Advertisement

Bank ಸಾಲದ ನೋಟೀಸ್ ಗೆ ಕಂಗೆಟ್ಟ ಹುಲಿಯಪುರ ರೈತ ಆತ್ಮಹತ್ಯೆ

10:16 PM Dec 27, 2023 | Team Udayavani |

ಕುಷ್ಟಗಿ: ಬ್ಯಾಂಕಿನ‌ ಸಾಲದ‌ ನೋಟೀಸ್ ಕಿರುಕುಳಕ್ಕೆ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದ ರೈತನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಪ್ರಕರಣ ತಾಲೂಕಿನ ಹುಲಿಯಪುರ ಗ್ರಾಮದಲ್ಲಿ ನಡೆದಿದೆ.

Advertisement

ಹುಲಿಯಪುರ ಗ್ರಾಮದ ರೈತರ ಕಲ್ಲಪ್ಪ ಹನಮಪ್ಪ ಕತಿಗೇರ(42) ಮೃತ ರೈತ ಎಂದು ಗುರುತಿಸಲಾಗಿದೆ. ಹುಲಿಯಪುರ ಸೀಮಾದ ಸ.ನಂ.12 ರಲ್ಲಿ 2 ಎಕರೆ 14 ಗುಂಟೆ ಜಮೀನು ಇದ್ದು, ಬೆಳೆ ಸಾಲವಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ 2ಲಕ್ಷ ಸಾಲ ಹಾಗೂ ಎಲ್ & ಟಿ ಗುಂಪಿನಲ್ಲಿ 1.20 ಲಕ್ಷ ರೂ. ಸಾಲ ಮಾಡಿದ್ದ. ಹಿರೇಮನ್ನಾಪೂರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಿಂದ ಕಳೆದ 6 ತಿಂಗಳಲ್ಲಿ ಸಾಲದ ಹಣ ಮರು ಪಾವತಿಗೆ ಮೂರು ನೋಟೀಸ್ ಬಂದಿತ್ತು. ಮನಸ್ಸಿಗೆ ಹಚ್ಚಿಕೊಂಡು ಕುಡಿತ ಆರಂಭಿಸಿದ್ದ. ಸಾಲ ತೀರಿಸುವುದು ಹೇಗೆ? ಚಿಂತೆಯಲ್ಲಿ ರೈತ ಕಲ್ಲಪ್ಪ ಕತಿಗೇರ ಡಿ.24 ರಂದು, ಮನನೊಂದು ಅಲಸಂದಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದ. ನಂತರ ಕಲ್ಲಪ್ಪನನ್ನು ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಡಿ.27 ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next