Advertisement

ಮುಕ್ರಂಖಾನ್‌ ಗಡಿಪಾರಿಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

12:18 PM Feb 19, 2022 | Team Udayavani |

ಚಿತ್ತಾಪುರ: ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಮಾತನಾಡಿದ ಸೇಡಂ ಕಾಂಗ್ರೆಸ್‌ ಮುಖಂಡ ಮುಕ್ರಂಖಾನ್‌ ವಿರುದ್ಧ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಹಿಂದೂ ಪರ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಉಪಾಧ್ಯಕ್ಷ ಅಶ್ವತ್ಥ ರಾಠೊಡ ಮಾತನಾಡಿ, ಮುಕ್ರಂಖಾನ್‌ ಅವರು ಜೇವರ್ಗಿ ತಾಲೂಕಿನ ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪುರಸಭೆ ಸದಸ್ಯ ಶಾಮ ಮೇಧಾ ಮಾತನಾಡಿ, ಮುಕ್ರಂಖಾನ್‌ ವಿರುದ್ಧ ಕ್ರಮ ಕೈಗೊಂಡು, ಮತ್ತೆ ಇಂತ ಘಟನೆಗಳು ಮರುಕಳಿಸದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.

ಪುರಸಭೆ ಸದಸ್ಯ ರಮೇಶ ಬೊಮ್ಮನಳ್ಳಿ, ಮುಖಂಡರಾದ ಮಣಿಕಂಠ ರಾಠೊಡ, ಸಾಬಣ್ಣ ಪೂಜಾರಿ, ಮೇಘರಾಜ ಗುತ್ತೇದಾರ, ಶ್ರೀನಿವಾಸ ಹಳ್ಳಿ, ಕಾಶಿನಾಥ ಸಂಗಾವಿ, ರಾಹುಲ್‌ ಭೋವಿ, ಸಂತೋಷ ಹಾವೇರಿ, ಬಸವರಾಜ ತಳವಾರ, ಮಹಾಂತೇಶ ಬೊಮ್ಮನಳ್ಳಿ, ಆಕಾಶ, ನಾಗರಾಜ ಹೂಗಾರ, ಶ್ರೀಕಾಂತ ಸುಲೇಗಾಂವ, ಸಂಗಮೇಶ ರೋಣದ್‌, ಮನೋಜಕುಮಾರ ರಾಠೊಡ, ಸುನೀಲ ಚವ್ಹಾಣ, ರಾಜು ದೊರೆ, ಮಹೇಶ ಸಾತನೂರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next