Advertisement

ಕಾಯಿಪಲ್ಲೆ ವ್ಯಾಪಾರಕ್ಕೆ ಸಮಯ ಮಿತಿ ಆಘಾತ

05:09 PM May 01, 2021 | Team Udayavani |

ವರದಿ: ಶಶಿಧರ್‌ ಬುದ್ನಿ

Advertisement

ಧಾರವಾಡ: ದಿನವಿಡೀ ಕುಳಿತು ಕಾಯಿಪಲ್ಲೆ-ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿ ಇದೀಗ ದಿನದ ನಾಲ್ಕು ತಾಸಿನಲ್ಲಿ ಮಾರಾಟ ಮಾಡಬೇಕು. ಇದರಿಂದ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದೆ. ನಿರೀಕ್ಷಿತ ಲಾಭ ಗಳಿಕೆಗೆ ಕೊರೊನಾ ಕರ್ಫ್ಯೂ ವಿಧಿಸಿರುವ ಸೀಮಿತ ಸಮಯ ಹೊಡೆತ ನೀಡಿದ್ದು, ರೈತರಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.

ಕೊರೊನಾ ಕರ್ಫ್ಯೂವಿನ ಮಾರ್ಗಸೂಚಿಯನ್ವಯ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಸೀಮಿತ ಅವಧಿಯ “ಪರಿಣಾಮ’ ಕಾಯಿಪಲ್ಲೆ ಬೆಳೆದ ರೈತರು ಹಾಗೂ ಹೋಲ್‌ಸೆಲ್‌ ವ್ಯಾಪಾರಸ್ಥರಿಗಿಂತ ರಿಟೇಲ್‌ ವ್ಯಾಪಾರಸ್ಥರು ಹಾಗೂ ಗ್ರಾಹಕರ ಮೇಲಾಗಿದೆ. ಹೀಗಾಗಿ ಈ ಅವಧಿ ಒಂದೆರಡು ಗಂಟೆ ಹೆಚ್ಚಳ ಮಾಡಬೇಕೆಂಬುದು ರಿಟೇಲ್‌ ವ್ಯಾಪಾರಸ್ಥರ ಬೇಡಿಕೆ.

ಜಿಲ್ಲೆಯಲ್ಲಿ ಐದು ಎಪಿಎಂಸಿಗಳಿದ್ದು, ಈ ಪೈಕಿ ಧಾರವಾಡ ಹಾಗೂ ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿ ಅಷ್ಟೇ ಹೋಲ್‌ ಸೇಲ್‌ ಕಾಯಿಪಲ್ಲೆ ಮಾರುಕಟ್ಟೆ ಇದೆ. ಇಲ್ಲಿ ಶುಕ್ರವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 6ರಿಂದ 11 ಗಂಟೆ ವರೆಗೆ ವ್ಯಾಪಾರ-ವಹಿವಾಟು ನಡೆದುಕೊಂಡು ಬಂದಿದೆ. ಇದೀಗ ಕೊರೊನಾ ಕರ್ಫ್ಯೂ ಮಾರ್ಗಸೂಚಿ ಅನ್ವಯ ಎಪಿಎಂಸಿ ಆವರಣದಲ್ಲಿ ಬೆಳಗ್ಗೆ 10 ಗಂಟೆವರೆಗೆ ಅಷ್ಟೇ ಹೋಲ್‌ಸೇಲ್‌ ಕಾಯಿಪಲ್ಲೆ ವ್ಯಾಪಾರಕ್ಕೆ ಅವಕಾಶ ನೀಡಿದ್ದು, ಒಂದು ತಾಸಿನ ಸಮಯ ಕಡಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next