Advertisement

ಮಳೆಯಿಂದ ಕುಸಿದ ಮನೆ: ದಂಪತಿ, ಪುತ್ರ ಸಾವು

09:57 AM Oct 07, 2019 | Team Udayavani |

ಬಾಗಲಕೋಟೆ: ರಾತ್ರಿಯಿಡೀ ಸುರಿದ ಮಳೆಗೆ ಮಣ್ಣಿನ ಮನೆ ಕುಸಿದು ಬಿದ್ದ ಪರಿಣಾಮ ದಂಪತಿ ಹಾಗೂ ಪುತ್ರ ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ತಾಲೂಕಿನ ಕಿರಸೂರ ಗ್ರಾಮದಲ್ಲಿ ರವಿವಾರ ಸಂಭವಿಸಿದೆ.

Advertisement

ಕಿರಸೂರ ಗ್ರಾಮದ ಈರಪ್ಪ ಹಡಪದ (60) ಗೌರವ್ವ ಹಡಪದ (55)

ನಿಂಗಪ್ಪ ಹಡಪದ (35) ಮೃತಪಟ್ಟ ದುರ್ದೈವಿಗಳು.

ರಾತ್ರಿ ಮಳೆ ಸುರಿದಿದ್ದರಿಂದ ಮನೆ ಮೇಲ್ಚಾವಣಿ ಕುಸಿದು ಬಿದ್ದಿತ್ತು. ಮನೆಯಲ್ಲಿ ಮಲಗಿದ್ದ ಮೂವರೂ ಮಣ್ಣು, ಕಲ್ಲುಗಳಡಿ ಸಿಲುಕಿ ಮೃತೊಟ್ಟಿದ್ದಾರೆ.

ಮೂವರ ಶವಗಳು ಮಣ್ಣಿನಡಿ ಸಿಲುಕಿದ್ದರಿಂದ ಶವ ಹೊರ ತೆಗೆಯಲು ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು.

Advertisement

ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next