Advertisement

ರಸ್ತೆ ಗುಂಡಿಯಲ್ಲಿ ಸಂಚಾರ ಸಂಕಷ್ಟ

12:05 PM Sep 19, 2019 | Team Udayavani |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಪಟ್ಟಣದ ಪ್ರವಾಸಿ ಮಂದಿರದಿಂದ ಕಲ್ಬುರ್ಗಿ ಮಾರ್ಗದ ಗಾದಾ ಪಂಚ ಮುಂಭಾಗದ ರಾಜ್ಯ ಹೆದ್ದಾರಿ ಮಧ್ಯ ಮಳೆ ನೀರು ಸಂಗ್ರಹಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ಇರುವ ಹಿನ್ನೆಲೆಯಲ್ಲಿ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಿಂದ ಪ್ರತಿನಿತ್ಯ ಕಲ್ಬುರ್ಗಿ ಮುಂಬೈ, ಹೈದರಾಬಾದ್‌ ಸೇರಿದಂತೆ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇರುವ ಏಕೈಕ ಸಂಪರ್ಕ ಮಾರ್ಗ ಇದಾಗಿದೆ. ಪ್ರತಿ ವರ್ಷ ಮಳೆಗಾಲ ಅವಧಿಯಲ್ಲಿ ವಾಹನ ಸಂಚಾರಿಗಳು ಈ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆ ಇದೆ.

ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಬೈಪಾಸ್‌ ವರೆಗಿನ ಮಾರ್ಗದ ಪೈಕಿ ಗಾದಾ ಪೆಟ್ರೋಲ್ ಬಂಕ್‌ ತದನಂತರ ಸಿಂಡಿಕೇಟ್ ಮುಂಭಾಗದಿಂದ ಪಟ್ಟಣದ ಬಸವೇಶ್ವರ ಬಡಾವಣೆಗೆ ಸಂಪರ್ಕ ಕಲ್ಪಿಸುವ ಉಪ ರಸ್ತೆ ಮಧ್ಯ, ನಾಗಲಕ್ಷಿ ್ಮೕ ಡಾಬಾ ಅದರ ಪಕ್ಕದಿಂದ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗಾಲದಲ್ಲಿ ಜಲಾವೃತಗೊಂಡು ರಸ್ತೆ ಯಾವುದೂ ಗುಂಡಿ ಯಾವುದು ಎನ್ನುವ ವ್ಯತ್ಯಾಸದ ಅರಿವಾಗದೆಯೇ ಈ ವರೆಗೆ ಅದೆಷ್ಟೋ ಬಾರಿ ಅಪಘಾತ ಸಂಭವಿಸಿವೆ. ಅನೇಕರು ಕೈ-ಕಾಲು ಮುರಿದುಕೊಂಡು ಗಂಭೀರ ಗಾಯಗೊಂಡಿರುವ ಸಾಕಷ್ಟು ನಿದರ್ಶನಗಳೂ ಇವೆ. ಆ ಮಾರ್ಗದಲ್ಲಿ ಎಡಬದಿಗೆ ಇರುವ ಅಂಗಡಿಗಳಿಗೆ ಮಳೆಗಾಲದಲ್ಲಿ ನೀರು ನುಗ್ಗಿ ನಿತ್ಯದ ವ್ಯವಹಾರಕ್ಕೆ ತೊಂದರೆ ಆಗುತ್ತಿದೆ. ಜೀವನ ನಿರ್ವಹಿಸುವುದೇ ಕಷ್ಟಸಾಧ್ಯವಾಗಿದೆ ಎಂಬುದು ವ್ಯಾಪಾರಿಗಳ ಅಳಲು.

ಪಟ್ಟಣದ ನಿವಾಸಿಗಳು ಈ ಕುರಿತು ಅದೆಷ್ಟೋ ಬಾರಿ ಪುರಸಭೆಯ ಚುನಾಯಿತ ಪ್ರತಿನಿಧಿಗಳು ಮಾತ್ರವಲ್ಲದೇ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳೂ ಅದೇ ಮಾರ್ಗದಿಂದ ಸಂಚರಿಸುತ್ತಾರೆ. ಈ ಪೈಕಿ ಅಧಿಕಾರಿ ಚುನಾಯಿತ ಪ್ರತಿನಿಧಿಗಳ್ಯಾರು ಶಾಶ್ವತ ಪರಿಹಾರ ಒದಗಿಸುವುದು ದೂರದ ಮಾತು ತಾತ್ಕಾಲಿಕ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಸಲ್ಲದ ನೆಪವೊಡ್ಡಿ ದಿನ ಮುಂದೂಡದೇ ಜನರು ಅನುಭವಿಸುತ್ತಿರುವ ತೊಂದರೆ ಗಂಭೀರ ಪರಿಗಣಿಸಿ, ಶಾಶ್ವತ ಪರಿಹಾರ ವಿಳಂಬವಾದರೂ ಚಿಂತೆಯಿಲ್ಲ. ಸದ್ಯ ನೀರು ರಸ್ತೆಯ ಮೇಲೆ ಸಂಗ್ರಹ ಆಗದಿರುವಂತೆ ಪರಿಹಾರ ಕೈಗೊಳ್ಳುವ ಮೂಲಕ ನೆಮ್ಮದಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

Advertisement

ಸಮಸ್ಯೆ ಇರುವುದು ಸತ್ಯ. ತಾತ್ಕಾಲಿಕವಾಗಿ ಅನೇಕ ಬಾರಿ ಕೈಗೊಂಡರೂ ಮತ್ತೆ ಯಥಾಸ್ಥಿತಿಗೆ ತಲುಪಿತ್ತದೆ. ಆ ವಿಷಯ ಗಂಭೀರ ಪರಿಗಣಿಸಿರುವ ಶಾಸಕ ರಾಜಶೇಖರ ಪಾಟೀಲ ಅವರು ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಬೈಪಾಸ್‌ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಸಂಬಂಧ ಎಚ್.ಕೆ.ಆರ್‌.ಡಿ.ಬಿಯಿಂದ ರೂ.3.5ಕೋಟಿ ಬಿಡುಗಡೆಗೊಳಿಸಿದ್ದಾರೆ. ಟೆಂಡರ್‌ ಪ್ರಕ್ರಿಯೆ ಬಳಿಕ ಕಾಮಗಾರಿ ಶೀಘ್ರ ಆರಂಭಗೊಳ್ಳದೆ.
ಅಪ್ಸರಮಿಯ್ಯ,
 ಪುರಸಭೆ ಸದಸ್ಯರು ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು

ಗಾದಾ ಪೆಟ್ರೊಲ್ ಬಂಕ್‌ ಮುಂಭಾಗದ ರಸ್ತೆ ಮೇಲೆ ಮಳೆ ನೀರು ಸಂಗ್ರಹಗೊಂಡಾಗಲೊಮ್ಮೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಆ ಮೂಲಕ ತೆರಳುವಾಗ ರಸ್ತೆ ಮಧ್ಯದ ಗುಂಡಿ ಗೊತ್ತಾಗದೇ ಅದೂ ರಾತ್ರಿ ಹೊತ್ತು ಬೈಕ್‌ ಸಮೇತ ನೀರಲ್ಲಿ ಬಿದ್ದಿದ್ದೇನೆ. ಆ ವೇಳೆ ಭಾರಿ ವಾಹನ ಹಾಯ್ದರೆ ತೊಂದರೆಯಾಗುತ್ತಿತ್ತು. ಸಂಬಂಧಪಟ್ಟವರು ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕು.
•ಆಜಮ್‌ ಮತೀನ್‌
ಜೆಡಿಎಸ್‌ ನಗರ ಘಟಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next