Advertisement

ಅಜಯ್‌ ಸಿಂಗ್‌, ಸತೀಶ್‌ ಜಾರಕೀಹೊಳಿ ಬೆಂಬಲಿಗರ ಬೃಹತ್‌ ಪ್ರತಿಭಟನೆ 

12:07 PM Jun 06, 2018 | Team Udayavani |

ಬೆಂಗಳೂರು/ ಕಲಬುರಗಿ: ಬಹು ನಿರೀಕ್ಷಿತ ಕಾಂಗ್ರೆಸ್‌ -ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಬುಧವಾರ ವಿಸ್ತರಣೆಯಾಗುತ್ತಿದೆ. ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಹಲವರು ಅವಕಾಶ ವಂಚಿತರಾಗಿದ್ದಾರೆ ಆದರೆ ಯಾರೂ ಬಹಿರಂಗವಾಗಿ  ಅಸಮಾಧಾನ ಹೊರ ಹಾಕಿಲ್ಲವಾದರೂ, ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

Advertisement

ಯಮಕನಮರಡಿ ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕೀಹೊಳಿ ಅವರ ನೂರಾರು ಬೆಂಬಲಿಗರು ವಿಧಾನಸೌಧದ ಹಿಂಭಾಗದಲ್ಲಿ  ಧರಣಿ ಕುಳಿತು ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿದ್ದಾರೆ. 

ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಬಸ್‌ನಲ್ಲಿ ಕರೆದೊಯ್ದಿದ್ದಾರೆ.

ಸತೀಶ್‌ ಜಾರಕೀಹೋಳಿ ಸಹೋದರ ರಮೇಶ್‌ ಜಾರಕೀಹೊಳಿಗೆ ಸಚಿವ ಸ್ಥಾನ ನೀಡಲಾಗಿದೆ. 

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್‌ ಅವರ ಪುತ್ರ ಜೇವರ್ಗಿ ಶಾಸಕ ಅಜಯ್‌ ಸಿಂಗ್‌ ಅವರ ನೂರಾರು ಬೆಂಬಲಿಗರು ಕಲಬುರಗಿಯ ಜೇವರ್ಗಿಯ ಸೊನ್ನಾ ಕ್ರಾಸ್‌ನಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next