Advertisement

ಹು-ಧಾ: ಮೇಯರ್ ಸ್ಥಾನಕ್ಕೆ ವೀಣಾ ಬರದ್ವಾಡ, ಉ.ಮೇಯರ್ ಸ್ಥಾನಕ್ಕೆ ಸತೀಶ ಹಾನಗಲ್ ಬಹುತೇಕ ಖಚಿತ

11:03 AM Jun 20, 2023 | Team Udayavani |

ಧಾರವಾಡ: ತೀವ್ರ ಕುತೂಹಲ ಕೆರಳಿಸಿರುವ ಹು-ಧಾ ಮಹಾನಗರ ಪಾಲಿಕೆ ಮಹಾಪೌರ, ಉಪಮಹಾಪೌರ ಸ್ಥಾನ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಿಜೆಪಿ ಸದಸ್ಯರು ದಾಂಡೇಲಿ ರೆಸಾರ್ಟ್ ನಿಂದ ಧಾರವಾಡಕ್ಕೆ ಆಗಮಿಸಿದ್ದಾರೆ.

Advertisement

ಒಟ್ಟು 39 ಜನ ಬಿಜೆಪಿ ಪಾಲಿಕೆ ಸದಸ್ಯರು ಒಂದೇ ಬಸ್ ನಲ್ಲಿ ನೇರವಾಗಿ ಮಂದಾರ ಹೊಟೇಲ್ ಗೆ ಆಗಮಿಸಿದರು.

ಮಂದಾರ ಸಭಾಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ನಿಗೂಢ ಕಲೆಗಳ ಅಭ್ಯಾಸ ಶಂಕೆ: ದಂಪತಿಯನ್ನು ಮರಕ್ಕೆ ನೇತು ಹಾಕಿ ಬೆತ್ತದಿಂದ ಹೊಡೆದ ಗ್ರಾಮಸ್ಥರು

ವೀಣಾ ಬರದ್ವಾಡ ಅವರು ಮೇಯರ್ ಸ್ಥಾನಕ್ಕೆ, ಸತೀಶ ಹಾನಗಲ್ ಉಪ ಮೇಯರ್ ಸ್ಥಾನಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Advertisement

ಇದೀಗ ಮೇಯರ್, ಉಪ‌ಮೇಯರ್ ಎರಡು ಸ್ಥಾನಗಳು ಹುಬ್ಬಳ್ಳಿಗೆ ಒಲಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next