Advertisement

Horoscope: ನಿಮ್ಮ ಸಾಧನೆಗಳು ಸಾಕೆಂಬ ಭಾವನೆ ಬಾರದಿರಲಿ,ಹಲವು ಬಗೆಯ ಪರೀಕ್ಷೆಗಳು ಎದುರಾಗಲಿವೆ

07:29 AM Oct 07, 2023 | Team Udayavani |

ಮೇಷ: ಒಂದೇ ಕ್ಷೇತ್ರದಲ್ಲಿ ಲಕ್ಷ್ಯವನ್ನು ಕೇಂದ್ರೀಕರಿಸಿದರೆ ಯಶಸ್ಸು ಖಚಿತ. ತಾತ್ಕಾಲಿಕ ಬಾಧೆಗಳು ತೊಲಗುವ ಕ್ಷಣ. ಉದ್ಯೋಗ ಕ್ಷೇತ್ರದಲ್ಲಿ ಯಥೇತ್ಛ ಅನುಕೂಲ. ಸಹೋದ್ಯೋಗಿಗಳಿಂದ ಸಹಕಾರ. ಗುರುದೇವತಾನುಗ್ರಹದೊಂದಿಗೆ ಪಿತೃದೇವತಾನುಗ್ರಹವೂ ಪ್ರಾಪ್ತಿ.

Advertisement

ವೃಷಭ: ಸಂದರ್ಭ ನೋಡಿ ಮುಂದಡಿಯಿಡಿರಿ. ಅವಸರ ಸಲ್ಲದು. ಅಲ್ಪಕಾಲದ ಹೂಡಿಕೆಗಳಿಂದ ದೂರವಿರಿ.ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಮೇಲಧಿಕಾರಿಗಳ ಮೆಚ್ಚುಗೆ. ಕಟ್ಟಡ ನಿರ್ಮಾಣ ವ್ಯವಹಾರ ಸ್ಥರಿಗೆ, ಸಿವಿಲ್‌ ಎಂಜಿನಿಯರ್‌ಗೆ ಮಧ್ಯಮ ಯಶಸ್ಸು.

ಮಿಥುನ: ನಿಮ್ಮ ಸಾಧನೆಗಳು ಸಾಕೆಂಬ ಭಾವನೆ ಬಾರದಿರಲಿ. ಹಲವು ಬಗೆಯ ಪರೀಕ್ಷೆಗಳು ಎದುರಾಗಲಿವೆ. ಸಕಾಲದಲ್ಲಿ ಗುರುದೇವತಾನುಗ್ರಹ ಲಭಿಸಿ ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ವಿಯಾಗುವಿರಿ. ದಕ್ಷಿಣ ದಿಕ್ಕಿನ ದೇವತಾ ಕ್ಷೇತ್ರಕ್ಕೆ ಭೇಟಿ. ವಿಶಿಷ್ಟ ವ್ಯಕ್ತಿಯೊಬ್ಬರ ಸಂದರ್ಶನ.

ಕರ್ಕಾಟಕ: ಮಿಶ್ರಫ‌ಲಗಳ ದಿನವಾದರೂ ಶುಭಫ‌ಲಗಳೇ ಅಧಿಕವಾಗಿರುವುದರಿಂದ ಯೋಚಿಸಬೇಕಾಗಿಲ್ಲ. ಅಯಾಚಿತವಾಗಿ ಒದಗಿಬರುವ ಸಹಾಯಗಳಿಂದಾಗಿ ಜೀವನ ಸುಗಮ.ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಹೊಸ ಜವಾಬ್ದಾರಿಗಳು ಬರುವ ಸಾಧ್ಯತೆ.

ಸಿಂಹ: ಇದುವರೆಗೆ ಕ್ರಮಿಸಿದ ಹಾದಿಯನ್ನು ನೋಡಿದರೆ ವಿಜಯದ ಚಿಹ್ನೆಗಳೇ ಕಾಣಿಸುತ್ತವೆ. ಉದ್ಯೋಗದಲ್ಲಿ ಇನ್ನಷ್ಟು ಜವಾಬ್ದಾರಿಗಳು ಹಾಗೂ ಅವಕಾಶ ಗಳು ಗೋಚರವಾಗುತ್ತವೆ. ಹೊಸ ಉದ್ಯಮಿಗಳಿಗೆ ಮಂದ ಗತಿಯ ಪ್ರಗತಿ. ಉತ್ಪನ್ನಗಳ ಗುಣಮಟ್ಟ ಏರಿಕೆಗೆ ಪ್ರಯತ್ನ.

Advertisement

ಕನ್ಯಾ: ಸಾಮಾನ್ಯ ಆರೋಗ್ಯ ಸ್ಥಿತಿ ಉತ್ತಮ.ಸ್ಥಿರವಾಗಿ ನೆಲೆಗೊಳ್ಳುವ ಪ್ರಯತ್ನದಲ್ಲಿ ಯಶಸ್ಸು. ಯಂತ್ರಸಾಮಗ್ರಿ ವ್ಯಾಪಾರಿಗಳು ಹಾಗೂ ದುರಸ್ತಿಗಾರರಿಗೆ ಉತ್ತಮ ಆದಾಯ. ಸರಕಾರಿ ಉಳಿತಾಯ ಯೋಜನೆಗಳ ವ್ಯವಹಾರಸ್ಥರಿಗೆ ಆದಾಯ ವೃದ್ಧಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ.

ತುಲಾ: ಗೃಹಿಣಿಯರಿಗೆ ಸಂಸಾರ ನಿರ್ವಹಣೆಯಲ್ಲಿ ಮತ್ತಷ್ಟು ಜವಾಬ್ದಾರಿಗಳು. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಕಿರಿಕಿರಿ. ಕೃಷ್ಯುತ್ಪನ್ನ ಮಾರಾಟಗಾರರಿಗೆ ಮಧ್ಯಮ ಲಾಭ. ವಸ್ತ್ರೋದ್ಯಮಿಗಳು, ಚರ್ಮೋದ್ಯಮಿಗಳು ಹಾಗೂ ಆಭರಣ ವ್ಯಾಪಾರಿಗಳ ಆದಾಯ ಏರಿಕೆ.

ವೃಶ್ಚಿಕ: ಗಳಿಸಿದ ಲಾಭದ ಸದ್ವಿನಿಯೋಗಕ್ಕೆ ಗಮನ ನೀಡಿರಿ. ಆಪ್ತರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಸಹಕಾರದ ಸನ್ನಿವೇಶ. ಸಮಷ್ಟಿ ಪ್ರಯತ್ನದಿಂದ ಅಧಿಕ ಉತ್ಪನ್ನ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಆದ್ಯತೆ ಇರಲಿ.

ಧನು: ಹೊಂದಾಣಿಕೆ ಮನೋಭಾವದಿಂದ ಕಾರ್ಯಸಿದ್ಧಿ. ಸರಕಾರಿ ಕಾರ್ಯಾಲಯಗಳಲ್ಲಿ ಸ್ಪಂದನೆಯಿಲ್ಲದೆ ಕಾರ್ಯಗಳಿಗೆ ತೊಂದರೆ. ಅಪರಿಚಿತರಿಂದ ಅಕಸ್ಮಾತ್‌ ಸಹಾಯ. ಮನೆ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇನ್ನಷ್ಟು ಹೊಣೆಗಾರಿಕೆಗಳು. ಬಂಧುದರ್ಶನದಿಂದ ಸಮಾಧಾನ.

ಮಕರ: ನಿಯೋಜಿತ ಕಾರ್ಯಗಳ ನಿರ್ವ ಹಣೆಗೆ ವಿಘ್ನ. ಗುರು, ದೇವರು ಹಾಗೂ ಪಿತೃಗಳ ಪ್ರಾರ್ಥನೆಯಿಂದ ಇಷ್ಟಾರ್ಥ ಸಿದ್ಧಿ. ತಾಳ್ಮೆ,ಸಮಾಧಾನಗಳನ್ನು ಕಾಯ್ದಕೊಂಡಷ್ಟು ಉನ್ನತಿ. ಆದಾಯ ವೃದ್ಧಿ ಮಾರ್ಗಗಳ ಅನ್ವೇಷಣೆ. ಹಿರಿಯರಿಂದ ಉತ್ತಮ ಸಹಕಾರ.

ಕುಂಭ: ಅತಿಥಿ ಸತ್ಕಾರ ಯೋಗ. ಹಿರಿಯರ ಆರೋಗ್ಯ ಹಾಗೂ ಆವಶ್ಯಕತೆಗಳನ್ನು ಗಮನಿಸುತ್ತಿರಿ. ಉದ್ಯೋಗ ನಿರ್ವಹಣೆಯಲ್ಲಿ ಅಪೂರ್ವ ಸಾಧನೆಗಾಗಿ ಮೇಲಧಿಕಾರಿಗಳಿಂದ ಮೆಚ್ಚುಗೆ. ಸ್ವಂತ ವ್ಯವಹಾರಸ್ಥರ ಉತ್ಪನ್ನಗಳಿಗೆ ಅಧಿಕ ಬೇಡಿಕೆ.

ಮೀನ: ನಾಲ್ಕೂ ದಿಕ್ಕುಗಳಿಂದ ಕೆಲಸದ ಒತ್ತಡ. ಸಹನೆಯೇ ನಿಮ್ಮ ಆಯುಧ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯತತ್ಪರತೆಗೆ ಮೇಲಿನವರಿಂದ ಶ್ಲಾಘನೆ. ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರ ಸಕಾಲಿಕ ಸ್ಪಂದನೆ ಯಿಂದ ಕೆಲಸಗಳಲ್ಲಿ ಯಶಸ್ಸು. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ವೃದ್ಧಿ. ಧಾರ್ಮಿಕ ರಂಗದಲ್ಲಿ ವಿಶ್ವಾಸಾರ್ಹ ಸೇವೆಗೆ ಅವಕಾಶಗಳ ಸೃಷ್ಟಿ. ಮನೆಯಲ್ಲಿ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next