Advertisement

ಕಾಲಸಹಜವಾದ ತೊಂದರೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ, ಆಗಬೇಕಾಗಿರುವುದು ಆಗಿಯೇ ಆಗುತ್ತದೆ

07:24 AM Oct 06, 2023 | Team Udayavani |

ಮೇಷ: ಲೆಕ್ಕಾಚಾರವಿಲ್ಲದೆ ನೇರವಾಗಿ ವ್ಯವಹರಿಸು ವುದರಿಂದ ಕಾರ್ಯ ಸುಲಭ. ಉದ್ಯೋಗದಲ್ಲಿ ಮೇಲಧಿಕಾರಿಗಳ ವಿಶ್ವಾಸ ಪ್ರಾಪ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಯಿಂದ ಯಶಸ್ಸು ವೃದ್ಧಿ. ಹಿರಿಯರಿಂದ ಸಮಯೋಚಿತ ಮಾರ್ಗದರ್ಶನ. ಮನೆಯಲ್ಲಿ ಸೌಹಾರ್ದದ ವಾತಾವರಣ.

Advertisement

ವೃಷಭ: ಸರಿಯಾದ ಸಮಯ ನೋಡಿ ಮುಂದಡಿಯಿಡುವುದರಿಂದ ಯಶಸ್ಸು, ಕೀರ್ತಿ ಲಭ್ಯ. ಸಮಾಜ ದಲ್ಲಿ ಗೌರವ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಹೊಸ ಅವಕಾಶಗಳು. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಚಿಂತನೆ. ಲೇವಾದೇವಿ ವ್ಯವಹಾರಕ್ಕೆ ಹಿನ್ನಡೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಮಧ್ಯಮ ಲಾಭ.

ಮಿಥುನ: ಕಾಲಸಹಜವಾದ ತೊಂದರೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಆಗಬೇಕಾಗಿರುವುದು ಆಗಿಯೇ ಆಗುತ್ತದೆ. ಉದ್ಯೋಗದಲ್ಲಿ ಹುದ್ದೆ ಅಥವಾ ಸ್ಥಾನ ಬದಲಾವಣೆ ಆಗದು. ಹೆಚ್ಚು ಆತ್ಮೀಯರಲ್ಲದವರಿಂದ ಅಯಾಚಿತ ಸಹಾಯ. ಅಸಂಘಟಿತ ವಲಯಗಳವರಿಗೆ ಸಹಾಯಹಸ್ತ.

ರ್ಕಾಟಕ: ಸಹಜ ಜೀವನ. ಉದ್ಯೋಗ ಸ್ಥಾನದಲ್ಲಿ ಅನುದ್ವಿಗ್ನ ವಾತಾವರಣವಿರು ವುದರಿಂದ ಕಾರ್ಯಗಳು ಸುಗಮ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಸೇರ್ಪಡೆ ಸಂಭವ. ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ ನೀಡುವುದು ಅಗತ್ಯ.

ಸಿಂಹ: ಉಬ್ಬರ, ಇಳಿತ ಎರಡೂ ಇಲ್ಲದೆ ಸರಾಗ ವಾಗಿ ಹರಿಯುವ ಬದುಕಿನ ಪ್ರವಾಹದಲ್ಲಿ ಸಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ಉದ್ಯಮಗಳಲ್ಲಿ ಮಧ್ಯಮ ಯಶಸ್ಸು. ಉತ್ಪನ್ನಗಳಿಗೆ ಬೇಡಿಕೆ ಸಾಮಾನ್ಯ ಏರಿಕೆ. ಕುಶಲಕರ್ಮಿಗಳ ಪಾಲಿಗೆ ಒಳ್ಳೆಯ ದಿನ.

Advertisement

ಕನ್ಯಾ: ಉದ್ಯೋಗದಲ್ಲಿ ಸ್ಥಿರವಾಗಿ ನೆಲೆಗೊಳ್ಳಲು ಪ್ರಯತ್ನ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಹಳೆಯ ಸಂಬಂಧ ನವೀಕರಣ. ಹೊಸ ಕಾರ್ಯಕ್ಷೇತ್ರ ಪ್ರವೇಶಕ್ಕೆ ಪ್ರಯತ್ನ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ವಿದ್ಯಾರ್ಥಿ ವೃಂದಕ್ಕೆ ಶುಭ.

ತುಲಾ: ಆಗುಹೋಗುಗಳ ಫ‌ಲವನ್ನು ಪರಮಾ ತ್ಮನಿಗೆ ಸಮರ್ಪಿಸಿ ಕಾರ್ಯದಲ್ಲಿ ತೊಡಗಿರಿ. ಅಪರಿಚಿತರಿಂದ ಅನಿರೀಕ್ಷಿತ ಸಹಾಯ. ದೂರದ ಬಂಧುಗಳ ಆಗಮನ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸರಕಾರಿ ಉದ್ಯೋಗಿಗಳಿಗೆ ಅಧಿಕ ಕೆಲಸದ ಹೊರೆ.

ವೃಶ್ಚಿಕ: ಸಂತೃಪ್ತಿಯ ಸ್ಥಿತಿ. ಉದ್ಯೋಗದಲ್ಲಿ ತಕ್ಕಮಟ್ಟಿಗೆ ತೃಪ್ತಿ. ಬದುಕು ನಿರಾತಂಕ. ಗುರು ಹಿರಿಯರ ಆಶೀರ್ವಾದದಿಂದ ವ್ಯವಹಾರಗಳು ಸುಗಮ. ಪಾಲುದಾರಿಕೆ ವ್ಯವಹಾರದ ಉತ್ಪಾದನೆಗಳಿಗೆ ಬೇಡಿಕೆ ತೃಪ್ತಿಕರ. ಕೃಷ್ಯುತ್ಪನ್ನ ಮಾರಾಟದಿಂದ ಲಾಭ.

ಧನು: ಯಶಸ್ಸು ಕೈಗೆಟಕಿದಂತೆ ಕಾಣಿಸುವಾಗ ದೂರಕ್ಕೆ ನೆಗೆದು ನಿರಾಶೆಯಾದರೂ ಮತ್ತೆ ಪಡೆಯುವ ಪ್ರಯತ್ನ ಮುಂದುವರಿಕೆ. ಉದ್ಯೋಗದಲ್ಲಿ ಎಂದಿನಂತೆ ಸ್ಥಿರವಾದ ಅಧಿಕ ಜವಾಬ್ದಾರಿಗಳು. ದಾಕ್ಷಿಣ್ಯದಿಂದ ವ್ಯವಹಾರಕ್ಕೆ ತೊಂದರೆ.

ಮಕರ: ಉದ್ಯೋಗದ ಸ್ಥಾನದಲ್ಲಿ ಮನೆಯ ಚಿಂತೆ, ಮನೆಯಲ್ಲಿದ್ದಾಗ ಉದ್ಯೋಗದ ಚಿಂತೆ-ಇದೇ ನಿಮ್ಮ ಮನಸ್ಥಿತಿ. ಎಂದಿನಂತೆ ಸಹೋದ್ಯೋ ಗಿಗಳ ಸಹಕಾರ. ದಂಪತಿಗಳ ನಡುವೆ ಸಾಮರಸ್ಯ ವೃದ್ಧಿ. ಹಳೆಯ ಕೌಟುಂಬಿಕ ಸಮಸ್ಯೆಯೊಂದರ ಪರಿಹಾರ.

ಕುಂಭ: ಆರೋಗ್ಯ, ಆಹಾರ ಇವೆರಡರ ಕಡೆಗೂ ಗಮನ ಹರಿಸುವುದು ಅಗತ್ಯ. ಉದ್ಯೋಗದಲ್ಲಿ ಏಕಾಂಗಿಯಾಗಿ ಎಸಗಿದ ಕಾರ್ಯಕ್ಕೆ ಪ್ರಶಂಸೆ. ದೂರದಲ್ಲಿರುವ ಬಂಧುಗಳ ಕಡೆಯಿಂದ ವ್ಯವಹಾರದ ಬಗ್ಗೆ ಉಪಯುಕ್ತ ಸಲಹೆ. ಮನೆಯಲ್ಲಿ ನೆಮ್ಮದಿ.

ಮೀನ: ಯಶಸ್ಸಿನ ದಿನ. ಉದ್ಯೋಗದಲ್ಲಿ ಮುನ್ನಡೆ. ಪಾಲುದಾರರಿಂದ ಒಳ್ಳೆಯ ರೀತಿಯಲ್ಲಿ ಸ್ಪಂದನೆ ಹಾಗೂ ಸಹಕಾರ. ಸರಕಾರಿ ಕಾರ್ಯಾಲಯ ಕಡೆಯ ವ್ಯವಹಾರಗಳು ಸುಲಭ. ದೇವತಾ ಕಾರ್ಯ ಹಾಗೂ ಸಮಾಜ ಸೇವೆಯ ಶುಭಫ‌ಲಗಳು ಕೈಸೇರುವ ಸಮಯ. ಗಣೇಶ, ಶಿವ, ವಿಷ್ಣು, ಆಂಜನೇಯರ ಸೇವೆಯಿಂದ ಕಷ್ಟಗಳು ದೂರ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next