Advertisement

ಮಾನವೀಯತೆ ಮರೆತ ಕನಕಗಿರಿ ಶಾಸಕ

04:17 PM Apr 21, 2019 | Team Udayavani |

ಕೊಪ್ಪಳ: ಗಂಗಾವತಿ ತಾಲೂಕಿನ ಗುಂಡೂರು ಕ್ರಾಸ್‌ ಬಳಿ ಮಹಿಳೆ ಅಪಘಾತದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರೂ ಸ್ಥಳದಲ್ಲಿಯೇ ಇದ್ದ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಮಾನವೀಯತೆ ಮರೆತು ಅಲ್ಲಿಂದ ಪ್ರಚಾರಕ್ಕೆ ತೆರಳಿದ ಪ್ರಸಂಗ ನಡೆದಿದೆ. ಶಾಸಕರ ಈ ವರ್ತನೆಗೆ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ.

Advertisement

ಸಿಂಧನೂರು ತಾಲೂಕಿನ ಮುಳಗೇರಿ ನಿವಾಸಿ ಎಂ. ಸೀತಮ್ಮ ಹಾಗೂ ರವೀಂದ್ರ ಎನ್ನುವವರು ಜಾಲಿಹಾಳದಿಂದ ಬೈಕ್‌ನಲ್ಲಿ ಶ್ರೀರಾಮನಗರಕ್ಕೆ ಪ್ರಯಾಣಿಸುತ್ತಿದ್ದರು. ಗುಂಡೂರು ಕ್ರಾಸ್‌ ಬಳಿ ಬೈಕ್‌ ಟೈಯರ್‌ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮಹಿಳೆ ಸೀತಮ್ಮ ರಸ್ತೆ ಮೇಲೆ ಬಿದ್ದು ತೆಲೆಗೆ ತೀವ್ರತರ ಪೆಟ್ಟಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಳು. ಆ ವೇಳೆ ಅದೇ ಮಾರ್ಗದಲ್ಲಿ ಹೊರಟಿದ್ದ ಕನಕಗಿರಿ ಬಿಜೆಪಿ ಶಾಸಕ ಮಹಿಳೆಯನ್ನು ರಸ್ತೆ ಪಕ್ಕದ ನೆರಳಿಗೆ ಮಲಗಿಸಿ ಅಲ್ಲಿಂದ ಪ್ರಚಾರಕ್ಕೆ ತೆರಳಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ ಸೇರಿ ವಾಹನದಲ್ಲಿ ಆ ಮಹಿಳೆಯನ್ನು ಆಸ್ಪತ್ರೆಗೆ ತಕ್ಷಣ ಸಾಗಿಸಿ ಚಿಕಿತ್ಸೆ ಕೊಡಿಸಬಹುದಿತ್ತು. ಅದೆಲ್ಲವನ್ನೂ ಮರೆತು ಒಬ್ಬ ಜನಪ್ರತಿನಿಧಿಯಾಗಿ

ಮಹಿಳೆಯನ್ನು ಗಿಡದ ಕೆಳಗೆ ಬಿಟ್ಟು ಪ್ರಚಾರಕ್ಕೆ ತೆರಳಿದ್ದಕ್ಕೆ ಸ್ಥಳೀಯರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೊನೆಗೂ ಸ್ಥಳೀಯರೇ ಆ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಿದರೂ ಬದುಕುಳಿಯಲಿಲ್ಲ. ಗಂಗಾವತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next