Advertisement

ನಿಮ್ಮ ಗ್ರಹಬಲ: ಈ ರಾಶಿಯವರ ಸಂಬಂಧದಲ್ಲಿ ಬಿರುಕುಗಳು ಕಂಡು ಬಂದು ಏರುಪೇರಾಗಬಹುದು!

08:23 AM Jan 18, 2021 | Team Udayavani |

18-01-2021

Advertisement

ಮೇಷ: ತಾಳ್ಮೆ ಸಹನೆ ನಿಮಗಿಂದು ಅವಶ್ಯಕವಿದೆ. ವಾದವಿವಾದಕ್ಕೆ ಎಂದೂ ಕೈಹಾಕದಿರಿ. ನಿಮ್ಮ ಮೇಲೆಯೇ ನಿಯಂತ್ರಣ ಹೇರಿಕೊಂಡವರಂತೆ ವರ್ತಿಸುವಿರಿ. ಅತೀ ಭಾವುಕರಾಗಿ ನಿಯಂತ್ರಣ ಕಳೆದುಕೊಳ್ಳುವುದು ಬೇಡ.

ವೃಷಭ: ಯಾವುದೇ ಕೆಲಸವನ್ನು ಆತುರದಿಂದ ಮಾಡಲು ಹೋಗಿ ದುಡುಕಬೇಡಿರಿ. ನಿಯತ್ತಿ ನಿಂದ ಹಾಗೂ ಕಠಿಣ ಪರಿಶ್ರಮದಿಂದ ದುಡಿಯುವ ನಿಮಗೆ ಹೆಚ್ಚಿನ ಪ್ರತಿಫ‌ಲ ದೊರಕದು. ಆರೋಗ್ಯದಲ್ಲಿ ಸುಧಾರಣೆ ಇದೆ.

ಮಿಥುನ: ನಿಮ್ಮೆಣಿಕೆಯಂತೆ ಕೆಲಸ ಕಾರ್ಯಗಳು ನಡೆದಿಲ್ಲವೆಂದು ಹತಾಶರಾಗದಿರಿ. ಯೋಚಿಸಿ ಮುಂದಡಿ ಇಡಿರಿ. ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಸಹನೆ ಇರಲಿ. ಕಾರ್ಮಿಕ ವರ್ಗಕ್ಕೆ ಅಭಿವೃದ್ಧಿ ಇದೆ.

ಕರ್ಕ: ಸಂಬಂಧದಲ್ಲಿ ಬಿರುಕುಗಳು ಕಂಡು ಬಂದು ಏರುಪೇರಾಗಬಹುದು. ಆದರಿದು ತಾತ್ಕಾಲಿಕ ಸ್ಥಿತಿ. ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದಿರಿ. ಗುರಿಯತ್ತ ನಿಮ್ಮ ದೃಷ್ಟಿ ಇರಲಿ.

Advertisement

ಸಿಂಹ: ನೀವು ಎದುರಿಸಿದಷ್ಟು ಕಷ್ಟ ಕೋಟಲೆ ಇನ್ನಾರೂ ಅನುಭವಿಸಲಿಕ್ಕಿಲ್ಲ. ಆದರೂ ಧೃತಿಗೆಡದೆ ಮುನ್ನಡೆಯುತ್ತಾ ಹೆಜ್ಜೆ ಹಾಕಿರಿ. ನಿಧಾನವಾದರೂ ವಿಧಿಯು ನಿಮ್ಮನ್ನು ಮುನ್ನಡೆಸಲಿದೆ. ಧೈರ್ಯಂ ಸರ್ವತ್ರ ಸಾಧನಂ.

ಕನ್ಯಾ: ಈ ದಿನವು ಅಷ್ಟೇನೂ ಉತ್ತಮ ವಾಗಿರುವುದಿಲ್ಲ. ಹತಾಶೆ ಉಂಟಾಗಲಿದೆ. ಆದರೆ ಅದಕ್ಕೆ ಕಾರಣ ಎಂಬುದು ಇರುವುದಿಲ್ಲ. ಇದರಿಂದ ನಿಮಗೇನೂ ಹಾನಿಯಾಗದು. ಒಳ್ಳೆಯ ಸ್ವಾಭಿಮಾನಿ ಜೀವನ ನಿಮ್ಮದು.

ತುಲಾ: ಮೋಜು ಮಸ್ತಿಗೆ ಸೂಕ್ತ ದಿನವಲ್ಲ. ಸಂತೋಷ ಕೂಟ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಕೌಟುಂಬಿಕವಾಗಿ ಉದ್ವಿಗ್ನತೆ ಹಾಗೂ ಕೋಪತಾಪ ಹೆಚ್ಚುವುದು. ಧೃತಿಗೆಡದಿರಿ. ವಾಗ್ವಾದಕ್ಕೆ ಇಳಿಯದಿರಿ.

ವೃಶ್ಚಿಕ: ಕಾರ್ಯಕ್ಷೇತ್ರದಲ್ಲಿ ಯಾ ಗೃಹದಲ್ಲಿ ಕೋಲಾಹಲ ಉಂಟಾಗಲಿದೆ. ನಿಯಂತ್ರಣ ಮಾಡಲು ತೊಂದರೆಯಾದೀತು. ಸಹನೆ ಇರಲಿ. ಮನೆಯಲ್ಲಿ ಅತಿಥಿಗಳ ಆಗಮನವಿದ್ದೀತು. ಗೃಹ ನಿರ್ಮಾಣದಲ್ಲಿ ವಿಳಂಬವಾದೀತು.

ಧನು: ಐಶಾರಾಮಿ ಜೀವನಕ್ಕೆ ಹೋಗಬೇಡಿರಿ. ಇದರಿಂದ ಚಿಂತೆ ಹಾಗೂ ಕಷ್ಟ ಹೆಚ್ಚಾದೀತು. ಅನಾವಶ್ಯಕ ಪ್ರಯಾಣದಿಂದ ಖರ್ಚು ಅಧಿಕವಾಗಲಿದೆ. ಶಾಪಿಂಗ್‌ಮಾಲ್‌ಗೆ ಹೋಗದಿದ್ದರೆ ಉತ್ತಮ. ಖರ್ಚು ನಿಭಾಯಿಸಿರಿ.

ಮಕರ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಚಾಲನೆಯಲ್ಲಿ ಜಾಗ್ರತೆ ಮಾಡಿರಿ. ಎಲೆಕ್ಟ್ರಿಕ್‌ ವಸ್ತುಗಳಿಂದ ದೂರವಿರಿ. ಅವಘಡ ಸಂಭವಿಸೀತು. ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆ ತರಲಿದೆ.

ಕುಂಭ: ನಿಮ್ಮ ಸುತ್ತಲಿನವರು ಹೊಣೆಗೇಡಿಯಾಗಿ ವರ್ತಿಸಬಹುದು. ಇದರಿಂದ ನಿಮಗೆ ಕಿರಿಕಿರಿ ಎನಿಸಲಿದೆ. ಸಂಘರ್ಷಕ್ಕೆ ಇಳಿಯದಿರಿ. ನಿಮ್ಮ ಮೈಮೇಲೆ ಹಾರಿಯಾರು. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇದೆ.

ಮೀನ: ಕಚೇರಿ ಕಾರ್ಯದಲ್ಲಿ ವಿಳಂಬಗತಿಯು ಅಸಹನೆ ಮೂಡಿಸಲಿದೆ. ನೀವು ಎಚ್ಚರ ವಹಿಸದಿದ್ದಲ್ಲಿ ಖರ್ಚುವೆಚ್ಚ ಮಿತಿ ಮೀರಬಹುದು. ಅದಕ್ಕೆ ಕಡಿವಾಣ ಹಾಕಿರಿ. ಅತೀ ಸ್ನೇಹ ಅತೀ ಸಲುಗೆ ನಿಮಗೆ ಕಷ್ಟ ತರಲಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next