭಿಸಿದೆ. ಕೇವಲ ಮೂರು ಕಾಯಂ, ಇಬ್ಬರು ಅತಿಥಿ ಉಪನ್ಯಾಸಕರು ಸೇರಿ ಒಟ್ಟು ಐವರು ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

40 ಫಿಟ್ಟರ್‌, 40 ಇಲೆಕ್ಟ್ರಿಕಲ್‌ ಸೇರಿ 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಇಲೆಕ್ಟ್ರಿಕಲ್‌ ಹೆಚ್ಚಿನ ಬೇಡಿಕೆ ಇರುವುದರಿಂದ ಟ್ರೇಡ್‌ ಸಂಖ್ಯೆ ಹೆಚ್ಚಿಸಲು ಮೇಲಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ.
ಎಸ್‌.ಆರ್‌. ಮುಜಾವರ,
ಪ್ರಭಾರಿ ಪ್ರಾಚಾರ್ಯರು, ಸರ್ಕಾರಿ ಐಟಿಐ ಕಾಲೇಜು.

ಜನಪ್ರತಿನಿಧಿಗಳ ಆಸಕ್ತಿಯಿಂದ ಮಂಜೂರಾದ ಈ ಸಂಸ್ಥೆ ಸದ್ಬಳಕೆಯಾಗಬೇಕು. ವಿದ್ಯಾರ್ಥಿಗಳು ವೃತ್ತಿಪರ ವ್ಯಾಸಂಗ ಮಾಡಿ ಬದುಕು ರೂಪಿಸಿಕೊಳ್ಳುವಲ್ಲಿ ಕಾಲೇಜು ಸಿಬ್ಬಂದಿ ಆಸಕ್ತಿ ತೋರಬೇಕು.
ಸಂಗಮೇಶ ಬಾವಿಕಟ್ಟಿ,
ವಿಕಲಚೇತನ ಸಂಘದ ಮುಖಂಡ

*ವೀರೇಶ ಕುರ್ತಕೋಟಿ

Advertisement

Udayavani is now on Telegram. Click here to join our channel and stay updated with the latest news.

Next