Advertisement

ಮಾನವೀಯತೆ ಮೆರೆದ ಶಾಸಕ ಡಾ|ಅಜಯಸಿಂಗ್‌

11:48 AM Jan 23, 2018 | Team Udayavani |

ಜೇವರ್ಗಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು ಶಾಸಕ ಡಾ| ಅಜಯಸಿಂಗ್‌ ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆ‌ದಕೊಂಡು ಬಂದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

ತಾಲೂಕಿನ ಇಜೇರಿ-ಕರಕಿಹಳ್ಳಿ ಮದ್ಯದಲ್ಲಿ ದಂಪತಿಗಳಿಬ್ಬರು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿ ಚನ್ನಮ್ಮ ಹಡಪದ ಎಂಬುವರಿಗೆ ಗಂಭೀರವಾದ ಗಾಯಗಳಾಗಿ ನರಳುತ್ತಿದ್ದರು.

ಕುಕನೂರಿನಲ್ಲಿ ತೊಗರಿ ಖರೀದಿ ಕೇಂದ್ರ ಉದ್ಘಾಟಿಸಿ ಪಟ್ಟಣದ ಕಡೆ ಆಗಮಿಸುತ್ತಿದ್ದ ಶಾಸಕ ಡಾ| ಅಜಯಸಿಂಗ್‌ ರಸ್ತೆ ಮೇಲೆ ಚನ್ನಮ್ಮಳ ನರಳಾಟ ಕಂಡು ವಾಹನ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು. ಗಂಭಿರವಾಗಿ ಗಾಯಗೊಂಡಿದ್ದ ಚನ್ನಮ್ಮಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಶಾಸಕರು ತಕ್ಷಣ ತಮ್ಮ ವಾಹನದಲ್ಲಿಯೇ ಪಟ್ಟಣಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಚನ್ನಮ್ಮ ದಂಪತಿ ತಾಲೂಕಿನ ನರಿಬೋಳ ಗ್ರಾಮದಿಂದ ನಂದಿಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ದು ಪಾಟೀಲ ಗಾಯಾಳುಗೆ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿಸಿದ್ದಾರೆ. ಶಾಸಕರ ಕಾರ್ಯಕ್ಕೆ ತಾಲೂಕಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next