Advertisement

Daily Horoscope: ನಿಷ್ಠೆಯನ್ನು ಗಮನಿಸಿದ ಮೇಲಧಿಕಾರಿಗಳಿಂದ ಪ್ರಶಂಸೆ

07:24 AM Oct 09, 2023 | Team Udayavani |

ಮೇಷ: ಪ್ರಾಮಾಣಿಕತೆಗೆ ಪ್ರತಿಫ‌ಲ ಲಭಿಸುವ ಸಮಯ ಸನ್ನಿಹಿತ. ಒಂದೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ.ಸಹೋದ್ಯೋಗಿಗಳಿಂದ ಸಕಾಲಿಕ ಸಹಾಯ. ಆಪ್ತರಿಂದ ಅಪೇಕ್ಷಿತ ನೆರವು ಸಕಾಲದಲ್ಲಿ ಲಭ್ಯ.

Advertisement

ವೃಷಭ: ಅದ್ಭುತವಾದ ಪ್ರಗತಿಯಲ್ಲವಾದರೂ ಆದಾಯಕ್ಕೆ ಕೊರತೆಯಿಲ್ಲ. ಸರಕಾರಿ ಅಧಿಕಾರಿ ಗಳಿಗೆ ಆಯಕಟ್ಟಿನ ಜಾಗದಿಂದ ಸ್ಥಳಾಂತರದ ಯೋಗ. ಪಾಲುದಾರಿಕೆ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ಕೃಷಿಕರಿಗೆ ಹಲವು ಬಗೆಯ ಸವಾಲುಗಳಿದ್ದರೂ ಹಿನ್ನಡೆಯಾಗದು.

ಮಿಥುನ: ದೈವ ಬಲ- ಆತ್ಮಬಲಗಳು ಸಮ್ಮಿಳಿತವಾದಾಗ ಯಾವುದಕ್ಕೂ ಜಗ್ಗಬೇಕಾದ ಪ್ರಮೇಯವಿಲ್ಲ. ಪ್ರಾರಂಭದ ಹಂತದಲ್ಲಿ ಕಾಡಿದ ಸಹೋದ್ಯೋಗಿಗಳೇ ಹಿತೈಷಿಗಳಾಗಿ ಪರಿವರ್ತನೆಗೊಳ್ಳುವ ಸಂದರ್ಭ. ನಿಷ್ಠೆಯನ್ನು ಗಮನಿಸಿದ ಮೇಲಧಿಕಾರಿಗಳಿಂದ ಪ್ರಶಂಸೆ.

ಕರ್ಕಾಟಕ: ಶುಭಫ‌ಲಗಳ ದಿನ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಪಿತೃಕಾರ್ಯ ಮಾಡಿದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಪಶುಪಾಲನೆ ಹಾಗೂ ಹೈನುಗಾರಿಕೆ ಆಸಕ್ತರಿಗೆ ಅನುಕೂಲ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸುದಿನ.

ಸಿಂಹ: ಮಂದಗತಿಯದಾದರೂ ಸ್ಥಿರವಾದ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರ ಗಮನ ಸೆಳೆದ ಸಾಧನೆ. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆಗಳತ್ತ ಗಮನ ಹರಿಸಿದಲ್ಲಿ ಉತ್ತಮ.ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಚಿಂತನೆ. ಆಪ್ತರ ಸಲಹೆಯಿಂದ ಹಿತ.

Advertisement

ಕನ್ಯಾ: ದೀರ್ಘ‌ಕಾಲದಿಂದ ಕಾಡುತ್ತಿದ್ದ ಸಮಸ್ಯೆ ಯೊಂದಕ್ಕೆ ಪರಿಹಾರ. ಸರಕಾರಿ ಉದ್ಯೋಗಸ್ಥರ ಉತ್ತರದಾಯಿತ್ವ ಹೆಚ್ಚಳ. ಹಿರಿಯ ಅಧಿಕಾರಿಗಳ ಸ್ಥಳ ಬದಲಾವಣೆ ನಿರೀಕ್ಷೆ. ಸ್ವಯಂ ಉದ್ಯಮಿಗಳ ಪಾಲಿಗೆ ಹಿತಕರವಾದ ದಿನ.

ತುಲಾ: ಮಿಶ್ರಫ‌ಲಗಳ ದಿನ. ಉದ್ಯೋಗ ಕ್ಷೇತ್ರದಲ್ಲಿ ಸಹಕಾರದ ವಾತಾವರಣ. ಸ್ವಂತ ಒಡೆತನದ ಉದ್ಯಮಗಳಿಗೆ ಲಾಭ ಮಧ್ಯಮ. ಗೃಹಿಣಿಯರ ಸ್ವೊದ್ಯೋಗ ಯೋಜನೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ. ಹಿರಿಯರ ಆರೋಗ್ಯದಲ್ಲಿ ಕೊಂಚ ಏರುಪೇರು.

ವೃಶ್ಚಿಕ: ನೂತನ ಯೋಜನೆಗಳತ್ತ ಲಕ್ಷ್ಯ ಸರಕಾರಿ ಕಚೇರಿಯಲ್ಲಿ ಆಗಬೇಕಾದ ಕಾರ್ಯ ವಿಳಂಬ. ಉದ್ಯೋಗ ಸ್ಥಾನದಲ್ಲಿ ಅಸ್ಥಿರ ವಾತಾವರಣ. ಹಿತಶತ್ರುಗಳ ಹಾವಳಿ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಸ್ವೊದ್ಯೋಗ ಯೋಜನೆಗೆ ನೆರವು ಲಭ್ಯ.

ಧನು: ಅಲ್ಪಕಾಲದ ಹೂಡಿಕೆ ಯೋಜನೆಗಳ ಲಾಭ ಕೈಸೇರಿಕೆ. ಉದ್ಯೋಗ ಸ್ಥಾನದಲ್ಲಿ ಸಾಮಾನ್ಯ ಸ್ಥಿತಿ. ಹೊಸ ಅವಕಾಶಗಳ ಸಾಧ್ಯತೆ ವಿರಳ. ಆಪ್ತರಿಂದ ಅಪೇಕ್ಷಿತ ನೆರವು ವಿಳಂಬ. ದೂರದ ಮಿತ್ರರೊಡನೆ ಮಾತುಕತೆ. ದೀರ್ಘ‌ಕಾಲದ ಅಸ್ವಾಸ್ಥ್ಯಕ್ಕೆ ವೈದ್ಯಕೀಯ ಪರಿಹಾರ.

ಮಕರ: ವಿಶ್ರಾಂತಿಯಿಲ್ಲದ ದುಡಿಮೆಯಿಂದ ಶರೀರ, ಮನಸ್ಸಿಗೆ ಆಯಾಸ. ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡ. ವೃತ್ತಿಪರರಿಗೆ ಸಮಯದೊಂದಿಗೆ ಹೋರಾಟದ ಪರಿಸ್ಥಿತಿ. ದೇವರಿಗೆ ಶರಣಾಗುವುದರಿಂದ ಸಮಸ್ಯೆ ಪರಿಹಾರ. ಮನೆಯಲ್ಲಿ ಸಹಕಾರದ ವಾತಾವರಣ.

ಕುಂಭ:ಶಾಂತಿ, ಸಮಾಧಾನದ ನಡೆಯಿಂದ ಎಲ್ಲರಿಗೂ ನೆಮ್ಮದಿ. ಉದ್ಯೋಗದಲ್ಲಿ ಇನ್ನಷ್ಟು ಜವಾಬ್ದಾರಿಗಳನ್ನು ಹೊರುವ ಅನಿವಾರ್ಯತೆ. ಸೇವೆಗಳಿಗಾಗಿ ಕೈಬೀಸಿ ಕರೆಯುತ್ತಿರುವ ಸಾಮಾಜಿಕ ಕ್ಷೇತ್ರ. ಸಾಹಿತ್ಯಾಸಕ್ತರಿಗೆ ಆನಂದ. ಮಹತ್ವದ ವ್ಯಕ್ತಿಯೊಬ್ಬರ ಭೇಟಿ ಸಂಭವ. ಎಲ್ಲರಿಗೂ ಸಂತೃಪ್ತಿ.

ಮೀನ: ಶನಿ ಮಹಾತ್ಮನ ಅನುಗ್ರಹದಿಂದ ದುಃಖವಿಮೋಚನೆ. ಉದ್ಯೋಗದಲ್ಲಿ ಎದುರಾದ ಎಲ್ಲ ಸವಾಲುಗಳಿಂದ ಮುಕ್ತಿ. ಸರಕಾರಿ ಕಾರ್ಯಾಲಯಗಳಲ್ಲಿ ಸುಲಭವಾಗಿ ಸ್ಪಂದನೆ. ಸೇವಾರೂಪದ ಉದ್ಯೋಗ ನಡೆಸುವವರಿಗೆ ಆದಾಯ ವೃದ್ಧಿ. ವ್ಯವಹಾರ ನಿರ್ವಹಣೆಗೆ ಸಂಗಾತಿಯುಂದ ಮತ್ತು ಮಕ್ಕಳಿಂದ ಸಂಪೂರ್ಣ ಸಹಕಾರ. ಹಿರಿಯರ ಆರೋಗ್ಯ ಉತ್ತಮ.

 

 

Advertisement

Udayavani is now on Telegram. Click here to join our channel and stay updated with the latest news.

Next