Advertisement

ಹುಬ್ಬಳ್ಳಿಯಲ್ಲಿ ಗುಂಪು ಘರ್ಷಣೆ:ಇರಿತಕ್ಕೊಳಗಾಗಿದ್ದ ಯುವಕ ಸಾವು 

11:02 AM Mar 26, 2018 | Team Udayavani |

ಹುಬ್ಬಳ್ಳಿ: ಡಿಜೆ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ಗಂಭೀರವಾಗಿ ಇರಿತಕ್ಕೊಳಗಾಗಿದ್ದ ಯುವಕನೊಬ್ಬ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ ಕಳವಳಕಾರಿ ಘಟನೆ ಇಸ್ಲಾಂಪುರದ ಗೌಸಿಯಾ ಟೌನ್‌ನಲ್ಲಿ ನಡೆದಿದೆ. 

Advertisement

ಹತ್ಯೆಗೀಡಾದ ಯುವಕ ಗುರುಸಿದ್ದಪ್ಪ ಅಂಬಿಗೇರ(26) ಎನ್ನುವವನಾಗಿದ್ದು, ಘರ್ಷಣೆ ವೇಳೆ ಈತನ ಮೇಲೆ ಚಾಕುವಿನಿಂದ ಬಲವಾಗಿ ಇರಿಯಲಾಗಿತ್ತು. ಕೂಡಲೇ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ. 

ಕಸಬಾ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಇಫ್ತಾಕ್ ಕಾಲವಾಡ, ಅಸ್ಲಂ ಕಾಲವಾಡ ಮತ್ತು ಸಹೋದರರು ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next