Advertisement

ಅಲ್ಪಸಂಖ್ಯಾತರ ಮೇಲೆ ದಾಳಿ ಖಂಡಿಸಿ ಮನವಿ

02:40 PM Dec 09, 2021 | Team Udayavani |

ಹೊಸಪೇಟೆ: ದೇಶದ ಅನೇಕ ರಾಜ್ಯಗಳಲ್ಲಿ ಹಾಗೂಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಮೇಲೆ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿಸಿಪಿಐ(ಎಂ) ಪಕ್ಷದ ತಾಲೂಕು ಸಮಿತಿನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆನಡೆಸಲಾಯಿತು.

Advertisement

ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧ ರಕ್ಷಣೆ ನೀಡಬೇಕು. ಅಲ್ಪಸಂಖ್ಯಾತಸಮುದಾಯಗಳ ಸಮಗ್ರ ಅಭಿವೃದ್ಧಿಗೆಕ್ರಮವಹಿಸಬೇಕು. ತ್ರಿಪುರ ಸೇರಿದಂತೆ ದೇಶದಅನೇಕ ಕಡೆ ಮಸೀದಿ, ಚರ್ಚ್‌ ಸೇರಿ ಧಾರ್ಮಿಕಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿಮಾಡಲಾಗಿದೆ. ಇದನ್ನು ಸಿಪಿಐ(ಎಂ) ಪಕ್ಷ ಬಲವಾಗಿಖಂಡಿಸುತ್ತದೆ ಎಂದು ಪ್ರತಿಭಟನಾನಿರತರು ಹೇಳಿದರು.

ಧಾರ್ಮಿಕ ಅಲ್ಪಸಂಖ್ಯಾತರ ಮೇಲೆನಡೆಯುತ್ತಿರುವ ಕೋಮು ಹಿಂಸಾಚಾರವನ್ನುತಡೆಗಟ್ಟಲು ಸರ್ಕಾರ ಕಠಿಣ ಕ್ರಮವಹಿಸಬೇಕು.ಕೋಮುದ್ವೇಷಕ್ಕೆ ಬಲಿಯಾದ ಕುಟುಂಬಸದಸ್ಯರಿಗೆ ಪರಿಹಾರ ನೀಡಬೇಕು ಮತ್ತು ಸರ್ಕಾರಿಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.ಡಾ| ರಾಜೇಂದ್ರ ಸಾಚಾರ್‌ ಸಮಿತಿಯಶಿಫಾರಸ್ಸಿನಂತೆ ಅಲ್ಪಸಂಖ್ಯಾತರ ಆರ್ಥಿಕ,ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರಸಮಗ್ರ ಯೋಜನೆ ರೂಪಿಸಬೇಕು.

ಜಾನುವಾರುನಿಷೇಧ ತಿದ್ದುಪಡಿ ಕಾಯ್ದೆ-2020ಅನ್ನು ಕೂಡಲೇವಾಪಾಸ್‌ ಪಡೆಯಬೇಕು. ಅಲ್ಪಸಂಖ್ಯಾತರಸಮಸ್ಯೆಗಳು ಮತ್ತು ಸಂವಿಧಾನದ ಹಕ್ಕುಗಳಕುರಿತು ಪಾರ್ಲಿಮೆಂಟ್‌ ಹಾಗೂ ವಿಧಾನಸಭೆಗಳಲ್ಲಿವಿಶೇಷ ಚರ್ಚೆಗೆ ಒಳಪಡಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದಲ್ಲಿ ಅಲ್ಪಸಂಖ್ಯಾತರಸಮಸ್ಯೆಗಳನ್ನು ಪರಿಹರಿಸಲು ಕನಿಷ್ಠ ಮೂರುತಿಂಗಳಿಗೊಮ್ಮೆ ಸಭೆಯನ್ನು ನಡೆಸಬೇಕು ಎಂದುಆಗ್ರಹಿಸಿದರು.

ತಹಶೀಲ್ದಾರ್‌ ಎಚ್‌. ವಿಶ್ವನಾಥರ ಮೂಲಕಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರಿಗೆ ಮನವಿಪತ್ರರವಾನಿಸಲಾಯಿತು. ಸಿಪಿಐ(ಎಂ) ಪಕ್ಷದಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ, ಮರಡಿಜಂಬಯ್ಯ ನಾಯಕ, ವಿ. ಸ್ವಾಮಿ, ಎ. ಕರುಣಾನಿ , ಕೆ.ನಾಗರತ್ನಮ್ಮ, ಎಂ. ಗೋಪಾಲ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next