Advertisement

26ರಿಂದ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

03:33 PM Dec 10, 2019 | Team Udayavani |

ರೋಣ: ಬಿಸಿಯೂಟ ನೌಕರರಿಗೆ ಕನಿಷ್ಠ ಮೂಲ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಡಿ. 26ರಂದು ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಮುಖಂಡ ಗಂಗಮ್ಮ ಪೂಜಾರ ತಿಳಿಸಿದರು. ಸೋಮವಾರ ಪಟ್ಟಣದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

Advertisement

ಬಿಸಿಯೂಟ ನೌಕರರು ಕನಿಷ್ಠ ಕೂಲಿ, ಮೂಲ ಸೌಲಭ್ಯಗಳಿಲ್ಲದೆ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೂ ಯಾವುದೇ ಭರವಸೆ ಈಡೇರಿಲ್ಲ. ಕೆಲ ಜಿಲ್ಲೆಗಳಲ್ಲಿ ಯಾವುದೇ ಮಾಹಿತಿಗಳಿಲ್ಲದೆ ಏಕಾಏಕಿ ಇಸ್ಕಾನ್‌ ಅಕ್ಷಯ ಪಾತ್ರೆ ಬಿಸಿಯೂಟ ಕೊಡಲು ಮುಂದಾಗಿರುವುದು ಖಂಡನೀಯ. ಸರ್ಕಾರದ ಈ ನೀತಿ ಖಂಡಿಸಿ ಡಿ. 26ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಬಿಸಿಯೂಟ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಸಿಯೂಟ ನೌಕರರಿಗೆ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆದುಹಾಕುವ ಕ್ರಮ ನಿಲ್ಲಿಸಬೇಕು. ಕನಿಷ್ಠ ವೇತನ, ಡಿ ಗ್ರುಪ್‌ ನೌಕರರೆಂದು ಪರಿಗಣಿಸಬೇಕು. ಜೀವ ವಿಮಾ ಪಾಲಿಸಿ ಸೇರಿದಂತೆ ವಿವಿಧ ಬೇಡಿಕೆ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು. ನಜಿಮಾ ಸೊಟಕನಾಳ, ಪುಷ್ಪಾ ಕೊತಬಾಳ, ಸುಮಿತ್ರಾ ಹಾಳಕೇರಿ, ಉಷಾ ಮಾಂಡ್ರೆ, ಈರವ್ವ ಹೊಸಳ್ಳಿ, ಸುನಂಧಾ ಗಂಟಿ, ಲೀಲಾ ಪತ್ತಾರ ಸೇರಿದಂತೆ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next