Advertisement

Hosapete: ಬುದ್ದಿ ಹೇಳಿದ ಯುವಕನಿಗೆ ಚಾಕು ಇರಿತ

07:42 PM Jul 29, 2023 | Team Udayavani |

ಹೊಸಪೇಟೆ:ಯುವತಿಯೊಬ್ಬಳ ವಿಚಾರಕ್ಕೆ ಬುದ್ದಿಮಾತು ಹೇಳಿದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಗರದ ಭಗತ್ ಸಿಂಗ್ ನಗರದಲ್ಲಿ ಶುಕ್ರವಾರ ನಡೆದಿದ್ದು, ಪ್ರಕರಣಕ್ಕೆ ಕುರಿತಂತೆ ಕೆ.ನಾಗರಾಜ (28)ಎಂಬ ಆರೋಪಿಯನ್ನು ಗ್ರಾಮೀಣ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡ ರಾಜು (20) ಎಂಬ ಯುವಕ ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ:
ಕೆಲ ದಿನಗಳಿಂದ ಆರೋಪಿ ನಾಗರಾಜ್, ಓರ್ವ ಯುವತಿಯ ಹೆಸರನ್ನು ಬಳಸಿಕೊಂಡು ಪ್ರೀತಿ ಪ್ರೇಮ ಎಂದು ಹೇಳಿಕೊಂಡು ತಿರುಗಾಡುತ್ತಿದ್ದನು. ಇದಕ್ಕೆ ರಾಜು ಬುದ್ದಿವಾದ ಹೇಳಿ, ಎಚ್ಚರಿಕೆ ನೀಡಿದ್ದಾನೆ. ಕುಪಿತಗೊಂಡ ಆರೋಪಿ ನಾಗರಾಜ, ರಾತ್ರಿ ಭಗತ್ ಸಿಂಗ್ ಬಡಾವಣೆ ಹತ್ತಿರ ಹಾದು ಹೋಗಿರುವ ಕಾಲುವೆ ಹತ್ತಿರ ರಾಜು ಮೇಲೆ ಎರಗಿ, ಚಾಕುವಿನಿಂದ ಕತ್ತಿನ ಭಾಗಕ್ಕೆ ಇರಿದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಜನರು ರಾಜು ರಕ್ಷಣೆ ಮಾಡಿದ್ದಾರೆ. ಅಪಾಯದಿಂದ ಪಾರಾದ ರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದಿ ಮನೆ ಸೇರಿಕೊಂಡಿದ್ದಾರೆ. ಇತ್ತ ಕೊಲೆಗೆ ಯತ್ನಿಸಿದ ಆರೋಪಿ ನಾಗರಾಜ ಜೈಲು ಸೇರಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next