Advertisement

ವಲಸೆ ಕಾರ್ಮಿಕರ ಮನವೊಲಿಕೆ

05:23 PM Apr 30, 2020 | Naveen |

ಹೊಸನಗರ: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿಗೆ ಕಳುಹಿಸಿಕೊಡುವಂತೆ ವಲಸೆ ಕಾರ್ಮಿಕರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ನಗರ ಠಾಣೆ ಪಿಎಸ್‌ಐ ಸಿ.ಆರ್‌.ಕೊಪ್ಪದ್‌ ಕುರಿಕೊಪ್ಪ ಗ್ರಾಮಕ್ಕೆ ತೆರಳಿ ಸದ್ಯ ಇಲ್ಲೇ ಉಳಿಯುವಂತೆ ವಲಸೆ ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡಿದರು.

Advertisement

ತಾಲೂಕಿನ ನಿಟ್ಟೂರು ಗ್ರಾಪಂ ಕೆ.ಬಿ.ಸರ್ಕಲ್‌ ಸಮೀಪದ ಕುರಿಕೊಪ್ಪದಲ್ಲಿ ಕಲ್ಲುಕ್ವಾರಿ ಕೆಲಸಕ್ಕಾಗಿ ಯಾದಗಿರಿ ಜಿಲ್ಲೆಯಿಂದ ವಲಸೆ ಕಾರ್ಮಿಕರಾಗಿ ಸುಮಾರು 57 ಜನ ಬಂದಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕುರಿಕೊಪ್ಪದಲ್ಲೇ ಉಳಿದುಕೊಳ್ಳುವಂತಾಗಿದೆ. ಈ ಹಿಂದೆ ತಮ್ಮ ಟ್ರ್ಯಾಕ್ಟರ್ ‌ನಲ್ಲೇ ಯಾದಗಿರಿ ಜಿಲ್ಲೆಗೆ ಹೋಗುವ ಪ್ರಯತ್ನ ಮಾಡಿದ್ದರು. ಶಿಕಾರಿಪುರ ತಾಲೂಕಿನಿಂದ ಅಧಿಕಾರಿಗಳು ವಾಪಾಸ್‌ ಕಳಿಸಿದ್ದರು. ಆದರೆ ನಾವು ಹೋಗಬೇಕು ಎಂದು ಪಟ್ಟು ಹಿಡಿದಿದ್ದು, ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ಮೇಲಾಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಮೇ 3ರವರೆಗೆ ಕಾಯಿರಿ. ನಂತರ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಪಿಎಸ್‌ಐ ಭರವಸೆ ನೀಡಿದರು. ವಲಸೆ ಕಾರ್ಮಿಕರಾದ ಕುಮಾರ್‌, ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next