Advertisement

Daily Horoscope: ಒಂದರಲ್ಲಿ ಲಾಭ, ಇನ್ನೊಂದರಲ್ಲಿ ನಷ್ಟ – ಹೀಗೆ ಮಿಶ್ರ ಫ‌ಲಗಳು

07:19 AM Oct 19, 2024 | Team Udayavani |

ಮೇಷ: ಒಂದರಲ್ಲಿ ಲಾಭ, ಇನ್ನೊಂದರಲ್ಲಿ ನಷ್ಟ – ಹೀಗೆ ಮಿಶ್ರ ಫ‌ಲಗಳು. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟದ ಸಾಧ್ಯತೆ. ಅಂತರ್ಮುಖತೆ ಸಾಧಿಸುವ ಪ್ರಯತ್ನ.

Advertisement

ವೃಷಭ: ಕೆಲವು ವೃತ್ತಿಯವರಿಗೆ ಸಮಯ ದೊಂದಿಗೆ ಸೆಣಸಾಟ. ವಸ್ತ್ರೋದ್ಯಮದಲ್ಲಿ ಲಾಭ. ಎಲ್ಲ ಕ್ಷೇತ್ರಗಳಲ್ಲೂ ತಡೆಯಿಲ್ಲದ ಪ್ರಗತಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯ ವೃದ್ಧಿ. ಹತ್ತಿರದ ದೇವೀಕ್ಷೇತ್ರಕ್ಕೆ ಭೇಟಿ.

ಮಿಥುನ: ಆಲಸ್ಯವನ್ನು ತೊಲಗಿಸಿದರೆ ಕ್ಷೇಮ. ತೋಟಗಾರಿಕೆ, ಜೇನು ವ್ಯವಸಾಯ ಆಸಕ್ತರಿಗೆ ಅನುಕೂಲ. ನೌಕರರ ವೇತನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ. ಧಾರ್ಮಿಕ ಸಾಹಿತ್ಯ ಅಧ್ಯಯನ. ಮನೆಯವರ ಆರೋಗ್ಯ ಸುಧಾರಣೆ.

ಕರ್ಕಾಟಕ: ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು. ಉದ್ಯಮಗಳಿಗೆ ಅನುಕೂಲ ವಾತಾವರಣ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ಗೃಹೋತ್ಪನ್ನಗಳಿಂದ ಅಧಿಕ ಆದಾಯ. ವಧೂ ಅನ್ವೇಷಕರಿಗೆ ಶುಭ ಸೂಚನೆ.

ಸಿಂಹ: ಪಾಲುದಾರಿಕೆ ಉದ್ಯಮದಲ್ಲಿ ನಿರೀಕ್ಷಿತ ಯಶಸ್ಸು. ಸರಕಾರಿ ನೌಕರರಿಗೆ ಆತಂಕದ ಭಾವ.ಸ್ವೋದ್ಯೋಗಿ ಮಹಿಳೆಯರಿಗೆ ಸರ್ವತ್ರ ಯಶಸ್ಸು. ಕುಟುಂಬದ ಆಸ್ತಿ ವಿವಾದ ಸೌಹಾರ್ದಯುತವಾಗಿ ಪರಿಹಾರ.

Advertisement

ಕನ್ಯಾ: ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ವಿಶೇಷ ದೇವತಾ ಕಾರ್ಯ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಮಕ್ಕಳ ಶಿಕ್ಷಣ ಮುಂದು ವರಿಸಲು ಯೋಗ್ಯ ವ್ಯವಸ್ಥೆ.

ತುಲಾ: ಉದ್ಯೋಗ ನಿರ್ವಹಣೆಯಲ್ಲಿ ಸಮಾಧಾನ. ಸಣ್ಣ ಉದ್ಯಮಿಗಳಿಗೆ ಉತ್ತಮ ಲಾಭ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಉದ್ಯೋಗ, ವ್ಯವಹಾರ, ಎರಡರಲ್ಲೂ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಲಾಭ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಕುಟುಂಬದೊಳಗಿನ ವಿವಾದ ಸಂವಾದದಿಂದ ಪರಿಹಾರ.

ಧನು: ಉದ್ಯೋಗ ಸ್ಥಾನದಲ್ಲಿ ಕ್ಲಪ್ತ ಸಮಯದಲ್ಲಿ ಕಾರ್ಯ. ವ್ಯಾಪಾರಿಗಳಿಗೆ ಹೇರಳ ಆದಾಯ. ಹತ್ತಿರದ ಬಂಧುಗಳಿಂದ ಶುಭ ಸಮಾಚಾರ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ.

ಮಕರ: ಸಹೋದ್ಯೋಗಿಗಳಿಂದ ವಿಶೇಷ ಸಹಕಾರ. ಕಟ್ಟಡ ನಿರ್ಮಾಪಕರಿಗೆ ಸಾಮಗ್ರಿಗಳ ಸಮಸ್ಯೆ. ಗೆಳೆಯರಿಂದ ಪಾಲುದಾರಿಕೆ ವ್ಯವಹಾರ ಪ್ರಸ್ತಾವ. ಬಂಧುಗಳ ಮನೆಗೆ ಆಕಸ್ಮಿಕ ಭೇಟಿ. ಹಳೆಯ ಬಾಕಿ ವಸೂಲಿ.

ಕುಂಭ: ಹೊಸ ಕಾರ್ಯ ಕೈಗೊಳ್ಳಲು ಪೂರಕವಾದ ವಾತಾವರಣ. ಉದ್ಯಮದ ಉತ್ಪನ್ನಗಳಿಗೆ ಸರ್ವತ್ರ ಬೇಡಿಕೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ಸಮಾಜ ಸೇವಾ ಕಾರ್ಯಗಳು ಮುಂದುವರಿಕೆ.

ಮೀನ: ನಿಯೋಜಿತ ಕಾರ್ಯಗಳು ತೀವ್ರಗತಿಯಲ್ಲಿ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ. ಗುರುಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ಹೊಸ ಕಾರ್ಯಯೋಜನೆಗೆ ಸಿದ್ಧತೆ.

Advertisement

Udayavani is now on Telegram. Click here to join our channel and stay updated with the latest news.

Next