Advertisement

ನಿಮ್ಮ ಗ್ರಹಬಲ: ಹಿತಶತ್ರುಗಳಿಂದ ಆಗಾಗ ಏಕಾಗ್ರತೆಗೆ ಭಂಗ ಬಂದೀತು!

07:47 AM Jan 04, 2021 | Team Udayavani |

04-01-2021

Advertisement

ಮೇಷ: ಆರ್ಥಿಕವಾಗಿ ಭಾಗ್ಯ, ಸಂಪತ್ತುಗಳು ವೃದ್ಧಿಸುವುದು. ಸಾಂಸಾರಿಕವಾಗಿ ವಿವಾಹಾದಿ, ಶುಭ ಮಂಗಲ- ಕಾರ್ಯಗಳ ಚಿಂತನೆ ಸದ್ಯದಲ್ಲೇ ಅನುಕೂಲಕರವಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಾರರಿಗೆ ಅನುಕೂಲವಿದೆ.

ವೃಷಭ: ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚಾದೀತು. ಆಕಸ್ಮಿಕವಾಗಿ ಧನ ಸಂಪತ್ತು ಕೈಗೂಡಲಿದೆ. ಅಲ್ಲದೆ ಆರೋಗ್ಯ ಉತ್ತಮವಾದರೂ ಉದಾಸೀನತೆಯು ಸಲ್ಲದು. ಕೃಷಿ ಹಾಗೂ ಕೂಲಿ ಕಾರ್ಮಿಕರಿಗೆ ಲಾಭಾಂಶ ಹೆಚ್ಚಲಿದೆ.

ಮಿಥುನ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಕೃಪೆಯು ನಿಮ್ಮ ಮೇಲಿರುತ್ತದೆ. ಧನಾಗಮನವು ಸುಸೂತ್ರವಾಗಿದ್ದರೂ ಖರ್ಚಿಗೆ ಅನೇಕ ಮಾರ್ಗಗಳಿವೆ. ಸರಕಾರಿ ಕೆಲಸ ಕಾರ್ಯಗಳು ಅನಾವಶ್ಯಕ ಧನವ್ಯಯಕ್ಕೆ ಕಾರಣವಾದೀತು.

ಕರ್ಕ: ಗುರಿ ಮುಟ್ಟುವ ನಿಮ್ಮ ಛಲದ ಮುಂದೆ ಯಾವ ತಡೆಯೂ ನಿಲ್ಲಲಾರದು. ನಿಮ್ಮ ತಾಕತ್ತು ನಿಮ್ಮನ್ನು ಗುರಿ ಮುಟ್ಟಿಸಲಿದೆ. ನಿಮ್ಮ ಚಂಚಲ ಮನಸ್ಸು ನಿಮ್ಮನ್ನು ಗುರಿಯತ್ತ ವಿಚಲಿತಗೊಳಿಸಲಿದೆ.

Advertisement

ಸಿಂಹ: ಧನಾಗಮನದಲ್ಲಿ ತೊಂದರೆ ಇಲ್ಲದಿದ್ದರೂ ವ್ಯಾಪಾರ, ವ್ಯವಹಾರದಲ್ಲಿ ಹೂಡಿಕೆಯನ್ನು ಮಾಡಿರಿ. ಬದಲಾವಣೆಗೆ ಇದು ಸರಿಯಾದ ಸಮಯವಲ್ಲ. ವಾಹನ ಚಾಲನೆಯಲ್ಲಿ ಬಹಳ ಜಾಗ್ರತೆ ಮಾಡುವುದು.

ಕನ್ಯಾ: ವೃತ್ತಿರಂಗದಲ್ಲಿ ನಿಮ್ಮ ಗುರಿ ಮುಟ್ಟುವ ಛಲ ನಿಮ್ಮ ಮುಂದೆ ಯಾವ ತಡೆಯೂ ನಿಲ್ಲಲಾರದು. ಧನಾಗಮನಕ್ಕೆ ತೊಂದರೆ ಇಲ್ಲವಾದರೂ ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ. ಆರೋಗ್ಯದಲ್ಲಿ ಏರುಪೇರಾದೀತು.

ತುಲಾ: ನಿಮ್ಮ ತಾಕತ್ತು ನಿಮ್ಮನ್ನು ಯಶಸ್ಸು ಕೊಡುತ್ತದೆ. ಖನ್ನತೆಗೆ ಒಳಗಾಗ ಬೇಡಿರಿ. ಕೌಟುಂಬಿಕವಾಗಿ ಸಣ್ಣ ಸಣ್ಣ ಭಿನ್ನಾಭಿಪ್ರಾಯ ಮೂಡಿಬಂದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟಕ್ಕೆ ಪ್ರಯತ್ನಬಲ ಪ್ರಾಪ್ತಿಯಾಗಲಾರದು.

ವೃಶ್ಚಿಕ: ವೃತ್ತಿರಂಗದಲ್ಲಿ ಹೊಸತನ ರೂಡಿಸಿಕೊಳ್ಳಿರಿ. ಕಾರ್ಯಸಾಧನೆಗೆ ಸಾಧಕವಾಗಲಿದೆ. ಸಾಂಸಾರಿಕವಾಗಿ ಸಮಸ್ಯೆಗಳು, ವಿವಾದಗಳು ತನ್ನಿಂತಾನೇ ಮರೆಯಾಗಲಿವೆ. ಭಾವೋದ್ವೇಗಕ್ಕೆ ಗುರಿಯಾಗದಂತೆ ಎಚ್ಚರವಿರಲಿ.

ಧನು: ನಿಮಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ತಲೆ ಬಿಸಿ ಮಾಡಿಕೊಳ್ಳಬೇಡಿ. ಹೊಸ ಜವಾಬ್ದಾರಿ ನಿಮ್ಮ ತಲೆ ಮೇಲೆ ಬೀಳಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯದ ತಯಾರಿ ಬಗ್ಗೆ ಮಾತುಕತೆ ನಡೆದೀತು. ಶುಭವಿದೆ.

ಮಕರ: ನೀವೀಗ ಮಾನಸಿಕ ಹಾಗೂ ದೈಹಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ನಿಮ್ಮ ಜೀವನವು ನಿಧಾನವಾಗಿ ಪ್ರಗತಿ ಪಥದಲ್ಲಿ ಸಾಗಲಿದೆ. ನೀವು ಆಯ್ದುಕೊಂಡ ರೀತಿಯು ತುಂಬಾ ಉತ್ತಮವಿದೆ.

ಕುಂಭ: ವೃತ್ತಿರಂಗದಲ್ಲಿ ತುಸು ಬದಲಾವಣೆಗೆ ನೀವು ಸಿದ್ಧರಾಗದಿದ್ದರೂ ನಿಮ್ಮನ್ನು ಅತ್ತ ಒಯ್ಯಲಿರುವುದು. ವಿವಾದಗಳು ತನ್ನಿಂತಾನೇ ಮರೆಯಾಗಲಿದೆ. ಮನೆಯಲ್ಲಿ ಪತ್ನಿಯ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿರಿ.

ಮೀನ: ವೃತ್ತಿರಂಗದಲ್ಲಿ ಸದ್ಯದಲ್ಲೇ ಮರುಚೈತನ್ಯ ಪಡೆಯುವ ಸೂಚನೆ ತೋರಿ ಬರಲಿದೆ. ಮುನ್ನಡೆಯಿಂದ ಯಶಸ್ಸು ತೋರಿಬರಲಿದೆ. ಹಿತಶತ್ರುಗಳಿಂದ ಆಗಾಗ ಏಕಾಗ್ರತೆಗೆ ಭಂಗ ಬಂದೀತು. ಶುಭವಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next