Advertisement

ಮಾನವ ಸೌಹಾರ್ದ ಸಂಗಮ

12:03 AM Apr 30, 2019 | Team Udayavani |

ಕಾಸರಗೋಡು: ಎ ಹ್ಯೂಮನ್ಸ್‌ ಅಸೋಸಿಯೇಶನ್‌ ಆಫ್‌ ಕಾಸರಗೋಡು ಫೋರ್‌ ಎಂಪ ವರ್‌ವೆುಂಟ್‌ (ಎಡಬ್ಲ್ಯುಎಕೆಇ) ನೇತೃತ್ವದಲ್ಲಿ ಮಾನವ ಸೌಹಾರ್ದ ಸಂಗಮ ಜರಗಿತು.

Advertisement

ಶ್ರೀಲಂಕಾದಲ್ಲಿ ನಡೆದ ಬಾಂಬ್‌ ಸ್ಫೋಟವನ್ನು ಖಂಡಿಸಿ ಮುಸ್ಲಿಂ ಮಹಿಳೆಯರ ಸಂಗಮದ ಆಶ್ರಯದಲ್ಲಿ ಕಾಸರಗೋಡು ರೈಲು ನಿಲ್ದಾಣ ಸಮೀಪದ ಅವರ್‌ ಲೇಡಿ ಆಫ್‌ ಚರ್ಚ್‌ ಪರಿಸರದಲ್ಲಿ ಮಾನವ ಸೌಹಾರ್ದ ಸಂಗಮ ನಡೆಯಿತು.

ಈಸ್ಟರ್‌ ದಿನದಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆನ ಬಾಂಬ್‌ ಸ್ಫೋಟದಲ್ಲಿ ಸಾವಿಗೀಡಾದವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸ ಲಾಯಿತು.
ಶಾಸಕ ಎನ್‌.ಎ. ನೆಲ್ಲಿಕುನ್ನು ಕಾರ್ಯಕ್ರಮವನ್ನು ಉದ್ಘಾ ಟಿಸಿದರು.

ಕಾಸರಗೋಡು ಪೀಪಲ್ಸ್‌ ಫಾರಂ ಅಧ್ಯಕ್ಷ ಪ್ರೊ| ವಿ. ಗೋಪಿನಾಥ್‌, ನ್ಯಾಯವಾದಿ ಕೆ.ಶ್ರೀಕಾಂತ್‌, ಕ್ರೈಂ ಬ್ರಾಂಚ್‌ ಸಿ.ಐ. ಅಬ್ದುರಹೀಂ, ಫಾ| ಸಂತೋಷ್‌ ಲೋಬೋ, ಫಾ|ಬಿಜು ನೆಡುಂಪರಂಬಿಲ್‌, ಸ್ಟಾÂನ್ಲಿ ಡಿಸೂಸ, ಸಿಪಿಸಿಆರ್‌ಐ ಪ್ರಿನ್ಸಿಪಲ್‌ ಸಯಿಂಟಿಸ್ಟ್‌ ಡಾ| ಸಿ. ತಂಬಾನ್‌, ಅವೇಕ್‌ ಪದಾಧಿಕಾರಿಗಳಾದ ಸಕೀನ ಅಕºರ್‌, ಸುಲೈಖಾ ಮಾಹಿನ್‌, ಮರಿಯಂ ಸಲಾಹುದ್ದೀನ್‌ ಮೊದಲಾದವರು ಮಾತನಾಡಿದರು.

ಅವೇಕ್‌ ಅಧ್ಯಕ್ಷೆ ಯಾಸ್ಮಿನ್‌ ಮುಸ್ತಫ ಅವರು ಅಧ್ಯಕ್ಷತೆ ವಹಿಸಿದರು.
ಶಾಂತಿಯ ಸಂಕೇತವಾಗಿ ಎರಡು ಪಾರಿವಾಳಗಳನ್ನು ಹಾರಿ ಬಿಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next