Advertisement

ಹೋವರ್‌ಕ್ರಾಫ್ಟ್ ವೇಗದ ಸಂಚಾರ; ನಾಡದೋಣಿಗಳಿಗೆ ಆತಂಕ!

06:44 PM Dec 22, 2021 | Team Udayavani |

ಬೆಂಗ್ರೆ: ಕರಾವಳಿ ರಕ್ಷಣೆಯ ಹೊಣೆ ಹೊತ್ತಿರುವ ಕೋಸ್ಟ್‌ ಗಾರ್ಡ್‌ಗೆ ಸಂಬಂಧಿಸಿದ “ಹೋವರ್‌ ಕ್ರಾಫ್ಟ್’ ವೇಗವಾಗಿ ಫಲ್ಗುಣಿ ನದಿಯಲ್ಲಿ ಸಂಚರಿಸುವ ಕಾರಣ ಮಂಗಳೂರಿನ ನಾಡದೋಣಿಗಳು ಸಂಕಷ್ಟ ಎದುರಿಸುತ್ತಿದೆ!
ರಕ್ಷಣೆಯ ದೃಷ್ಟಿಯಿಂದ ಹೋವರ್‌ಕ್ರಾಫ್ಟ್ ಕೆಲವು ಸಂದರ್ಭ ಫಲ್ಗುಣಿ ನದಿಯಲ್ಲಿ ವೇಗವಾಗಿ ಸಂಚರಿಸುತ್ತದೆ. ಈ ವೇಳೆ ನೀರಿನ ಏರಿಳಿತ ಉಂಟಾಗಿ ನದಿಯ ಬದಿಯಲ್ಲಿ ಲಂಗರು ಹಾಕಿದ್ದ ನಾಡದೋಣಿಗಳು ಕೂಡ ಏರಿಳಿತ ವಾಗಿ ಒಂದಕ್ಕೊಂದು ಢಿಕ್ಕಿಯಾಗಿ ಹಾನಿಯಾಗುತ್ತಿದೆ ಎಂದು ಬೆಂಗರೆ ಮಹಾಜನ ಸಭಾ ಹಾಗೂ ನಾಡದೋಣಿ ಮಾಲಕರು ದೂರಿದ್ದಾರೆ.

Advertisement

ಭದ್ರತೆಯ ದೃಷ್ಟಿಯಿಂದ ಕರಾವಳಿ ಕಾವಲು ನಡೆಸುತ್ತಿರುವ ಹೋವರ್‌ ಕ್ರಾಫ್ಟ್ ಫಲ್ಗುಣಿ ನದಿಯಲ್ಲಿ ವೇಗವಾಗಿ ಸಂಚರಿಸುವುದರಿಂದ ನೀರಿನಲ್ಲಿ ಉಬ್ಬರ ಇಳಿತ ಉಂಟಾಗಿ ಮೀನುಗಾರಿಕೆ ನಡೆ ಸುವ ನಾಡದೋಣಿಗಳಿಗೆ ಸಮ ಸ್ಯೆಯಾಗುತ್ತಿದೆ. ಜತೆಗೆ ಲಂಗರು ಹಾಕಿದ್ದರೂ ಅಲೆಯ ಏರಿಳಿತದಿಂದ ದೋಣಿಗಳಿಗೆ ಹಾನಿಯಾಗಿದೆ. ಈ ಬಗ್ಗೆ ಕೋಸ್ಟ್‌ಗಾರ್ಡ್‌, ಕರಾವಳಿ ಕಾವಲು ಪೊಲೀಸರ ಗಮನಕ್ಕೆ ಮೀನುಗಾರರು ತಂದಿದ್ದಾರೆ.

“ಸುದಿನ’ ಜತೆಗೆ ಮಾತನಾಡಿದ ಸಾಂಪ್ರದಾಯಿಕ, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅಜಿತ್‌ ಬೆಂಗ್ರೆ ಅವರು, “ನದಿ ಬದಿಯಲ್ಲಿ ನೂರಾರು ನಾಡದೋಣಿಗಳು ಲಂಗರು ಹಾಕಿದ್ದು ಮತ್ತೂ ಹಲವು ಮೀನುಗಾರಿಕೆ ನಡೆಸುತ್ತಿರುತ್ತದೆ. ಈ ವೇಳೆ ಹೋವರ್‌ಕ್ರಾಫ್ಟ್ ವೇಗವಾಗಿ ಸಂಚರಿಸುವಾಗ ನಾಡದೋಣಿಗಳಿಗೆ ಸಮಸ್ಯೆ ಆಗುತ್ತಿದೆ. ಲಂಗರು ಹಾಕಿದ ಬೋಟ್‌ಗಳಿಗೆ ಹಾನಿಯಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ’ ಎಂದರು.ಮಹಾಜನ ಸಭಾ ಮುಖಂಡರಾದ ಕೇಶವ ಅವರ ಪ್ರಕಾರ “ಫಲ್ಗುಣಿ ನದಿ ಯಲ್ಲಿ ಹೋವರ್‌ ಕ್ರಾಫ್ಟ್ ಸಂಚರಿ ಸುವ ವೇಳೆ ಹೋವರ್‌ ಕ್ರಾಫ್ಟ್ನ ವೇಗ ಕಡಿಮೆ ಮಾಡಬೇಕು. ಇಲ್ಲವೇ ಹೋವರ್‌ ಕ್ರಾಫ್ಟ್ ಅನ್ನು ನೇರವಾಗಿ ಸಮುದ್ರದಲ್ಲೇ ಸಂಚರಿಸುವಂತೆ ಮಾಡಬೇಕು’ ಎನ್ನುತ್ತಾರೆ.

ಪ್ರತ್ಯೇಕ ಸಭೆ ನಡೆಸಿ ನಿರ್ಧಾರ
ಹೋವರ್‌ ಕ್ರಾಫ್ಟ್ ಸಮುದ್ರ ಕಣ್ಗಾವಲಿಗೆ ಇರುವಂತಹುದು. ಅದರ ಸಂಚಾರವನ್ನು ಮೊಟಕುಗೊಳಿಸುವುದು ಸಾಧ್ಯವಿಲ್ಲ. ಆದರೆ ಹೋವರ್‌ಕ್ರಾಫ್ಟ್ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ನಾಡದೋಣಿ ಗಳಿಗೆ ಹಾನಿಯಾಗದಂತೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುವ ಮುಖಂಡರು, ಬಂದರು ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು.
– ವೇದವ್ಯಾಸ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next