Advertisement

ಮನೆಗೆ ಬೆಂಕಿ; 5 ಲಕ್ಷ ರೂ. ಸೂತ್ತು ಹಾನಿ

10:35 PM Mar 09, 2023 | Team Udayavani |

ಕೈಕಂಬ: ಗುರುಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾರಮೊಗರು ಹೊಸಮನೆ ದೇವನಂದಿನಿ ಮಾರ್ಲ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು 5 ಲಕ್ಷ ರೂ. ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ.

Advertisement

ಬೆಂಕಿ ಸುಮಾರು ಬೆಳಗ್ಗೆ 9ರ ವೇಳೆಗೆ ತಗಲಿದ್ದು ಮನೆಯಲ್ಲಿ ಯಾರೂ ಇರಲಿಲ್ಲಿ. ಸಮೀಪದ ಮನೆಯವರು ಮನೆಗೆ ಛಾವಣಿಯಲ್ಲಿ ಹೊಗೆ ಬರುವುದನ್ನು ನೋಡಿ ಬೆಂಕಿ ಮನೆಗೆ ತಗಲಿದ್ದು ಗೊತ್ತಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್‌ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಗ್ರಾಮ ಪಂಚಾಯತ್‌ ಅಧ್ಯಕ್ಷ ಯಶವಂತ ಕುಮಾರ್‌ ಶೆಟ್ಟಿ, ಮೆಸ್ಕಾಂ ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ತಗಲಲು ಕಾರಣವೆಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next