Advertisement

ಕೋವಿಡ್ ಮುಕ್ತ ಭಾರತಕ್ಕಾಗಿ ಹೋಮ

06:54 PM Jun 29, 2020 | Naveen |

ಹೊಸಪೇಟೆ: ದೇಶದಿಂದ ಕೋವಿಡ್ ವೈರಸ್‌ ತೊಲಗಿ, ದೇಶ ಸಮೃದ್ಧಿ ಹೊಂದಲಿ ಎಂದು ಪ್ರಾರ್ಥಿಸಿ, ನಗರದ ಆದಿತ್ಯ ವಿಜಯಂ, ಆಧ್ಯಾತ್ಮಿಕ ವಿಕಸನ ಸಂಸ್ಥೆ ಹಾಗೂ ಗಂಗಾಮತ ಸಮಾಜದ ಸಹಯೋಗದಲ್ಲಿ ಸ್ಥಳೀಯ ಗಾಳೆಮ್ಮ-ಶಂಕ್ರಮ್ಮ ದೇವಸ್ಥಾನದ ಆವರಣದಲ್ಲಿ ಆದಿತ್ಯ ಹಾಗೂ ಧನ್ವಂತರಿ ಹೋಮ ನಡೆಯಿತು.

Advertisement

ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದ ಭಾರತ ಶೀಘ್ರವಾಗಿ ಮುಕ್ತವಾಗಲಿ ಎಂದು ನವಗ್ರಹ ಮಂಡಲ ಸ್ಥಾಪನೆಗೈದು, ವಿಶೇಷ ಪೂಜೆ ನೆರವೇರಿಸಲಾಯಿತು. ಆದಿತ್ಯನು (ಸೂರ್ಯ) ಇಡೀ ಜಗತ್ತಿಗೆ ಬೆಳಕು ನೀಡುವ ಶಕ್ತಿ ಚೇತನವಾಗಿದ್ದು, ಅಲ್ಲಿಂದ ಹೊರ ಹೊಮ್ಮುವ ಕಿರಣಗಳಿಂದ ನೂರಾರು ಸಾಂಕ್ರಾಮಿಕ ರೋಗಾಣುಗಳು ನಾಶವಾಗುತ್ತವೆ ಎಂದು ವೈ. ಯಮುನೇಶ್‌ ತಿಳಿಸಿದರು.

ಆದಿತ್ಯ ವಿಕಸನ ಸಂಸ್ಥೆಯ ಜಗದ್ಗುರು ಬಸವರಾಜ್‌ ಸ್ವಾಮಿ, ವೆಂಕಟೇಶ್‌ ಆಚಾರ್‌, ಪ್ರದೀಪಾಚಾರ್‌, ಹೋಮ-ಹವನ ನೆರವೇರಿಸಿದರು. ಪೃಥ್ವಿರಾಜ್‌ಸಿಂಗ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್‌ ಜೀರೆ, ಆದಿತ್ಯ ವಿಜಯಂ ವಿಕಸನ ಸಂಸ್ಥೆಯ ಸಂಸ್ಥಾಪಕ ಉಮಾಮಹೇಶ್‌, ಮುಖಂಡ ರಾದ ಸಾಲಿಸಿದ್ದಯ್ಯಸ್ವಾಮಿ, ಗಂಗಾಮತ ಸಮಾಜದ ಅಧ್ಯಕ್ಷ ರಾಮನಮಲಿ ಹುಲುಗಪ್ಪ, ಡಾ|ಬಿ. ಗೋವಿಂದರಾಜ್‌, ಡಾ| ಕೆ.ಲಕ್ಷ್ಮಣ, ಮಂಜುನಾಥ ಭಂಡಾರಿ, ದೇವರೆಡ್ಡಿ, ಮಡ್ಡಿ ಸಣ್ಣಕೆಪ್ಪ, ಲಕ್ಷ್ಮಿ ಹಾಗೂ ಮಾಲತಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next