Advertisement
ಸಂಸ್ಕರಣಾ ಘಟಕಗಳು, ನೇರ ಮಾರುಕಟ್ಟೆ, ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳು ಸೇರಿ ಬರದ ನಾಡಿನ ಸಮಗ್ರ ಕೃಷಿ ಬೆಳವಣಿಗೆಗೆ ಇದು ಮುನ್ನುಡಿ ಬರೆಯಲಿದೆ.
Related Articles
Advertisement
“ಆದರೆ, ಕೇವಲ ರಾಜ್ಯ ಸರ್ಕಾರದಿಂದ ಎಲ್ಲಡೆ ಸೂಕ್ಷ್ಮ ಹನಿನೀರಾವರಿ ಯೋಜನೆ ಅಸಾಧ್ಯದ ಮಾತು. ಕೇಂದ್ರ ಸರ್ಕಾರ ಕನಿಷ್ಠ ಶೇ.50ರಷ್ಟು ಸಬ್ಸಿಡಿ ನೀಡಬೇಕು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳುತ್ತಾರೆ’.
ಈ ಪೈಕಿ ಭದ್ರಾ ಮೇಲ್ದಂಡೆಯಲ್ಲೇ 5.50 ಲಕ್ಷ ಎಕರೆ ಪ್ರದೇಶವನ್ನು ಸೂಕ್ಷ್ಮ ಹನಿ ನೀರಾವರಿಗೆ ಪರಿವರ್ತಿಸಲಾಗುವುದು. ಉಳಿದಂತೆ ಸಿಂಗಟಾಲೂರಿನಲ್ಲಿ 2.5 ಲಕ್ಷ, ಕೊಪ್ಪಳ 2.8 ಲಕ್ಷ, ಮಳವಳ್ಳಿಯಲ್ಲಿ 75 ಸಾವಿರ, ತರೀಕೆರೆ 50 ಸಾವಿರ ಎಕರೆಯಲ್ಲಿ ವಿಸ್ತರಿಸಲಾಗುವುದು. ಖಾಸಗಿ ಸಹಭಾಗಿತ್ವದಲ್ಲೂ ಇದನ್ನು ಅನುಷ್ಠಾನಗೊಳಿಸಲುಚಿಂತನೆ ನಡೆದಿದೆ ಎಂದರು. ಲಭ್ಯ ನೀರಲ್ಲಿ ದುಪ್ಪಟ್ಟು ನೀರಾವರಿ: ಹುನಗುಂದ ತಾಲೂಕಿನ ರಾಮಥಾಳ (ಮರೋಳ)ದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ 60 ಸಾವಿರ ಎಕರೆಯಲ್ಲಿ ಸೂಕ್ಷ್ಮ ಹನಿ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಇದರಿಂದ ಹುನಗುಂದ ತಾಲೂಕಿನ ಒಟ್ಟು 55 ಹಳ್ಳಿಗಳ ಸುಮಾರು 15 ಸಾವಿರ ರೈತರಿಗೆ ಅನುಕೂಲವಾಗಲಿದೆ ಎಂದರು. ಸೂಕ್ಷ್ಮ ಹನಿ ನೀರಾವರಿ ಪದಟಛಿತಿಯಲ್ಲಿ 23 ಬೆಳೆ ಬೆಳೆಯಬಹುದು. ಇಳುವರಿ ಕೂಡ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು. – ವಿಜಯಕುಮಾರ್ ಚಂದರಗಿ