Advertisement

ಆಗಸ್ಟ್‌ನಿಂದ ಹುಬ್ಬಳ್ಳಿ-ಬೆಂಗಳೂರು ವಿಮಾನ ಸಂಚಾರ

12:31 PM Jul 26, 2017 | Team Udayavani |

ಹುಬ್ಬಳ್ಳಿ: ಆಗಸ್ಟ್‌ ಮೊದಲ ವಾರದಿಂದ ಹುಬ್ಬಳ್ಳಿ-ಬೆಂಗಳೂರು ಪ್ರತಿದಿನ ಏರ್‌ ಇಂಡಿಯಾ ವಿಮಾನ ಸಂಚಾರಕ್ಕೆ ಏರ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಶ್ವಿ‌ನ್‌ ಲೋಹಾನಿ ಹೇಳಿದ್ದಾರೆಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. 

Advertisement

ಏರ್‌ ಇಂಡಿಯಾ ಮುಖ್ಯ ಕಚೇರಿಯಲ್ಲಿ ಮಂಗಳವಾರ ಸಂಸದ ಪ್ರಹ್ಲಾದ ಜೋಶಿ ಹಾಗೂ ವಿಧಾನಸಭೆ ವಿರೋಧ  ಪಕ್ಷದ ನಾಯಕ ಜಗದೀಶ ಶೆಟ್ಟರ ಅವರೊಂದಿಗೆ ಎಂ.ಡಿ. ಅಶ್ವಿ‌ನ್‌ ಅವರನ್ನು ಭೇಟಿಯಾಗಿ ಬೆಂಗಳೂರು-ಹುಬ್ಬಳ್ಳಿ ಏರ್‌ ಇಂಡಿಯಾ ವಿಮಾನವು ಪ್ರತಿದಿನ ಹಾರಾಟ  ನಡೆಸುವಂತೆ ಆಗ್ರಹಿಸಲಾಯಿತು. 

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಂಡಿ ಲೋಹಾನಿ, ಆಗಸ್ಟ್‌ ಮೊದಲ ವಾರದಿಂದ ಬೆಂಗಳೂರು-ಹುಬ್ಬಳ್ಳಿ ಪ್ರತಿದಿನ ಹಾರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ. ಇದರಿಂದ ಬಹುದಿನಗಳ ನಮ್ಮ ಒತ್ತಾಸೆಯಾದ ಪ್ರತಿದಿನ ರಾಜಧಾನಿಯೊಂದಿಗೆ ವಾಯು ಸಂಪರ್ಕ ಕಲ್ಪಿಸುವ ಕಾರ್ಯ ಕೈಗೂಡಿದಂತಾಗಿದೆ. 

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಬೋಯಿಂಗ್‌ ವಿಮಾನಗಳ ಹಾರಾಟಕ್ಕೆ ಯೋಗ್ಯವಾದ ರನ್‌ವೇ ನಿರ್ಮಿಸಿದ್ದು, ಇದು ಬೋಯಿಂಗ್‌ ವಿಮಾನಗಳ ಹಾರಾಟಕ್ಕೆ ಯೋಗ್ಯವಾಗಿದೆಯೆಂದು ಎಂಡಿಯವರಿಗೆ ವಿವರಿಸಲಾಯಿತು.

ಹುಬ್ಬಳ್ಳಿ-ಮುಂಬೈ ನಡುವೆ ಸಂಪರ್ಕ ಕಲ್ಪಿಸಲು ಬಹುದಿನಗಳ ಒತ್ತಾಯವನ್ನು ಈಡೇರಿಸುವಂತೆ ಈ ವೇಳೆ ಕೋರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಎಂಡಿ ಅಶ್ವಿ‌ನ್‌, ಈ ಮಾರ್ಗ ಮಧ್ಯ ವಿಮಾನ ಹಾರಾಟಕ್ಕೆ ಪೂರ್ವಭಾವಿಯಾಗಿ ಕೈಗೊಳ್ಳಬೇಕಾದ ತಾಂತ್ರಿಕ ಹಾಗೂ ವೇಳಾಪಟ್ಟಿ ಹೊಂದಾಣಿಕೆ ಕಾರ್ಯ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿದರು.

Advertisement

ಇದೊಂದು ಉತ್ತಮ ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಕೆಲವೇ ದಿನಗಳಲ್ಲಿ ಹುಬ್ಬಳ್ಳಿ, ಮುಂಬೈ ನಗರದೊಂದಿಗೆ ವಾಯು ಸಂಪರ್ಕ ಹೊಂದಲಿದೆಂದು ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next