Advertisement

Daily Horoscope: ಹಿತಶತ್ರುಗಳ ಬಾಧೆಯಿಂದ ಪಾರು, ಇಷ್ಟದೇವರಿಂದ ರಕ್ಷಣೆ

07:57 AM Oct 18, 2023 | Team Udayavani |

ಮೇಷ: ಶುಭದಿನ. ಉದ್ಯೋಗ ಕ್ಷೇತ್ರ ದಲ್ಲಿ ಲವಲವಿಕೆಯ ವಾತಾವರಣ.ಮೇಲಧಿಕಾರಿ ಗಳಿಂದ ಪ್ರೋತ್ಸಾಹದ ನುಡಿ. ಸ್ವಂತ ಉದ್ಯಮದ ಸರ್ವತೋ ಮುಖ ಅಭಿವೃದ್ಧಿಯ ಲಕ್ಷಣಗಳು ಗೋಚರ. ಮನೆಯಲ್ಲಿ ಪೂಜಾದಿಗಳ ಸಂಭ್ರಮ. ಬಂಧುಮಿತ್ರರ ಆಗಮನ.

Advertisement

ವೃಷಭ: ಮನೆಯಲ್ಲಿ ಸಂಭ್ರಮಾಚರಣೆಯ ನಡುವೆ ಉದ್ಯೋಗ ಕ್ಷೇತ್ರದತ್ತ ಗಮನ. ಸಾಧನೆಗಳ ಬಗ್ಗೆ ಸಹೋದ್ಯೋಗಿಗಳ ಶ್ಲಾಘನೆ. ಪಾಲು ದಾರಿಕೆ ವ್ಯವಹಾರದಲ್ಲಿ ಗಣನೀಯ ಪ್ರಗತಿ, ಲಾಭ ಹೆಚ್ಚಳ. ಕಟ್ಟಡ ನಿರ್ಮಾಪಕರಿಗೆ, ಆದಾಯ ವೃದ್ಧಿ.

ಮಿಥುನ: ಹಿತಶತ್ರುಗಳ ಬಾಧೆಯಿಂದ ಪಾರು. ಇಷ್ಟದೇವರಿಂದ ರಕ್ಷಣೆ. ದೇವತಾರ್ಚನೆಯಲ್ಲಿ ಮನಸ್ಸು ಮಗ್ನ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ನಿರಾತಂಕ. ಹಿರಿಯ ವ್ಯಕ್ತಿಗಳಿಂದ ಪ್ರೋತ್ಸಾಹ. ಸ್ವಂತ ಉದ್ಯಮ ಪ್ರಗತಿಯ ಪಥದಲ್ಲಿ. ನೌಕರ ವರ್ಗದಿಂದ ಉತ್ತಮ ಸಹಕಾರ.

ಕರ್ಕಾಟಕ: ಗಣೇಶ, ದೇವಿಯರ ದಯೆಯಿಂದ ಸಂಕಟಗಳು ದೂರ. ಉದ್ಯೋಗದಲ್ಲಿ ಏಳಿಗೆಯ ಸ್ಥಿತಿ. ಪ್ರತಿಭೆಗೆ ಪ್ರೋತ್ಸಾಹ. ಸ್ವಂತ ಉದ್ಯಮದ ಸಮಸ್ಯೆಗಳ ಪರಿಹಾರ. ಅಲ್ಪಾವಧಿ ಹೂಡಿಕೆಗಳು ಬೇಡ. ದೀರ್ಘಾವಧಿ ಯೋಜನೆಗಳ ಅನ್ವೇಷಣೆ.ಉದ್ಯೋಗಾಸಕ್ತರಿಗೆ ಅವಕಾಶ.

ಸಿಂಹ: ಉದ್ಯೋಗ, ವ್ಯವಹಾರಗಳ ನಡುವೆ ಗೃಹ ಕೃತ್ಯಗಳಿಗೆ ಸಂಬಂಧಪಟ್ಟಂತೆ ಕರ್ತವ್ಯದ ಕರೆ. ಹಿರಿಯ ಬಂಧು ಆಗಮನ.ದೇವಾಲಯ ದರ್ಶನ. ವ್ಯವಹಾರದ ಸಂಬಂಧ ಪೂರ್ವದ ಕಡೆಗೆ ಪ್ರಯಾಣದ ಸಿದ್ಧತೆ.ಸ್ವಂತದ ಉದ್ಯಮದ ವ್ಯವಹಾರ ಕ್ಷೇತ್ರ ವಿಸ್ತರಣೆ.

Advertisement

ಕನ್ಯಾ: ಸಾಂಸಾರಿಕ ಜೀವನ ಒಂದು ನೆಲೆಗೆ ಬರುವ ದಮಯ ಸನ್ನಿಹಿತ. ಸೋದರಿಗೆ ವಿವಾಹ ಯೋಗ.ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ಗೌರವ.ವಿದ್ಯುತ್‌, ಎಲೆಕ್ಟ್ರಾನಿಕ್ಸ್‌ ಸಾಮಗ್ರಿಗಳ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಆದಾಯ. ಬ್ಯಾಂಕ್‌ ಹಾಗೂ ವಿತ್ತಸಂಸ್ಥೆ ನೌಕರರಿಗೆ ಅನುಕೂಲದ ದಿನ.

ತುಲಾ: ಮಕ್ಕಳಿಂದ ಸಮಾಧಾನ.ಉದ್ಯೋಗ ಸ್ಥಾನ ದಲ್ಲಿ ಕಿರಿಕಿರಿ. ಅಸೂಯಾಪರರಿಂದ ಕಾಟ. ಹಳೆಯ ಒಡನಾಡಿಯ ಭೇಟಿಯಿಂದ ಜೀವನೋತ್ಸಾಹ ವೃದ್ಧಿ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.ಹತ್ತಿರದ ದೇವಮಂದಿರಕ್ಕೆ ಭೇಟಿ.

ವೃಶ್ಚಿಕ: ಶುಭಫ‌ಲಗಳ ದಿನ. ಮನೆಯಲ್ಲಿ ಹಬ್ಬದ ವಾತಾವರಣ. ಬಂಧುಗಳ ಆಗಮನದಿಂದ ಆನಂದ. ಬದುಕಿನಲ್ಲಿ ಆಶಾಭಾವನೆಗೆ ಪುಷ್ಟಿ ನೀಡುವ ಸನ್ನಿವೇಶಗಳ ಸರಣಿ. ಉದ್ಯೋಗದಲ್ಲಿ ಮುನ್ನಡೆ. ಸ್ವಂತ ವ್ಯವಹಾರ ಸುಧಾರಣೆಗೆ ಹಿತೈಷಿಗಳಿಂದ ಸಹಾಯ.

ಧನು: ವ್ಯಾಪಾರದಲ್ಲಿ ಅಭಿವೃದ್ಧಿ. ಕೃಷಿ ಉದ್ದೇಶಕ್ಕಾಗಿ ಭೂಮಿಯನ್ನು ಅರಸುತ್ತಿದ್ದವರಿಗೆ ಭೂಮಿ ಲಭ್ಯ. ಹೊಸ ಕೈಗಾರಿಕೆ ಆರಂಭಿಸುವ ಯೋಜನೆ ಅನುಷ್ಠಾನ ವಿಳಂಬ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ.ಹೊಸ ಉದ್ಯೋಗ ಅರಸುವವರಿಗೆ ಅವಕಾಶ ಲಭ್ಯ.

ಮಕರ: ಮಕ್ಕಳ ಆರೋಗ್ಯದ ಚಿಂತೆಗೆ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಎಂದಿನಂತೆ ಕೆಲಸದ ಒತ್ತಡ. ಸ್ವಂತದ ಉದ್ಯಮಗಳ ಗುಣಮಟ್ಟ ಸುಧಾರಣೆ. ಸಮಾಜದಲ್ಲಿ ಗೌರವದ ಸ್ಥಾನ ಪ್ರಾಪ್ತಿ. ತಾಯಿಯ ಕಡೆಯ ಬಂಧುಗಳ ಭೇಟಿಯ ಸಾಧ್ಯತೆ.

ಕುಂಭ: ಗಳಿಕೆಯ ಹಣ ಸದ್ವಿನಿಯೋಗದ ಸಮಾಧಾನ. ಸಮಾಜ ಕಾರ್ಯದಲ್ಲಿ ತೊಡ ಗಲು ಪ್ರೇರಣೆ. ನೂತನ ವಾಹನ ಖರೀದಿ ಸಂಭವ. ಅಕಸ್ಮಾತ್‌ ಧನಾಗಮ ಸಂಭವ.ಕಿರಿಯರಿಗೆ ಬದುಕು ಕಟ್ಟಿ ಕೊಳ್ಳಲು ಮಾರ್ಗದರ್ಶನ ಮಾಡುವ  ಅವಕಾಶ.

ಮೀನ: ಶನಿಮಹಾತ್ಮನ ಪ್ರಭಾವದಿಂದ ಉದ್ಯೋಗ ಬದಲಾವಣೆ ಅಥವಾ ವಿಭಾಗ ಬದಲಾವಣೆ ಸಂಭವ. ಸರಕಾರಿ ಕಾರ್ಯಾಲಯಗಳಲ್ಲಿ ಅಧಿಕಾರಿಗಳು ಮತ್ತು ನೌಕರರದ ಸಕಾರಾತ್ಮಕ ಸ್ಪಂದನೆಯ ಪರಿಣಾಮವಾಗಿ ಕಾರ್ಯ ಸುಗಮ.ಗುರು ಕೃಪೆಯಿಂದ ಸಮಾಜದಲ್ಲಿ ಗೌರವ ವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ.ಮನೆಯಲ್ಲಿ ಸೌಹಾರ್ದದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next