Advertisement

ನಿಜಾಮರಿಗೆ ಸಡ್ಡು ಹೊಡೆದು ಧ್ವಜಾರೋಹಣ!

04:09 PM Aug 15, 2021 | Team Udayavani |

ಹುಬ್ಬಳ್ಳಿ: ಖಾದಿ ಬಟ್ಟೆ ತೊಡಬೇಕು, ತ್ರಿವರ್ಣ ಧ್ವಜಹಾರಿಸಬೇಕು, ದೇಶದ ಬಗ್ಗೆ ಸದಾ ಕಳಕಳಿ ಇರಬೇಕುಎಂದು 1938ರಲ್ಲಿ ಬಾಣಾಪುರ ರೈಲ್ವೆ ನಿಲ್ದಾಣಕ್ಕೆಆಗಮಿಸಿದ್ದ ಮಹಾತ್ಮಾ ಗಾಂಧೀಜಿ ವೇಳೆ ಹೇಳಿದ್ದಮಾತುಗಳು 8-10 ವರ್ಷದವನಿದ್ದ ನನ್ನ ಮೇಲೆಬಹಳಷ್ಟು ಪರಿಣಾಮ ಬೀರಿದವು ಎನ್ನುತ್ತಾರೆ ಕೊಪ್ಪಳಜಿಲ್ಲೆ ಬಿಸರಳ್ಳಿ ಗ್ರಾಮದ ಸ್ವಾತಂತ್ರ್ಯಯೋಧ, 94ವರ್ಷದ ಶರಣ ಬಸವರಾಜ ವೀರಬಸಪ್ಪ ಬಿಸರಳ್ಳಿ.

Advertisement

75ನೇ ಸ್ವಾತಂತೋÅÂತ್ಸವದ ಈ ಸಂಭ್ರಮದಲ್ಲಿಸ್ವಾತಂತ್ರÂ ಚಳವಳಿಗೆ ಪ್ರೇರಣೆ, ಗಾಂಧೀಜಿ ಕಂಡಿದ್ದು,ರಾಷ್ಟ್ರಧ್ವಜಾರೋಹಣಕ್ಕಾಗಿ ಕೋರ್ಟ್‌ನಲ್ಲಿ ಕ್ಷಮೆಕೇಳದೆ ಕಪಾಳಮೋಕ್ಷಕ್ಕೆ ಗುರಿಯಾಗಿದ್ದರೂಕುಗ್ಗದ ದೇಶಪ್ರೇಮ ಕುರಿತಾಗಿ ಅವರು”ಉದಯವಾಣಿ’ಯೊಂದಿಗೆ ತಮ್ಮ ಮನದಾಳದಮಾತುಗಳನ್ನು ಹಂಚಿಕೊಂಡರು.

1940ರಲ್ಲಿ ನಾವು ಸ್ವಾತಂತ್ರÂ ಚಳವಳಿಯಲ್ಲಿಧುಮುಕಿದೆವು. 1947ರಲ್ಲಿ ದೇಶಕ್ಕೆ ಸ್ವಾತಂತ್ರÂ ಸಿಕ್ಕಿತು.ಇಡೀ ದೇಶದಲ್ಲಿ ತ್ರಿವರ್ಣ ಧ್ವಜ ಏರಿಸಲಾಯಿತು.ಆದರೆ ಹೈದರಾಬಾದ್‌ನಲ್ಲಿ ನಿಜಾಮರು ನಾವುಪಾಕಿಸ್ತಾನ ಸೇರುತ್ತೇವೆ. ಇಲ್ಲಿ ತಿರಂಗ ಧ್ವಜಹಾರಿಸಬಾರದು. ಒಂದೇ ಮಾತರಂ ಹೇಳಬಾರದು.ಕಲೆಕ್ಟರ್‌ ಕಚೇರಿ ಮೇಲೆ ಯಾರು ಧ್ವಜ ಹಾರಿಸುತ್ತಾರೋಅವರಿಗೆ ಮರಣ ದಂಡನೆ ನೀಡಲಾಗುವುದುಎಂದು ಪ್ರಕಟಿಸಿದರು.

ಆದರೆ ನಾನು ಹಿಂಜರಿಯದೆ14ರಂದು ರಾತ್ರಿ ನನ್ನ ಸ್ನೇಹಿತ ಬಸವರಾಜ ಜತೆ ಸೇರಿಕಲೆಕ್ಟರ್‌ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದೆ.16ರಂದು ಪೊಲೀಸರು ಮನೆಗೆ ಬಂದು ಕೇಳಿದಾಗನಾನೇ ಹಾರಿಸಿದ್ದೇನೆಂದು ಹಿಂಜರಿಯದೆ ಹೇಳಿದೆ.ಹೊಡೆದು ಜೈಲಿಗೆ ಹಾಕಿದರು. ಮುಸ್ಲಿಂ ಜಡ್ಜ್ ಅವರುಕ್ಷಮಾ ಮಾಂಗೋ, ಮೈ ಮಾಪ್‌ ಖರ್ತಾ ಹೂ (ಕ್ಷಮೆಕೇಳು. ನಿನಗೆ ಕ್ಷಮೆ ಮಾಡುವೆ) ಎಂದರು. ಇಡೀದೇಶದಲ್ಲಿ ಧ್ವಜ ಹಾರಿಸಿದಾಗ ನಮ್ಮ ರಾಜ್ಯದಲ್ಲಿ ನಾವೇಕೆಹಾರಿಸಬಾರದು ಎಂದೇ.

ಇದು ನಿಮ್ಮ ರಾಜ್ಯವಲ್ಲ.ಹೈದರಾಬಾದ್‌ ರಾಜ್ಯ ಪಾಕಿಸ್ತಾನಕ್ಕೆ ಹೋಗುತ್ತದೆಎಂದು ಎದ್ದು ಬಂದು ಕಪಾಳಕ್ಕೆ ಹೊಡೆದರು. ಅದಕ್ಕೆನಾನು ಹೆದರದೆ ಕ್ಷಮಾ ಪತ್ರ ಬರೆದು ಕೊಡಲಿಲ್ಲ. ಆಗಕಠಿಣ ಶಿಕ್ಷೆ ಕೊಟ್ಟು ಜೈಲಿಗೆ ಕಳುಹಿಸಿದರು.ಕಠಿಣ ಶಿಕ್ಷೆಯ ನಂತರ ನಾನು ಮತ್ತು ಪಂಚಯ್ಯಗದಗ ಕಾಂಗ್ರೆಸ್‌ ಕಚೇರಿಗೆ ಬಂದಾಗ ಅಲ್ಲಿದ್ದವರುಶಿಬಿರದ ಗೌಪ್ಯವನ್ನು ಪ್ರಾಣ ಹೋದರೂ ಹೇಳಲ್ಲ.ಪರಸ್ತ್ರಿ ಮುಟ್ಟಲ್ಲ. ಯಾವುದೇ ಸರಕಾರದ ವಸ್ತುಸಿಕ್ಕರೆ ಅದನ್ನು ಕಚೇರಿಗೆ ಬಂದು ಮುಟ್ಟಿಸುತ್ತೇನೆಂದುಬರೆದು, ಎಡಗೈ ಹೆಬ್ಬೆಟ್ಟಿನಿಂದ ರಕ್ತದಲ್ಲಿ ಸಹಿ ಪಡೆದರು.ನಂತರ ಸಿಂದಗಿ ಶರಣಗೌಡರ ಶಿಬಿರಕ್ಕೆ ಕಳುಹಿಸಿದರು.ಸುಭಾಷಚಂದ್ರ ಅವರ ಶಿಷ್ಯ ನಾನಾಪಾಟೀಲ ಬಳಿಒಂದು ತಿಂಗಳ ಕಾಲ ಬಂದೂಕು ತರಬೇತಿ ಪಡೆದೆ.ನಂತರ ಕಕ್ಕಳಮೇಲ ಬಾರ್ಡರ್‌ಗೆ ಕಳುಹಿಸಿದರು.

Advertisement

ಅಲ್ಲಿಪಠಾಣರು ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದರು.ಅವರ ಮೇಲೆ ನಾವು ದಾಳಿ ಮಾಡಿ ರಕ್ಷಿಸಿದೆವು.1947ರ ಸೆಪ್ಟಂಬರ್‌ 13ರಂದು ರಾತ್ರಿ ನಿಜಾಮಸರಕಾರ ಎಲ್ಲ ಹಿಂದೂಗಳು ಮುಸ್ಲಿಂರಾಗಬೇಕು.ಇಲ್ಲವಾದರೆ ಸಾರ್ವತ್ರಿಕ ಮರಣ ದಂಡನೆನೀಡಲಾಗುವುದು ಎಂದು ಘೋಷಿಸಿತು.ವಲ್ಲಭಬಾಯಿ ಪಟೇಲರು ಹೈದರಾಬಾದ್‌ಗೆಸೈನ್ಯ ಕಳುಹಿಸಿ ದಾಳಿ ಮಾಡಿಸಿದರು. ಭಾರತಕ್ಕೆ1947ರ ಆಗಸ್ಟ್‌ 15ರಂದೇ ಸ್ವಾತಂತ್ರ ಸಿಕ್ಕಿದ್ದರೂಹೈದರಾಬಾದ್‌ನಲ್ಲಿ ನಿಜಾಮರ ಆಡಳಿತದಿಂದಸ್ವಾತಂತ್ರÂವಿರಲಿಲ್ಲ. ಬಹಳ ಹೋರಾಟದ ಫಲವಾಗಿಸೆಪ್ಟಂಬರ್‌ 17ಕ್ಕೆ ಅಲ್ಲಿ ಸ್ವಾತಂತ್ರÂ ದೊರೆಯಿತು.ಮುಂದೆ ಅಳವಂಡಿ ಶಿವಮೂರ್ತಿ ಸ್ವಾಮಿಗಳಹೋರಾಟದಿಂದ ಆಂಧ್ರಕ್ಕೆ ಹೋಗುತ್ತಿದ್ದಬಳ್ಳಾರಿಯನ್ನು ರಾಜ್ಯಕ್ಕೆ ಉಳಿಸಲಾಯಿತು. ಕರ್ನಾಟಕಏಕೀಕರಣಕ್ಕೆ ಹೋರಾಟ ಮಾಡಲಾಯಿತು.ನಂತರ ಶಿವಶಾಂತವೀರ ಸ್ವಾಮಿಗಳ ಅಪ್ಪಣೆಯಂತೆಎಫ್‌ಡಿಸಿ ಪೋಸ್ಟ್‌ ಬಿಟ್ಟು ಶಿಕ್ಷಕನಾದೆ ಎಂದುಸ್ವಾತಂತ್ರÂಯೋಧ ಶರಣಬಸವರಾಜ ವೀರಬಸಪ್ಪಬಿಸರಳ್ಳಿ ಹೇಳುತ್ತಾರೆ.

ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next