Advertisement

Daily Horoscope: ಸರಕಾರಿ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಸಂಭವ

07:19 AM Sep 23, 2023 | Team Udayavani |

ಮೇಷ: ಕಾರ್ಯಚಟುವಟಿಕೆಗಳಲ್ಲಿ ವೈವಿಧ್ಯ ಈ ದಿನದ ವೈಶಿಷ್ಟ್ಯ. ಉದ್ಯೋಗಸ್ಥರಿಗೆ ಇನ್ನೊಂದು ವಿಭಾಗದ ಜವಾಬ್ದಾರಿ ಸೇರ್ಪಡೆ. ಸರಕಾರಿ ನೌಕರರಿಗೆ ನೆಮ್ಮದಿಯ ದಿನ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಗೃಹಿಣಿಯರಿಗೆ ನೆಮ್ಮದಿಯ ದಿನ.

Advertisement

ವೃಷಭ: ಸಕಾಲದಲ್ಲಿ ಸ್ಪಂದಿಸುವುದರಿಂದ ಫ‌ಲ ಪ್ರಾಪ್ತಿ. ಹಿರಿಯರ ಆರೋಗ್ಯದಲ್ಲಿ ಕಿಂಚಿತ್‌ ವ್ಯತ್ಯಾಸ. ಸರಕಾರಿ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಸಂಭವ. ಉಳಿದ ಉದ್ಯೋಗಸ್ಥರಿಗೆ ಹುದ್ದೆ ಬದಲಾವಣೆ ಸಾಧ್ಯತೆ. ಗೃಹಿಣಿಯರಿಗೆ, ಮಕ್ಕಳಿಗೆ ಕ್ಷೇಮ.

ಮಿಥುನ: ಮನೋಬಲ ವೃದ್ಧಿ ಹಾಗೂ ದೈವಾನುಗ್ರಹ ಪ್ರಾಪ್ತಿಯಿಂದ ಸಮಸ್ಯೆಗಳು ದೂರ. ಉದ್ಯೋಗ ಕ್ಷೇತ್ರದಲ್ಲಿ ಸಹಚರರ ಸಹಕಾರ. ಸ್ವಯಂ ಉದ್ಯಮ ನಡೆಸುವವರಿಗೆ ಮಿಶ್ರ ಫ‌ಲ. ದೂರದಲ್ಲಿರುವ ಮಿತ್ರರಿಂದ ಅಯಾಚಿತ ಸಹಾಯ.

ಕರ್ಕಾಟಕ: ಮಿಶ್ರಫ‌ಲಗಳ ದಿನ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳ ಸಹಕಾರದಲ್ಲಿ ಕೊರತೆಯಾಗದು. ಹವಾಮಾನದ ಕಾರಣ ದಿಂದಾಗಿ ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಕಾಣಿಸಿಕೊಳ್ಳುವುದು ಸ್ವಾಭಾವಿಕ.

ಸಿಂಹ: ಸ್ಥಿರವಾದ ಪ್ರಗತಿ.ಉದ್ಯೋಗ ರಂಗದ ಸಾಧನೆಗೆ ಎಲ್ಲರ ಶ್ಲಾಘನೆ. ಸ್ವಂತ ಉದ್ಯಮಗಳ ನಿರ್ವಾಹಕರಿಗೆ ಹಿತಶತ್ರುಗಳ ಬಾಧೆ. ಹೊಸ ಕ್ಷೇತ್ರಗಳಿಗೆ ಪ್ರವೇಶ ಸಂಭವ. ಗೃಹೋಪಯೋಗಿ ಉಪಕರಣಗಳ ಮಾರಾಟಗಾರರಿಗೆ ದೊಡ್ಡ ಮೊತ್ತದ ಲಾಭ.

Advertisement

ಕನ್ಯಾ: ಗಾಯಕರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ. ಉದ್ಯೋಗಸ್ಥರಿಗೆ ಸ್ಥಾನ ಬದಲಾವಣೆ ಹಾಗೂ ಹೊಸ ಅವಕಾಶಗಳು. ಸ್ವಂತದ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲಾಭ. ಬಂಧುವರ್ಗದಲ್ಲಿ ವಿವಾಹ ಸಿದ್ಧತೆ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳಿಗೆ ಕ್ಷೇಮ.

ತುಲಾ: ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಶುಭ ಫ‌ಲದ ದಿನ. ಉದ್ಯೋಗಸ್ಥರಿಗೆ ಮೇಲಧಿ ಕಾರಿಗಳ ಪ್ರೋತ್ಸಾಹ ಹಾಗೂ ಸಹೋದ್ಯೋಗಿಗಳ ಸಹಕಾರ ಲಭ್ಯ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ. ಸ್ವಂತ ವ್ಯವಹಾರಸ್ಥರಿಗೆ ಪೈಪೋಟಿಯ ತೀವ್ರ ಸಮಸ್ಯೆ.

ವೃಶ್ಚಿಕ: ರಾಜಕಾರಣಕ್ಕೆ ಪ್ರವೇಶಿಸಲು ಆಪ್ತರ ಒತ್ತಡ. ಉದ್ಯೋಗದಲ್ಲಿ ಮಂದಗತಿಯ ಮುನ್ನಡೆ. ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಗುರುಗಳ ಅಥವಾ ಗುರುಸಮಾನರ ಸಲಹೆ ಪಾಲನೆಯಿಂದ ಕ್ಷೇಮ.

ಧನು: ಹೇಳಿಕೊಳ್ಳುವಂತಹ ಪ್ರಗತಿ ಕಾಣಿಸದಿದ್ದರೂ ಉತ್ಸಾಹ ಕುಗ್ಗದಿರುವುದರಿಂದ ಜಯಿಸುವುದರಲ್ಲಿ ಅನುಮಾನವಿಲ್ಲ. ಹಳೆಯ ಬಂಧುವೊಬ್ಬರ ಭೇಟಿಯಿಂದ ವ್ಯಾವಹಾರಿಕ ಸಮಸ್ಯೆ ಪರಿಹಾರ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ.

ಮಕರ: ಶೀಘ್ರ ಕೋಪ ನಿಯಂತ್ರಿಸಿ. ಉದ್ಯೋಗ ರಂಗದಲ್ಲಿ ಸಮಯದ ಒತ್ತಡ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಸ್ವಂತ ವ್ಯವಹಾರಸ್ಥರು ಹಾಗೂ ವೃತ್ತಿಪರರಿಗೆ ಕಾಲಮಿತಿಯಲ್ಲಿ ಕೆಲಸ ಮುಗಿಸುವ ತರಾತುರಿ. ಗೃಹಿಣಿಯರ ಆರೋಗ್ಯ ಉತ್ತಮ.

ಕುಂಭ: ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಉತ್ತಮ. ಸಾಂಸಾರಿಕ ಜವಾಬ್ದಾರಿ ದೊಡ್ಡದಾಗಿದ್ದರೂ ಬಹುಕ್ಷೇತ್ರಗಳಲ್ಲಿ ದುಡಿಮೆ ಅನಿವಾರ್ಯ ಉದ್ಯೋಗಸ್ಥರಿಗೆ ತೀವ್ರ ಚಟುವಟಿಕೆಗಳ ದಿನ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಒಳ್ಳೆಯ ಸಹಕಾರ.

ಮೀನ: ಏರುಪೇರುಗಳ ನಡುವೆಯೂ ಆಶಾಭಾವನೆಯನ್ನು ಮೂಡಿಸುವ ವಿದ್ಯಮಾನಗಳು. ಉದ್ಯೋಗಸ್ಥರಿಗೆ ಕೆಲಸದ ಹೊರೆಗಳಿದ್ದರೂ ನಿರ್ವಹಿಸಲು ಕಷ್ಟವಾಗದು. ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ವಾಹನ ಸಂಬಂಧಿ ವ್ಯವಹಾರಗಳನ್ನು ನಡೆಸುವವರಿಗೆ ಲಾಭ ಮಧ್ಯಮ. ಕಟ್ಟಡ ನಿರ್ಮಾಣ ಕ್ಷೇತ್ರದ ಸಮಸ್ಯೆಗಳಿಗೆ ತಾತ್ಕಾಲಿಕ ಸಮಾಧಾನ. ಮನೆಯಲ್ಲಿ ಸಹಕಾರದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next