Advertisement

ಜೀವಸಾರವನ್ನು ಬಳಸುವ ಬಗೆ

11:46 AM Aug 20, 2019 | Sriram |

ಸಸ್ಯಗಳು ಘನರೂಪದ ಗೊಬ್ಬರಕ್ಕಿಂತಲೂ ದ್ರವರೂಪದ ಗೊಬ್ಬರಗಳಿಗೆ ತ್ವರಿತವಾಗಿ ಸ್ಪಂದಿಸುತ್ತವೆ. ಇಂಥ ಗೊಬ್ಬರವನ್ನು ನಿಯಮಿತವಾಗಿ ಪೂರೈಸುವುದು ದುಬಾರಿ ಖರ್ಚಲ್ಲ. ಮುಖ್ಯವಾಗಿ ಇದು ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಪೂರಕ. ಹನಿ ನೀರಾವರಿ ವಿಧಾನದ ಮೂಲಕವೂ ನೀಡಬಹುದು. ಇದರಿಂದ ಗಿಡಗಳ ಬೆಳವಣಿಗೆ, ಹೂ, ಕಾಯಿ ಬಿಡುವ ಪ್ರಮಾಣ, ಗಾತ್ರ ಅತ್ಯುತ್ತಮವಾಗಿರುತ್ತದೆ. ಇವೆಲ್ಲದರ ಜೊತೆಗೆ ಕೀಟ- ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

Advertisement

ತೋಟದ ವಿಸ್ತೀರ್ಣಕ್ಕೆ ತಕ್ಕಂತೆ ಜೀವಸಾರ ಅಥವಾ ಬಯೋಡೈಜೆಸ್ಟರ್‌ ಗಾತ್ರವನ್ನೂ ನಿರ್ಮಿಸಿಕೊಳ್ಳಬಹುದು. ತೋಟದಲ್ಲಿಯೇ ತುಸು ಎತ್ತರ ಇರುವ ಜಾಗದಲ್ಲಿ ಇದನ್ನು ನಿರ್ಮಿಸುವುದು ಸೂಕ್ತ. ಇದರಿಂದ ಜೀವಸಾರ ಹಾಯಿಸುವಿಕೆಯೂ ಸರಾಗವಾಗಿರುತ್ತದೆ. ಎರಡು ಎಕರೆ ತೋಟವಿದ್ದರೆ 8 ಅಡಿ ಅಗಲ, ನಾಲ್ಕು ಅಡಿ, ಉದ್ದ, ಮೂರಡಿ ಆಳ ಇರುವ ತೊಟ್ಟಿ ನಿರ್ಮಿಸಿಕೊಂಡರೂ ಸಾಕು. ಮಾರುಕಟ್ಟೆಯಲ್ಲಿ ಸಿದ್ಧ ಮಾದರಿ ಬಯೋಡೈಜೆಸ್ಟರ್‌ ತೊಟ್ಟಿಗಳು ಸಿಗುತ್ತಿವೆ. ಕೃಷಿಕರಿಗೆ ಯಾವುದು ಅನುಕೂಲ ಎನ್ನಿಸುತ್ತದೆಯೋ ಅದರ ಬಳಕೆ ಮಾಡಬಹುದು.

ತೊಟ್ಟಿಗೆ ಹಾನಿಕಾರಕವಲ್ಲದ ಯಾವುದೇ ಸಸ್ಯಗಳನ್ನಾದರೂ ಹಾಕಬಹುದು. ಲಕ್ಕಿ ಸೊಪ್ಪು, ಹೊಂಗೆ ಸೊಪ್ಪು, ಬೇವಿನ ಸೊಪ್ಪು, ಯಾವುದೇ ಥರದ ಹಿಂಡಿಗಳು, ರಾಸುಗಳ ಸೆಗಣಿ, ಆಡು- ಕುರಿಗಳ ಹಿಕ್ಕೆ, ಗಂಜಲ, ಮೀನಿನ ಗೊಬ್ಬರ ಹಾಕಿ ನೀರು ಹಾಯಿಸಬೇಕು. ಇವೆಲ್ಲ ಸಂಪೂರ್ಣವಾಗಿ ಕೊಳೆಯಲು 40ರಿಂದ 45 ದಿನ ಸಾಕು. ಈ ಅವಧಿಯಲ್ಲಿ ಆಗಾಗ ದೊಡ್ಡ ಕೋಲಿನಿಂದ ತೊಟ್ಟಿಯ ನೀರನ್ನು ಕದಡುತ್ತಿರಬೇಕು.
ತೊಟ್ಟಿಯ ತಳದಲ್ಲಿ ಜಾಲರಿ ಇರುವ ರಂಧ್ರ ನಿರ್ಮಿಸಿದ್ದರೆ ಅದರ ಮೂಲಕ ಕಸ ಕಡ್ಡಿಯಿಲ್ಲದ ಸಾರವನ್ನು ಹೊರಬಿಡಬಹುದು. ಬೆಳೆಗಳಿಗೆ ಜೀವಸಾರವನ್ನು ನೇರವಾಗಿ ಹಾಯಿಸಬಾರದು. ಒಂದು ಲೀಟರ್‌ ಜೀವಸಾರಕ್ಕೆ 9 ಅಥವಾ 10 ಲೀಟರ್‌ ಪ್ರಮಾಣದಲ್ಲಿ ನೀರು ಬೆರೆಸಬೇಕು. ಇದನ್ನು ಚೆನ್ನಾಗಿ ಕದಡಿ, ಅಗತ್ಯವಿದ್ದರೆ ಮತ್ತೂಮ್ಮೆ ಸೋಸಿ, ಹನಿ ನೀರಾವರಿ ವ್ಯವಸ್ಥೆ ಮುಖಾಂತರ ಬೆಳೆಗಳಿಗೆ ನೀಡಬಹುದು. ಜೀವಸಾರ ಪೂರ್ಣವಾಗಿ ಬಳಸಿಕೊಂಡ ನಂತರ ತೊಟ್ಟಿಯ ತಳದಲ್ಲಿ ಉಳಿಯುವ ಕಸವನ್ನು ಕಾಂಪೋಸ್ಟ್ ಗುಂಡಿ ಅಥವಾ ಎರೆಗೊಬ್ಬರದ ತೊಟ್ಟಿಗೆ ಹಾಕಬಹುದು.

– ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next