Advertisement

ಪಿರಿಯಾಪಟ್ಟಣದಲ್ಲೂ ಹುಚ್ಚ ವೆಂಕಟ್‌ ಹುಚ್ಚಾಟ

11:40 PM Aug 30, 2019 | Team Udayavani |

ಪಿರಿಯಾಪಟ್ಟಣ: ನಟ ಹುಚ್ಚ ವೆಂಕಟ್‌ ಹುಚ್ಚಾಟ ಮುಂದುವರಿದಿದ್ದು, ಪಿರಿಯಾಪಟ್ಟಣ ಹೊರವಲಯ ದಲ್ಲಿರುವ ಚೌಡೇನಹಳ್ಳಿ ಬಳಿ ಪೆಟ್ರೋಲ್‌ ಬಂಕ್‌ನಲ್ಲಿ ಗಲಾಟೆ ನಡೆಸಿದ ಬಗ್ಗೆ ವರದಿಯಾಗಿದೆ. ಗುರುವಾರ ಸಂಜೆ 4ರ ವೇಳೆ ಪೆಟ್ರೋಲ್‌ ಬಂಕ್‌ಗೆ ಬಂದು ಕಾರಿಗೆ ಪೆಟ್ರೋಲ್‌ ಹಾಕಿಸಿಕೊಂಡಿದ್ದಾನೆ. ಈ ವೇಳೆ, ಗ್ರಾಹಕರೊಬ್ಬರ ಬಳಿ ಇದು ಯಾವ ಊರು ಎಂದು ಕೇಳಿದಾಗ ಅವರು, ಇದು ಪಿರಿಯಾಪಟ್ಟಣ ಎಂದರು.

Advertisement

ಇದರಿಂದ ಕೋಪಗೊಂಡ ವೆಂಕಟ್‌, ಆತನ ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಇದು ಪಿರಿಯಾಪಟ್ಟಣ ಅಲ್ಲ, ಕೂರ್ಗ್‌ ಎನ್ನಬೇಕು ತಿಳಿತಾ ಎಂದು ಅವಾಜ್‌ ಹಾಕಿದ್ದಾನೆ. ಬಂಕ್‌ನ ಸಿಬ್ಬಂದಿ ಮಧ್ಯ ಪ್ರವೇಶಿಸಿದಾಗ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ, ಅಲ್ಲಿದ್ದ ಜನರ ಬಳಿ ಟೀ ಕುಡಿಯಲು ದುಡ್ಡು ಕೇಳಿದ್ದಾನೆ. ಕೊಡದಿದ್ದಾಗ ಮತ್ತೆ ರಂಪಾಟ ಮಾಡಿದ್ದಾನೆ. ಸ್ಥಳೀಯರು ಈತನನ್ನು ಸಮಾಧಾನಪಡಿಸಿ ಅಲ್ಲಿಂದ ಕಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next