Advertisement

Horoscope: ಸ್ವಂತ ಉದ್ಯಮಕ್ಕೆ ಎದುರಾದ ಸಮಸ್ಯೆಗಳು ದೂರ, ಆರೋಗ್ಯದ ಬಗ್ಗೆ ಅನವಶ್ಯ ಭೀತಿ

07:18 AM Nov 04, 2023 | Team Udayavani |

ಮೇಷ: ಚಿಂತಾರಹಿತವಾಗಿ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ನಿರಾತಂಕದ ವಾತಾವರಣ. ಹೆಚ್ಚುವರಿ ಜವಾಬ್ದಾರಿಗಳ ಯಶಸ್ವಿ ನಿರ್ವಹಣೆ. ಸ್ವಂತ ಉದ್ಯಮಕ್ಕೆ ಎದುರಾದ ಸಮಸ್ಯೆಗಳು ದೂರ. ವಾಹನ ಬಿಡಿಭಾಗ ಮಾರಾಟಗಾರರ ಆದಾಯ ವೃದ್ಧಿ.

Advertisement

ವೃಷಭ: ಆತಂಕ ತೊರೆದು ನಿಧಾನವಾಗಿ ಕ್ರಮಿಸುವುದರಿಂದ ಕಾರ್ಯದಲ್ಲಿ ಜಯ. ಉದ್ಯೋಗದಲ್ಲಿ ನಿಧಾನವಾಗಿ ಪ್ರಗತಿ. ಗೆಳೆಯರ ಬಳಗದ ಭೇಟಿ. ಹೊಸ ವ್ಯವಹಾರ ಆರಂಭಿಸುವ ಕುರಿತು ಸಮಾಲೋಚನೆ. ಕೃಷಿ ಭೂಮಿ ಅಭಿವೃದ್ಧಿಗೆ ಯೋಜನೆ.

ಮಿಥುನ: ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ಮನ್ನಣೆ. ಸ್ವಂತ ಉದ್ಯಮ ಸ್ಥಾಪನೆಗೆ ಪ್ರಯತ್ನ. ಉದ್ಯಮಿಗಳಿಗೆ ಪೈಪೋಟಿಯ ಸಮಸ್ಯೆ. ಬಂಧುವರ್ಗದಿಂದ ಶುಭ ಸಮಾಚಾರ. ಆಪ್ತರಿಂದ ಅಯಾಚಿತ ಸಹಾಯ. ಅಧ್ಯಾತ್ಮ ಚಿಂತನೆ, ಧ್ಯಾನದಲ್ಲಿ ತಲ್ಲೀನತೆ.

ಕರ್ಕಾಟಕ: ಆರೋಗ್ಯದ ಬಗ್ಗೆ ಅನವಶ್ಯ ಭೀತಿ. ಉದ್ಯೋಗದಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದ ರಿಂದ ಸಮಾಧಾನ. ಸ್ವಂತ ಉದ್ಯಮದವರಿಗೆ ಸರಕಾರಿ ಇಲಾಖೆಯವರಿಂದ ಕಿರಿಕಿರಿ. ಮನೆಮಕ್ಕಳ ವಿವಾಹದ ಚಿಂತೆ. ಶಿಕ್ಷಣ ಪೂರೈಸಿದ ಮಕ್ಕಳಿಂದ ಉದ್ಯೋಗ ಅನ್ವೇಷಣೆ.

ಸಿಂಹ: ರಾಶಿಯ ಹೆಸರಿಗೆ ಸರಿಯಾದ ಗುಣವಿರುವ ಕಾರಣ ಹಿಂಜರಿಯುವ ಪ್ರಶ್ನೆಯಿಲ್ಲ. ಉದ್ಯೋಗ ದಲ್ಲಿ ಗೌರವದ ಸ್ಥಾನ ಪ್ರಾಪ್ತಿ. ಸಹೋದ್ಯೋಗಿಗಳಿಂದ ಸಲಹೆ ಯಾಚನೆ. ಮುದ್ರಣ ವ್ಯವಸಾಯಗಾರರ ಆದಾಯ ವೃದ್ಧಿ. ಕೃಷಿ ಉತ್ಪಾದನೆ ಹೆಚ್ಚಳ.

Advertisement

ಕನ್ಯಾ: ಇಷ್ಟದೇವರ ಅರ್ಚನೆಯಿಂದ ಶುಭ. ಉದ್ಯೋಗದಲ್ಲಿ ಸ್ಥಿರತೆ. ಕಾರ್ಯದಕ್ಷತೆಗೆ ಮೇಲಧಿ ಕಾರಿಗಳ ಮೆಚ್ಚುಗೆ. ಕುಟುಂಬದ ಆಸ್ತಿ ಅಭಿವೃದ್ಧಿ ಪ್ರಯತ್ನಕ್ಕೆ ಜಯ. ಹಿರಿಯರ ಯೋಗಕ್ಷೇಮ ವಿಚಾರಣೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.

ತುಲಾ: ಸ್ವಂತ ಆರೋಗ್ಯದ ಕಡೆಗೆ ಗಮನ ಇರಲಿ. ಅಧ್ಯಾಪಕ ವೃತ್ತಿಯವರಿಗೆ ಮನಸ್ಸಂತೃಪ್ತಿ. ಉದ್ಯಮಿಗಳಿಗೆ ಪೈಪೋಟಿ ಮತ್ತು ಗುಣಮಟ್ಟ ಪಾಲನೆಯ ಸಮಸ್ಯೆ. ಹತ್ತಿರದ ದೇವಾಲಯಕ್ಕೆ ಭೇಟಿ. ಮನೆಯಲ್ಲಿ ದೇವತಾ ಕಾರ್ಯದ ಸಿದ್ಧತೆ. ಮಕ್ಕಳಿಗೆ ಸಂಭ್ರಮ.

ವೃಶ್ಚಿಕ: ಪರಿಸರದಲ್ಲಿ ಕಿರಿಕಿರಿಯ ವಾತಾವರಣ. ಉದ್ಯೋಗ ಸ್ಥಾನದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯೋಗ ಅರಸುತ್ತಿರುವವರಿಗೆ ಹೊಸ ಅವಕಾಶಗಳು ಗೋಚರ. ಹುದ್ದೆ ಬದಲಾಯಿಸುವವರಿಗೆ ಸದವಕಾಶ. ದೇವತಾರ್ಚನೆ, ಅಧ್ಯಾತ್ಮ ಧ್ಯಾನ, ಸತ್ಸಂಗಗಳಲ್ಲಿ ಪಾಲುಗೊಳ್ಳಲು ಆಸಕ್ತಿ.

ಧನು: ಆರೋಗ್ಯ ಸಾಮಾನ್ಯಮಟ್ಟಿಗೆ ತೃಪ್ತಿಕರ. ಉದ್ಯೋಗದಲ್ಲಿ ತೃಪ್ತಿ. ಸರಕಾರಿ ಕಾರ್ಯಾಲಯಕ್ಕೆ ಭೇಟಿ. ಗುರು ಸ್ಥಾನದಲ್ಲಿರುವ ವ್ಯಕ್ತಿಯ ಆಶೀರ್ವಾದದಿಂದ ಮನೋಕಾಮನೆಗಳು ಪೂರ್ತಿಗೊಂಡು ನಿರಾಳ ಭಾವ. ಮನೆಯಲ್ಲಿ ಸಾಮರಸ್ಯ.

ಮಕರ: ಆಯ್ಕೆಗಳ ವಿಷಯದಲ್ಲಿ ಗೊಂದಲ. ಗಣೇಶನ ಪ್ರಾರ್ಥನೆಯಿಂದ ಸಮಸ್ಯೆ ಪರಿಹಾರ. ಉದ್ಯೋಗ ಸ್ಥಾನದಲ್ಲಿ ಆಪ್ತರ ಸಹಾಯ. ಸರಕಾರಿ ಕಚೇರಿ ಭೇಟಿ ಫ‌ಲಪ್ರದ. ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ. ಧಾರ್ಮಿಕ ಕ್ಷೇತ್ರ ದರ್ಶನದಿಂದ ಮನಸ್ಸಿಗೆ ನೆಮ್ಮದಿ.

ಕುಂಭ: ದೈಹಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಳದಲ್ಲಿ ವಿಶೇಷ ಸ್ಥಾನಮಾನ ಪ್ರಾಪ್ತಿ. ಸ್ವಂತ ಉದ್ಯಮ ಉತ್ತುಂಗ ಸ್ಥಿತಿಯಲ್ಲಿ. ಧಾರ್ಮಿಕ ಕ್ಷೇತ್ರ, ಶಾಲೆ ಅಭಿವೃದ್ಧಿಯಲ್ಲಿ ಆಸಕ್ತಿ. ಸಣ್ಣ ತೀರ್ಥಯಾತ್ರೆಗೆ ಹೊರಡುವ ಯೋಚನೆ. ಕುಟುಂಬದ ಹಿರಿಯ ಸದಸ್ಯರೊಡನೆ ಸಮಾಗಮ. ಮನೆಯಲ್ಲಿ ಉಲ್ಲಾಸದ ವಾತಾವರಣ.

ಮೀನ: ಶನಿಮಹಾತ್ಮನ ಕೃಪೆ! ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ಮುಂದುವರಿಯುವ ಮನಸ್ಥಿತಿ. ಉದ್ಯೋಗದಲ್ಲಿ ಯಶಸ್ಸು. ಸರಕಾರಿ ಇಲಾಖೆಯಿಂದ ಉತ್ತಮ ಸ್ಪಂದನ. ಸೇವಾರೂಪದ ಉದ್ಯೋಗಗಳನ್ನು ನಡೆಸುವವರಿಗೆ ಸರ್ವತ್ರ ಮನ್ನಣೆ. ಹಿರಿಯರು ಹಾಕಿದ ಬುನಾದಿಯ ಮೇಲೆ ಕಟ್ಟಿದ ಸೌಧವನ್ನು ಭವ್ಯವಾಗಿ ಬೆಳೆಸುವ ಹಂಬಲ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ಸಾಮರಸ್ಯದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next