Advertisement

ಹುಬ್ಬಳ್ಳಿ -ಸೊಲ್ಲಾಪುರ ಹೆದ್ದಾರಿ ತಾತ್ಕಾಲಿಕ ದುರಸ್ತಿ

11:21 AM Oct 26, 2019 | Team Udayavani |

ಕುಳಗೇರಿ ಕ್ರಾಸ್‌: ಮಲಪ್ರಭಾ ಪ್ರವಾಹಕ್ಕೆ ಕಿತ್ತು ಹೋಗಿದ್ದ ರಾಷ್ಟ್ರೀಯ ಹೆದ್ದಾರಿ-218 ತಾತ್ಕಾಲಿಕ ದುರಸ್ತಿ ಮಾಡಲಾಗಿದ್ದು, ಸದ್ಯ ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿ ಸಂಚಾರಕ್ಕೆಮುಕ್ತವಾಗಿದೆ.

Advertisement

ಮಲಪ್ರಭಾ ಪ್ರವಾಹಕ್ಕೆ ಕಿತ್ತು ಹೋಗಿದ್ದ ರಸ್ತೆಗೆ ಕಲ್ಲು-ಮಣ್ಣು ಹಾಕಿ ಸಮ ಮಾಡಿ ತಾತ್ಕಾಲಿಕ ದುರಸ್ತಿ ಮಾಡಿದ್ದು, ಎಲ್ಲ ತರಹದ ವಾಹನಗಳು ಓಡಾಡುತ್ತಿವೆ. ಇದು ನಮಗೆ ಬರಿ 6 ತಾಸಿನ ಕೆಲಸ. ಜಿಟಿ-ಜಿಟಿ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿಗೆ ಬಾರಿ ತೊಂದರೆಯಾಗುತ್ತಿದೆ. ರಸ್ತೆ ತಾತ್ಕಾಲಿಕ ದುರಸ್ತಿ ಮಾಡಿದ್ದು ಮಳೆ ನೀರಿಗೆ ರಸ್ತೆ ಕುಸಿಯಬಹುದು. ಅದಕ್ಕಾಗಿ ಎಲ್ಲ ವಾಹನಗಳನ್ನ ಮುಂದೆ ನಿಂತು ದಾಟಿಸುತ್ತಿದ್ದೇವೆ. ಸದ್ಯದಲ್ಲಿ ಶಾಶ್ವತ ಪರಿಹಾರ  ಮಾಡುತ್ತೇವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.

ಟ್ರಾಫಿಕ್‌ ಸಮಸ್ಯೆ: ಹೆದ್ದಾರಿ ರಸ್ತೆ ದುರಸ್ತಿ ಕಾರ್ಯ ಮಾಡಿದ ಬೆನ್ನಲ್ಲೇ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆಗೆ ಹಾಕಿದ ಮಣ್ಣು ಮಳೆನೀರಿಗೆ ಕುಸಿಯುತ್ತಿದೆ. ದೊಡ್ಡ ವಾಹನಗಳಿಗೆ ಪ್ರವೇಶ ನೀಡಿದ್ದರಿಂದ ಓಡಾಡುವ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಮಲಪ್ರಭಾ ಪ್ರವಾಹಕ್ಕೆ ಸೇತುವೆ ಸೇರಿದಂತೆ ಹೆದ್ದಾರಿ ಬಾರಿ ಪ್ರಮಾಣದಲ್ಲಿ ನಾಶವಾಗಿದ್ದು, ಪ್ರಯಾಣಿಕರು ವಾಹನ ಸವಾರರು ಪ್ರಾಣ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರ್‍ನಾಲ್ಕು ಸೇತುವೆ ಬಿರುಕು ಬಿಟ್ಟಿದ್ದು, ಸದ್ಯ ಮಾಡಿದ ತಾತ್ಕಾಲಿಕ ದುರಸ್ತಿ ಕಾರ್ಯ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next