Advertisement

Daily Horoscope: ಉತ್ತಮ ಅವಕಾಶಗಳು ಅರಸಿ ಬರಲಿವೆ, ಉದ್ಯೋಗಸ್ಥರಿಗೆ ಶುಭ ಸನ್ನಿವೇಶ

07:22 AM Sep 04, 2023 | Team Udayavani |

ಮೇಷ: ಕಾರ್ಯಗಳ ಆಯ್ಕೆಯ ವಿಷಯದಲ್ಲಿ ಸಣ್ಣ ಗೊಂದಲವಿದೆ. ಆಪ್ತರ ಸಲಹೆಯಿಂದ ಸಮಸ್ಯೆ ಪರಿಹಾರ. ಲಭ್ಯವಿರುವ ಅವಕಾಶಗಳ ಸದುಪಯೋಗದಿಂದ ಯಶಃಪ್ರಾಪ್ತಿ. ಹಿರಿಯರ ಆರೋಗ್ಯ ಉತ್ತಮ. ಉದ್ಯೋಗಸ್ಥರಿಗೆ ಶುಭ ಸನ್ನಿವೇಶ.

Advertisement

ವೃಷಭ:ಎಡಬಲಕ್ಕೆ ನೋಡದೆ ಮಂದಗತಿ ಯಲ್ಲಿ ಮುನ್ನಡೆಯಿರಿ. ವ್ಯವಹಾರ ಕ್ಷೇತ್ರದಲ್ಲಿ ಹೊಸಬರಿಂದ ಪೈಪೋಟಿ ಸಂಭವ. ಅಲ್ಪ ಕಾಲಿಕ ಹೂಡಿಕೆಗಳ ಯೋಚನೆಯನ್ನು ತ್ಯಜಿಸಿರಿ. ಉದ್ಯೋಗಾಕಾಂಕ್ಷಿಗಳಿಗೆ ಶುಭವಾರ್ತೆ.

ಮಿಥುನ: ಭೂತಕಾಲವನ್ನು ಭೂತಕನ್ನಡಿಯಿಂದ ನೋಡುವುದನ್ನು ಬಿಟ್ಟುಬಿಡಿ. ಉತ್ತಮ ಅವಕಾಶಗಳು ಅರಸಿ ಬರಲಿವೆ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದರಿಂದ ಜನಾದರಣೆಗೆ ಪಾತ್ರರಾಗುವಿರಿ.

ಕರ್ಕಾಟಕ: ಉದ್ಯೋಗಸ್ಥರಿಗೆ ಅನುಕೂಲದ ವಾತಾವರಣ. ಆರೋಗ್ಯ ಕೊಂಚ ವ್ಯತ್ಯಾಸ. ದೇವತಾ ಪ್ರಾರ್ಥನೆಯಿಂದ ಸಮಸ್ಯೆ ನಿವಾರಣೆ. ನೂತನ ಗೃಹ ನಿರ್ಮಾಣ ಯೋಜನೆಗೆ ಚಾಲನೆ. ವಾಹನ ಖರೀದಿಗೆ ತಾತ್ಕಾಲಿಕ ಅಡಚಣೆ.

ಸಿಂಹ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ನಿಮ್ಮದಾಗಲಿದೆ. ಅಧಿಕಾರಿ ವರ್ಗದವರ ಉತ್ತೇಜನ, ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಸುಗಮ. ಧಾರ್ಮಿಕ ಕಾರ್ಯಗಳು, ದಾನ ಧರ್ಮಾದಿಗಳ ಕಡೆಗೆ ಒಲವು.

Advertisement

ಕನ್ಯಾ: ದ್ರವ ಪದಾರ್ಥ ವ್ಯಾಪಾರಿಗಳಿಗೆ ಶುಭದಿನ. ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಕಾಡುತ್ತಿದ್ದ ಕಿರಿಕಿರಿಗಳು ದೂರ. ಮಹಾಪುರುಷರೊಬ್ಬರ ಭೇಟಿ ಸಂಭವ. ಅವಿವಾಹಿತ ಕನ್ಯೆಯರಿಗೆ ಸರಿಯಾದ ನೆಂಟಸ್ತಿಕೆ ಕೂಡಿಬರುವ ಸಾಧ್ಯತೆ.

ತುಲಾ: ಉತ್ತಮ ದೈವಾನುಗ್ರಹದಿಂದ ಕಷ್ಟಗಳು ದೂರ. ಸ್ವದೇಶಿ ಉದ್ಯಮಗಳಿಗೆ ಶುಭ ಗಳಿಗೆ. ಮತ್ಸೋದ್ಯಮಿಗಳಿಗೆ ಮಧ್ಯಮ ಫ‌ಲ. ಉಡುಪು ತಯಾರಕರಿಗೆ ವಿಶೇಷ ಆದಾಯ ಯೋಗ. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ.ಹಿರಿಯರ ಆರೋಗ್ಯ ಸುಧಾರಣೆ.

ವೃಶ್ಚಿಕ: ಸಿಹಿ ನೆನಪುಗಳೇ ನಿಮ್ಮ ಮನಸ್ಸಿನ ಶಕ್ತಿವರ್ಧಕ ಸಾಧನಗಳು. ಕಿರಿಯರಿಂದ ಮಹತ್ಸಾಧನೆ. ದೂರದ ಬಂಧುವಿನ ಭೇಟಿಯಿಂದ ಮತ್ತೆ ಚಿಗುರಿದ ಜೀವನೋತ್ಸಾಹ. ಸತ್ಸಂಗ, ಪ್ರವಚನಗಳನ್ನು ಆಲಿಸುವುದರಲ್ಲಿ ಆಸಕ್ತಿ.

ಧನು:ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆಯಿಂದ ತೃಪ್ತಿ. ಜವಾಬ್ದಾರಿಯ ಸ್ಥಾನದಲ್ಲಿರುವವರಿಗೆ ಪಾರದರ್ಶಕತೆಯೇ ರಕ್ಷೆ. ವೈದ್ಯರ ಭೇಟಿಯಿಂದ ಮನಸ್ಸು ನಿರಾಳ. ಸಮೀಪದ ದೈವೀ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಸಮಾಧಾನ.

ಮಕರ: ಕಾಲು ಕೆದರಿ ಜಗಳಕ್ಕೆ ಬರುವವರಿಂದ ದೂರವಿರಿ. ಜಾಣತನ, ತಾಳ್ಮೆಯ ನಡೆಯಿಂದ ಯಶಸ್ಸು ಖಚಿತ. ದೇವತಾರಾಧನೆಯಿಂದ ಶೀಘ್ರಫ‌ಲ ಪ್ರಾಪ್ತಿ. ಹಿರಿಯರ ಆರೋಗ್ಯ ಉತ್ತಮ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ. ಉದ್ಯೋಗ ಅರಸುವವರಿಗೆ ಶುಭ ಯೋಗ.

ಕುಂಭ: ಸಮಾಜ ಸೇವೆ ,ಪರೋಪಕಾರಗಳಲ್ಲೇ ನೆಮ್ಮದಿ ಕಾಣುವಿರಾದರೂ ಮನೆಯವರ ಸಂತೃಪ್ತಿಯನ್ನು ಗಮನಿಸುವುದು ಅವಶ್ಯ. ಬಂಧು ವರ್ಗದಲ್ಲಿ ವಿವಾಹ. ಹಿರಿಯರ ಆರೋಗ್ಯದತ್ತ ಗಮನವಿರಲಿ. ರಾಜಿ ಸಂಧಾನದಲ್ಲಿ ಮುಖ್ಯ ಪಾತ್ರ ವಹಿಸುವ ಸಂಭವ.

ಮೀನ: ಶಿವ, ವಿಷ್ಣು, ಆಂಜನೇಯರ ಕೃಪೆಯಿಂದ ವ್ಯಾಕುಲ ದೂರ. ಉದ್ಯೋಗ ಕ್ಷೇತ್ರ ಕಿರಿಕಿರಿಯಿಂದ ಮುಕ್ತಿ. ವ್ಯವಹಾರ ಸ್ಥರಿಗೆ ಅಲ್ಪ ಲಾಭ. ಕಟ್ಟಡ ನಿರ್ಮಾಪಕರಿಗೆ ಒದಗಿ ಬಂದ ನೆರವು. ವಾಹನ,ಯಂತ್ರೋಪಕರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಸಮಾಧಾನಕರ. ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next