Advertisement

Hubli; ವಿದ್ಯಾರ್ಥಿನಿಗೆ ನೆರವು ನೀಡಿದ ಕ್ರಿಕೆಟಿಗ ಕೆ.ಎಲ್‌.ರಾಹುಲ್‌

03:39 PM Oct 08, 2023 | Team Udayavani |

ಹುಬ್ಬಳ್ಳಿ: ಸುಡುಗಾಡು ಸಿದ್ದರ ಕುಟುಂಬದ ಬಾಲೆಯ ವಿದ್ಯಾಭ್ಯಾಸಕ್ಕೆ ಕ್ರಿಕೆಟಿಗ ಕೆ. ಎಲ್‌.ರಾಹುಲ್‌ ನೆರವಿನ ಹಸ್ತ ಚಾಚಿದ್ದಾರೆ. ಅಲೆಮಾರಿ ಜೀವನ ನಡೆಸಿಕೊಂಡು ಬದುಕು ನಡೆಸುವ ಬಡ ಕುಟುಂಬದ ಸೃಷ್ಟಿ ಕುಲಾವಿ ಎಂಬ ವಿದ್ಯಾರ್ಥಿನಿ ಭವಿಷ್ಯದಲ್ಲಿ ವೈದ್ಯೆ ಆಗಬೇಕೆಂಬ ಆಸೆ ಹೊಂದಿದ್ದು, ಆಕೆಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ದೊರೆತಿದೆ.

Advertisement

ಧಾರವಾಡ ಸಿದ್ದೇಶ್ವರ ಕಾಲೋನಿ ವಾಸಿಯಾಗಿ ರುವ ಹನುಮಂತಪ್ಪ -ಸುಮಿತ್ರಾ ದಂಪತಿಯ ಮಗಳು ಸೃಷ್ಟಿ ಕುಲಾವಿ ಬಡತನ ಕಾರಣ ಶಿಕ್ಷಣದಿಂದ ವಂಚಿತವಾ ಗುವ ಹಾಗೆ ಆಗಿತ್ತು. ಮಾಹಿತಿ ತಿಳಿದ ಬಿಜೆಪಿ ಮುಖಂಡ ಮಂಜುನಾಥ ಹೆಬಸೂರು ಅವರು, ನೆರವಿಗಾಗಿ ಕ್ರಿಕೆಟಿಗ ರಾಹುಲ್‌ ಅವರನ್ನು ಸಂಪರ್ಕಿಸಿದ್ದರು.

ಇದನ್ನೂ ಓದಿ:Karnataka Politics; ಸೋಮಶೇಖರ್ ಪಕ್ಷ ಬಿಡುವುದಾದರೆ ವಿರೋಧವಿಲ್ಲ: ಸಿಪಿ ಯೋಗೇಶ್ವರ್

1996ರಲ್ಲಿ ದೀಪಕ ಗಾಂವ್ಕರ್‌ ಹಾಗೂ ಅನಿತಾ ಗಾಂವ್ಕರ್‌ ನೇತೃತ್ವದಲ್ಲಿ ಪ್ರಾರಂಭವಾದ ದಿ ಗ್ಲೋಬಲ್‌ ಎಕ್ಸಲೆಂಟ್ ಶಾಲೆಯಲ್ಲಿ ಸೃಷ್ಟಿ ವ್ಯಾಸಂಗ ಮಾಡಲಿದ್ದಾರೆ. ರಾಹುಲ್‌ ನೆರವು ನೀಡಿರುವುದು ನಮ್ಮ ಶಾಲೆ ಹಾಗೂ ನಮಗೂ ಹೆಮ್ಮೆ ಎಂದು ಶಾಲೆಯ ಪ್ರಾಂಶುಪಾಲ ಮಾಲಾಶ್ರೀ ನಯ್ಯರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next