Advertisement

ಇಂದು ನಿಮ್ಮ ಗ್ರಹಬಲ: ಆತ್ಮವಿಶ್ವಾಸ, ಧೈರ್ಯ ಹಾಗೂ ನೇರ ನುಡಿ, ನಡೆಯಿಂದ ಮುನ್ನಡೆಯಿರಿ!

07:51 AM Jan 05, 2021 | Team Udayavani |

05-01-2021

Advertisement

ಮೇಷ: ಒಂದರ ಮೇಲೆ ಒಂದರಂತೆ ಅಡೆತಡೆಗಳು ಕಷ್ಟಗಳು ಎದುರಾಗುತ್ತಲೇ ಇರುತ್ತದೆ. ಅವನ್ನು ಹೇಗೆ ಎದುರಿಸುತ್ತೀರಿ ಎಂಬುದು ನಿಮಗೆ ಸವಾಲಾದೀತು. ಆದರೆ ಎದೆಗುಂದದೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿರಿ.

ವೃಷಭ: ದೈವಾನುಗ್ರಹವಿರುವ ನಿಮಗೆ ನಾಲ್ಕು ಕಡೆಗಳಿಂದಲೂ ಒಂದಲ್ಲಾ ಒಂದು ಚಿಂತೆ ಘಾಸಿಗೊಳಿಸೀತು. ಆದರೂ ನೀವು ಅದರಿಂದ ಪಾರಾಗಲು ದೈವದ ಮೊರೆ ಹೋಗುವುದು ಒಳಿತು. ಸಹನೆ ಆತ್ಮವಿಶ್ವಾಸವಿರಲಿ.

ಮಿಥುನ: ಮನವು ಸಂತೋಷ ಸಮಾರಂಭದಲ್ಲಿ ಪಾಲ್ಗೊಂಡು ಸಮಾಧಾನ ತಂದೀತು. ದೈಹಿಕವಾಗಿ ಆರೋಗ್ಯ ಉತ್ತಮ. ನಿಮ್ಮೆಣಿಸಿದ ಕಾರ್ಯಗಳೆಲ್ಲವೂ ನಿಧಾನವಾಗಿ ಆಗುತ್ತಲೇ ಹೋಗುತ್ತದೆ. ಚಿಂತೆಗೆ ಕಾರಣ ಮಾಡದಿರಿ.

ಕರ್ಕ: ಚಿತ್ತ ಚಾಂಚಲ್ಯದಿಂದ ಮನಸ್ಸು ದ್ವಿಗುಣವಾದೀತು. ಅದಕ್ಕಾಗಿ ಅತೀ ಚಿಂತೆ ಬೇಡ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಮಕ್ಕಳ ವಿದ್ಯಾಪ್ರಗತಿಯಿಂದ ಮನಸ್ಸಿಗೆ ಸಮಾಧಾನವಾಗಲಿದೆ.

Advertisement

ಸಿಂಹ: ಕಗ್ಗತ್ತಲಾವರಿಸಿದ ಮನಸ್ಸು ರೋಸಿ ಹೋದೀತು. ಹೇಗೆ, ಎತ್ತ, ಏನು ಎಂಬುದು ನಿಮಗೇ ಅರಿವಿಲ್ಲದಂತಾದೀತು. ನೀವು ಕೈಗೊಳ್ಳುವ ಕಾರ್ಯದಲ್ಲಿ ಜಯ ಸಿಗಲಿದೆ. ಜನರ ಬೆಂಬಲವು, ಪ್ರಶಂಸೆಯೂ ನಿಮ್ಮೊಂದಿಗಿರುತ್ತದೆ.

ಕನ್ಯಾ: ಶುಭ ಮಂಗಲ ಕಾರ್ಯ ನಿಮಿತ್ತ ಪ್ರವಾಸವು ಕೂಡಿಬರಲಿದೆ. ಸಂಸಾರದಲ್ಲಿ ನೆಮ್ಮದಿ, ಸಂತೋಷ, ಸಮಾಧಾನ ಲಭಿಸಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯವು ಉತ್ತಮ. ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯಿಂದ ಸಂತಸ.

ತುಲಾ: ತಂದೆ, ಮಕ್ಕಳೊಳಗೆ ಆಸ್ತಿ ಬಗ್ಗೆ ಸ್ವಲ್ಪ ತಕರಾರು ಇದ್ದರೂ ಸಂಧಾನದಿಂದ ಸರಿಯಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯದ ಪ್ರಯತ್ನ ನಡೆದೀತು. ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವಿದೇಶಯಾನವಿದ್ದೀತು.

ವೃಶ್ಚಿಕ: ಮಕ್ಕಳ ವಿವಾಹವು ನಡೆದೀತು. ಅನೇಕ ರೀತಿಯಲ್ಲಿ ಖರ್ಚು ಕಂಡುಬರಲಿದೆ. ಉದ್ಯೋಗ, ವ್ಯವಹಾರದಲ್ಲಿ ನಿಮ್ಮೆಣಿಕೆಯಂತೆ ಲಾಭವಿದ್ದೀತು. ಜನರು ನಿಮ್ಮ ಪ್ರಶಂಸೆ, ಏಳಿಗೆ ಕಂಡು ಹೊಟ್ಟೆ ಉರಿಸಿಕೊಂಡಾರು.

ಧನು: ವ್ಯವಹಾರ ನಿಮಿತ್ತ ಪ್ರಯಾಣ ಕೂಡಿಬರಲಿದೆ.ಆದರೂ ಮೋಜಿಗಾಗಿ ಹೆಚ್ಚು ಖರ್ಚು ಮಾಡುವುದು ಬೇಡ. ಪತ್ನಿಯ ಉದ್ಯೋಗದ ನಿಮಿತ್ತ ನಿಮಗೆ ಚಿಂತೆ ಆವರಿಸಲಿದೆ. ಉದ್ಯೋಗದಲ್ಲಿ ಭಡ್ತಿ ಸಿಗುವ ಹಾಗಿದೆ.

ಮಕರ: ಉದ್ಯೋಗರಂಗದಲ್ಲಿ ನಿಮಗೆ ತುಂಬಾ ಕಿರಿಕಿರಿ ಕಂಡುಬಂದೀತು. ಮೇಲಾಧಿಕಾರಿಗಳಿಂದ ಒತ್ತಡವು ಕಂಡುಬರುವುದು. ಮನೆಯಲ್ಲಿ ಹಿರಿಯರಿಂದ ಕಿರಿಕಿರಿ ಕಂಡುಬಂದೀತು. ಮಕ್ಕಳಿಂದ ಸಮಾಧಾನವಿದೆ.

ಕುಂಭ: ಕಾರ್ಯನಿಮಿತ್ತ ಪ್ರವಾಸ ಕಂಡುಬರುವುದು. ಆದರೂ ಅದು ವ್ಯರ್ಥವಾಗಲಿದೆ. ಮಕ್ಕಳ ಮನೆಗೆ ಪ್ರಯಾಣ ಮಾಡುವ ಅವಕಾಶ ಬರಲಿದೆ. ಆತ್ಮವಿಶ್ವಾಸ, ಧೈರ್ಯ ಹಾಗೂ ನೇರ ನುಡಿ, ನಡೆಯಿಂದ ಮುನ್ನಡೆಯಿರಿ.

ಮೀನ: ಕಾರ್ಯರಂಗದಲ್ಲಿ ವಿಲಾಸೀ ಜೀವನಕ್ಕೆ ಮಾರು ಹೋಗಿ ನಿಮ್ಮ ಬಗ್ಗೆ ಜಾಗ್ರತೆ ಮಾಡುವುದು ಅತೀ ಅಗತ್ಯವಿದೆ. ಮನೆಯಲ್ಲಿ ಮಂಗಲಕಾರ್ಯದ ಪ್ರಯತ್ನ ನಡೆದರೂ ನೀವು ಒಪ್ಪುವುದು ಅತೀ ಅಗತ್ಯ

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next