Advertisement

Huliyurdurga police station: ಕರ್ತವ್ಯ ಲೋಪ ಆರೋಪದಡಿ ಸಬ್ ಇನ್ಸ್ ಸ್ಪೆಕ್ಟರ್ ಅಮಾನತು

02:24 PM Jan 11, 2024 | Team Udayavani |

ಕುಣಿಗಲ್: ರೌಡಿ ಶೀಟರ್ ಕೊಲೆ ಪ್ರಕರಣ ಸಂಬಂಧ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಹುಲಿಯೂರು ದುರ್ಗ ಸಬ್ ಇನ್ಸ್ ಸ್ಪೆಕ್ಟರ್ ಸುನೀಲ್ ಕುಮಾರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ.ಅಶೋಕ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Advertisement

ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಕಂಪಲಪುರ ಸಮೀಪ ಡಿಸೆಂಬರ್ 30ರ ಶನಿವಾರ ರಾತ್ರಿ ರೌಡಿಶೀಟರ್ ಸುರೇಶ್ ಅಲಿಯಾಸ್ ಕ್ಯಾಪ್ಟನ್ ಸೂರಿಯನ್ನು ಮತ್ತೋಬ್ಬ ರೌಡಿ ಆಟೋ ರಾಮ ಹಾಗೂ ಅತನ ಸಹಚರರು ಬರ್ಬರವಾಗಿ ಕೊಲೆ ಗೈದಿದರು.

ಈ ಪ್ರಕರಣ ಸಂಬಂಧ ಕರ್ತವ್ಯ ಲೋಪ ಎಸಗಿರುವ ಪಿಎಸ್ ಐ ಸುನೀಲ್ ಕುಮಾರ್ ಅವರನ್ನು ಜಿಲ್ಲಾ ಎಸ್ಪಿ ಸೇವೆಯಿಂದ ಅಮಾನತು ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next