Advertisement

ಹುಮನಾಬಾದ್:‌ ಕಸಾಯಿ ಖಾನೆಗೆ ದಾಳಿ; 16 ಜಾನುವಾರುಗಳ ರಕ್ಷಣೆ 

10:53 AM Feb 05, 2023 | Team Udayavani |

ಹುಮನಾಬಾದ: ಸರ್ಕಾರ ಗೋ ರಕ್ಷಣೆ ಕಾಯ್ದೆ ಜಾರಿಗೆ ತಂದರು ಕೂಡ ಪಟ್ಟಣದ ಶಿವಪುರ ಬಡಾವಣೆಯ ಕಸಾಯಿ ಖಾನೆಯಲ್ಲಿ ದನಗಳ ಕತ್ತರಿಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಭಾನುವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ.

Advertisement

ಪೋಲಿಸ್ ದಾಳಿ ಸಂದರ್ಭದಲ್ಲಿ ಕಸಾಯಿ ಖಾನೆಯಲ್ಲಿ ಹತ್ತಾರು ಜನರು ದನಗಳ ಕತ್ತರಿಸುವ ಕೆಲಸ ನಡೆಸಿದ್ದರು ಎನ್ನಲಾಗಿದೆ. ದಾಳಿ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಜನರು ಪರಾರಿಯಾಗಿದ್ದಾರೆ. ಮೊದಲಿಗೆ 112 ಸಹಾಯವಾಣಿಗೆ ಕರೆ ಮಾಡಿ ಜನರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಪಿಎಸ್ಐ ಮಂಜನಗೌಡ ಪಾಟೀಲ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ ಸ್ಥಳಕ್ಕೆ ಪಶು ವೈದ್ಯಧಿಕಾರಿ ಡಾ| ಗೋವಿಂದ್, ಡಾ| ಶಾಂತಕುಮಾರ ಸಿದ್ದೇಶ್ವರ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ವಿವಿಧ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳಿಸಿದರು.

ಈ ಸಂದರ್ಭದಲ್ಲಿ ಆಕಳು, ಎತ್ತು, ಎಮ್ಮೆ ಸೇರಿದಂತೆ ಒಟ್ಟಾರೆ 16 ಜಾನುವಾರುಗಳ ರಕ್ಷಣೆ ಮಾಡಲಾಗಿದ್ದು, ಜಾನುವಾರಗಳನ್ನು ಭಾಲ್ಕಿ ತಾಲೂಕಿನ ಮೈಲಾರ ಗೋ ಶಾಲೆಗೆ ಕಳುಹಿಸಲಾಗುತ್ತದೆ.

ಸ್ಥಳದಲ್ಲಿ ಆರು ಜಾನುವಾರುಗಳು ಕತ್ತರಿಸಿದ ಮಾಂಸ ಚರ್ಮ ಕೊಂಬು ಲಭ್ಯವಾಗಿದೆ ಎಂದು ಡಾ| ಗೋವಿಂದ್ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next