Advertisement

ಹೆಚ್ಚುವರಿ ಖಾತೆ ಬಿಟ್ಟುಕೊಡಲು ಸಿಎಂ ಮನೋಹರ್‌ ಪರೀಕರ್‌ ಆಸಕ್ತಿ

05:13 PM Oct 12, 2018 | Team Udayavani |

ಹೊಸದಿಲ್ಲಿ : ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ  ಪ್ರಕೃತ ಪ್ಯಾಂಕ್ರಿಯಾಟಿಕ್‌ ತೊಂದರೆಗೆ ಚಿಕಿತ್ಸೆ ಪಡೆಯುತ್ತಿರುವ ಗೋವೆಯ ಮುಖ್ಯಮಂತ್ರಿ ಮನೋಹರ್‌ ಪರೀಕರ್‌ ಅವರು ದಸರೆಯ ಬಳಿಕ ತಮ್ಮ ಕೈಯಲ್ಲಿನ ಹೆಚ್ಚಿನ ಸಚಿವ ಹೊಣೆಗಾರಿಕೆಯನ್ನು ಮತ್ರಿಕೂಟದ ವಿವಿಧ ಪಕ್ಷಗಳ ಸದಸ್ಯರಿಗೆ ಹಂಚಿ ಕೊಡುವ ನಿರ್ಧಾರ ತಳೆದಿರುವುದಾಗಿ ತಿಳಿದು ಬಂದಿದೆ. 

Advertisement

ಪರೀಕರ್‌ ಸಂಪುಟದ ಕಲವು ಸಚಿವರ ಇಂದು ಅವರನ್ನು ದಿಲ್ಲಿಯ ಆಸ್ಪತ್ರೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ತಮ್ಮಲ್ಲಿನ ವಿವಿಧ ಸಚಿವ ಖಾತೆಗಳನ್ನು ಬಿಜೆಪಿ ಮತ್ತು ಮಿತ್ರಪಕ್ಷದ ಸದಸ್ಯರಿಗೆ ಹಂಚಿಕೊಡುವುದಾಗಿ ಹೇಳಿರುವ ಪರೀಕರ್‌,  ರಾಜ್ಯದ ಉನ್ನತ ನಾಯಕತ್ವದಲ್ಲಿ ಯಾವುದೇ ಬದಲಾವಣೆಯ ಸಾಧ್ಯತೆಯನ್ನು ತಳ್ಳಿ ಹಾಕಿರುವುದಾಗಿ ತಿಳಿದುಬಂದಿದೆ. 

ಪರೀಕರ್‌ ಆಸ್ಪತ್ರೆಯಲ್ಲಿದ್ದುಕೊಂಡೇ ಗೋವೆಯ ಆಡಳಿತೆಯ ಪರಾಮರ್ಶೆ ನಡೆಸಿದರೆಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಶ್ರೀಪಾದ ನಾಯಕ್‌ ಫೋನಿನಲ್ಲಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next