Advertisement

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

07:31 AM Sep 26, 2023 | Team Udayavani |

ಮೇಷ: ತರಾತುರಿಯ ದಿನಚರಿಯಿಂದ ಹೊರಬರಲು ಸಾಧ್ಯವಾಗದ ಸನ್ನಿವೇಶ. ಉದ್ಯೋಗಸ್ಥರಿಗೆ ಹೆಚ್ಚು ಜವಾಬ್ದಾರಿಯ ಕೆಲಸಗಳು. ಸ್ವಂತ ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಯಶಸ್ಸು. ವೃತ್ತಿಪರರಿಗೆ ಮಾಮೂಲಿನಂತೆ ಒತ್ತಡ.

Advertisement

ವೃಷಭ: ಸಾವಧಾನದಿಂದ ಮುನ್ನಡೆಯಿರಿ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಏರಿಕೆ ಸಂಭವ. ಇಲೆಕ್ಟ್ರಾನಿಕ್‌ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಉದ್ಯೋಗಪತಿಗಳಿಗೆ ಕಳಂಕ ಬರಿಸುವ ಘಟನೆ ನಡೆಯುವ ಸಾಧ್ಯತೆ. ದೀರ್ಘಾವಧಿ ಹೂಡಿಕೆಗಳ ಬಗ್ಗೆ ಯೋಚನೆ.

ಮಿಥುನ: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ. ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ. ಸ್ವಂತ ಉದ್ಯಮಗಳ ನಿರ್ವಾಹಕರಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆಗಳ ಸಮಸ್ಯೆ. ಪಶುಸಂಗೋಪನೆ , ಹೈನುಗಾರಿಕೆ, ಜೇನು ವ್ಯವಸಾಯಗಾರರಿಗೆ ಆದಾಯ ಮಧ್ಯಮ.

ಕರ್ಕಾಟಕ: ಸಂಸಾರದಲ್ಲಿ ಎಲ್ಲರ ಆರೋಗ್ಯ ಸಾಮಾನ್ಯ ಮಟ್ಟದಲ್ಲಿ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ.ಸ್ವಂತ ವ್ಯವಹಾರ ಕ್ಷೇತ್ರದಲ್ಲಿ ಹೊಸದಾಗಿ ಪಾಲುದಾರಿಕೆ ವ್ಯವಹಾರಗಳು ಬೇಡ. ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ ಹಾಗೂ ಆದಾಯ ವೃದ್ಧಿ.

ಸಿಂಹ: ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿನಿಂದ ಸಾಗುವ ಪ್ರಯತ್ನ. ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿ ನಿರ್ವಹಣೆಗೆ ಮೇಲಿನವರ ಮೆಚ್ಚುಗೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ತೃಪ್ತಿಕರ.ಉತ್ಪಾದನಾ ರಂಗದವರಿಗೆ ಅಧಿಕ ಬೇಡಿಕೆಯ ಸವಾಲು.

Advertisement

ಕನ್ಯಾ: ಎಲ್ಲರ ಆರೋಗ್ಯ ಉತ್ತಮ. ಹಿರಿಯರಿಂದ ವ್ಯವಹಾರಕ್ಕೆ ಸೂಕ್ತವಾದ ಸಲಹೆ ಲಭ್ಯ.ದೂರಪ್ರಯಾಣ ಸಂಭವ.ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ವ್ಯವಹಾರದಲ್ಲಿ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಾಶಸ್ತ$Â ಇರಲಿ.

ತುಲಾ: ಸಮಸ್ಯೆಗಳನ್ನು ದೃಢಸಂಕಲ್ಪದಿಂದ ದಿಟ್ಟವಾಗಿ ಎದುರಿಸಲು ಕಲಿಯಿರಿ. ಉದ್ಯೋಗ ಕ್ಷೇತ್ರದಲ್ಲಿ ಮಾಮೂಲು ಸವಾಲುಗಳ ನಿರ್ವಹಣೆಯಲ್ಲಿ ಯಶಸ್ಸು. ಗುರು, ದೇವತಾನುಗ್ರಹದಿಂದ ನಿತ್ಯದ ವ್ಯವಹಾರಗಳಲ್ಲಿ ಜಯ.ನ್ಯಾಯಾಲಯ ವ್ಯವಹಾರದಲ್ಲಿ ವಿಳಂಬ.

ವೃಶ್ಚಿಕ: ಭೂತಕಾಲದ ಬಗ್ಗೆ ಚಿಂತಿಸದೆ ವರ್ತಮಾನದಲ್ಲಿ ಬದುಕುವುದೇ ಯಶಸ್ಸಿನ ಮಾರ್ಗವೆಂಬ ಅರಿವಿನಲ್ಲಿ ಮುಂದೆ ಸಾಗಿರಿ.ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಬಂಧುವರ್ಗದಿಂದ ಶುಭವಾರ್ತೆ.ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನ.

ಧನು: ಕಾರ್ಯಕ್ಕೆ ಸಂಬಂಧಪಟ್ಟಂತೆ ಎಲ್ಲರಂಗಗಳಲ್ಲೂ ತೃಪ್ತಿಕರವಾಗಿ ಮುನ್ನಡೆ ಸಾಧನೆ. ಉದ್ಯೋಗ ಕ್ಷೇತ್ರದಲ್ಲಿ ವಿವಿಧ ಅವಕಾಶಗಳು ಲಭ್ಯ. ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ.

ಮಕರ: ದೈವಪ್ರೀತಿಯಿಂದ ಸಮಸ್ಯೆಗಳಿಗೆ ಸಮಾಧಾನ. ಉದ್ಯೋಗ ಕ್ಷೇತ್ರದಲ್ಲಿ ಕೆಲವು ತಿಂಗಳುಗಳಿಂದ ಆತಂಕ ಸೃಷ್ಟಿಸುತ್ತಿದ್ದ ಪ್ರಶ್ನೆಗೆ ಸೂಕ್ತ ಪರಿಹಾರ. ಎಲ್ಲಾ ಬಗೆಯ ವೃತ್ತಿಪರರಿಗೂ ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಒತ್ತಡ.

ಕುಂಭ: ಉದ್ಯೋಗ, ವ್ಯವಹಾರಗಳ ಒತ್ತಡವಿದ್ದರೂ ಸಮಾಜಸೇವೆಯ ಒಲವಿನ ಸೆಳೆತ. ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹುರುಪಿನ ವಾತಾವರಣ. ಸ್ವಂತ ಉದ್ಯಮ ನಡೆಸುತ್ತಿರುವವರ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.ವ್ಯವಹಾರ ಸಂಬಂಧ ಸಣ್ಣ ಪ್ರವಾಸ ಸಂಭವ.

ಮೀನ: ಅನೇಕ ಶುಭಫಲಗಳ ದಿನ. ಸರಕಾರಿ ಕಾರ್ಯಾಲಯಗಳಲ್ಲಿ ಕಾರ್ಯ ಸುಗಮ. ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನ. ಸಮಾಜದಲ್ಲಿ ಗೌರವ ವೃದ್ಧಿ.ಉದ್ಯೋಗಸ್ಥರಿಗೆ ಹಿತಕರ ಅನುಭವ. ನಿರ್ಮಾಣ ಕಾರ್ಯಗಳಿಗೆ ಒದಗಿದ್ದ ವಿಘ್ನಗಳು ದೂರ. ಭವಿಷ್ಯದ ಯೋಜನೆಗಳಿಗೆ ಸರಿಯಾದ ರೂಪ ರೇಖೆ ನಿರೂಪಿಸಲು ಸಮರ್ಥರಾಗುವಿರಿ. ಸಂಸಾರದಲ್ಲಿ ಎಲ್ಲರಿಗೂ ಕ್ಷೇಮ.

Advertisement

Udayavani is now on Telegram. Click here to join our channel and stay updated with the latest news.

Next