Advertisement

ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣ, ನಿರಂತರ ಧನಾಗಮನ: ಹೇಗಿದೆ ಇಂದಿನ ಗ್ರಹಬಲ ?

07:21 AM Mar 02, 2021 | Team Udayavani |

ಮೇಷ: ಅವಿವಾಹಿತರಿಗೆ ವೈವಾಹಿಕ ಸುಖದ ಭಾಗ್ಯ ಒದಗಿ ಬರುತ್ತದೆ. ಬೇಸಾಯದ ಕೆಲಸ ಕಾರ್ಯಗಳು ಮುಂದುವರಿಯಲಿವೆ. ಉದರ ಸಂಬಂಧಿ ಅನಾರೋಗ್ಯ ನಿಮಿತ್ತ ಕಾಳಜಿ ವಹಿಸಬೇಕಾದೀತು. ಧನದಾಯ ಸಂಗ್ರಹ ವರ್ಧಿಸಲಿದೆ.

Advertisement

ವೃಷಭ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲೆದಾಟ ಬೇಸರ ತಂದೀತು. ವ್ಯಾಪಾರ ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆ ಇದ್ದರೂ ನಷ್ಟವಿಲ್ಲ. ವಿದ್ಯಾರ್ಥಿಗಳು ಪ್ರಯತ್ನ ಬಲ ಹೆಚ್ಚಿಸಬೇಕಾದೀತು. ಧನ ವಿನಿಯೋಗದಲ್ಲಿ ಹೆಚ್ಚಿನ ಜಾಗ್ರತೆ.

ಮಿಥುನ: ಆರೋಗ್ಯ ಭಾಗ್ಯಕ್ಕಾಗಿ ಚಿಕಿತ್ಸೆಗಳ ಖರ್ಚು ತಂದೀತು. ಅನಾವಶ್ಯಕವಾಗಿ ನೆರೆಹೊರೆಯವರೊಡನೆ ಅಸಮಾಧಾನ ತಂದೀತು. ಆರ್ಥಿಕವಾಗಿ ಧಾರಾಳಿಗಳಾದ ನಿಮಗೆ ಖರ್ಚು ಅಧಿಕವಾಗಲಿದೆ. ಮನಸ್ಸನ್ನು ಆದಷ್ಟು ಶಾಂತಗೊಳಿಸಿರಿ.

ಕರ್ಕ: ತೀರ್ಥಯಾತ್ರೆ, ದೇವತಾದರ್ಶನ ಭಾಗ್ಯ ತಂದೀತು. ವೃತ್ತಿರಂಗದಲ್ಲಿ ಸುಧಾರಿಸಿಕೊಂಡು ಹೋಗುವ ವಾತಾವರಣವಿದ್ದರೂ ಕಿರಿಕಿರಿ ತಪ್ಪದು. ಕೃಷಿ ಕ್ಷೇತ್ರದಲ್ಲಿ ಮುನ್ನಡೆ ತೋರಿಬರುತ್ತೆ. ವಿದ್ಯಾರ್ಥಿಗಳ ಅಭ್ಯಾಸಬಲಕ್ಕೆ ನಿರೀಕ್ಷಿತ ಯಶಸ್ಸಿದೆ.

ಸಿಂಹ: ನಿರುದ್ಯೋಗಿಗಳಿಗೆ ಇದು ಉದ್ಯೋಗ ಆರಂಭದ ಕಾಲವಾಗಿದ್ದು, ಸದುಪಯೋಗ ನಿಮ್ಮದಾಗಿರಲಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಮುಂದುವರಿಯಲಿವೆ. ವೃತ್ತಿರಂಗದಲ್ಲಿ ಸ್ಥಾನ, ಉದ್ಯೋಗ ಬದಲಾವಣೆಯ ಕನಸು ನನಸಾಗಲಿದೆ.

Advertisement

ಕನ್ಯಾ: ಸಂಚಾರ, ಆರೋಗ್ಯದ ಬಗ್ಗೆ ಕಾಳಜಿವಹಿಸಿರಿ. ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ, ಸಲಹೆ-ಸೂಚನೆಗಳಿಗೆ ಭಂಗ ತಂದೀತು. ಆರ್ಥಿಕವಾಗಿ ಹಣಕಾಸಿನ ಪದ್ಧತಿ ಏರುಪೇರಾಗುತ್ತಲೇ ಮುಂದುವರಿಯುತ್ತದೆ.

ತುಲಾ: ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ. ತಾಳ್ಮೆ, ಸಹನೆಯಿಂದ ಮುಂದುವರಿದಲ್ಲಿ ಮುನ್ನಡೆಗೆ ಸಾಧಕವಾಗುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ನಿರ್ಲಕ್ಷ್ಯ ತೋರದಿರಿ.

ವೃಶ್ಚಿಕ: ಸ್ವಂತ ದುಡಿಮೆಯವರಿಗೆ ಎಚ್ಚರಿಕೆ ಅಗತ್ಯ. ಆಗಾಗ ಆರ್ಥಿಕ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಋಣಬಾಧೆ ಕಾಡಲಿದೆ. ಕೆಲವೊಂದು ಸಮಸ್ಯೆಗಳು ಬಹಿರಂಗ ಗೊಂಡು ರಾದ್ದಾಂತವಾದೀತು. ವಾರಾಂತ್ಯ ಶುಭವಿದೆ.

ಧನು: ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣ ಗೊಂಡಾವು. ಆರ್ಥಿಕವಾಗಿ ಎಷ್ಟೇ ಖರ್ಚು- ವೆಚ್ಚಗಳಿದ್ದರೂ ನಿರಂತರ ಧನಾಗಮನದಿಂದ ತೊಂದರೆ ಇರದು. ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆ ಅನುಭವಕ್ಕೆ ಬರುತ್ತದೆ.

ಮಕರ: ಕಾರ್ಯದಲ್ಲಿ ಜಯವಿದೆ. ತಂದೆಯಾ ಹಿರಿಯರಿಗೆ ಸೇವಾ ಶುಶ್ರೂಷೆ ಸಲ್ಲಲಿದೆ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ಮುನ್ನಡೆಗೆ ಸಾಧಕವಾಗುತ್ತವೆ. ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ.

ಕುಂಭ: ಸಾಂಸಾರಿಕವಾಗಿ ಆಂತರಿಕ ಸ್ಥಿತಿ-ಗತಿಗಳು ನಿರೀಕ್ಷಿತ ರೀತಿಯಲ್ಲಿ ನಡೆದು ಸಮಾಧಾನ ತಂದು ಕೊಡುತ್ತವೆ. ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಜಾಗ್ರತೆ ಬೇಕೇ ಬೇಕು. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಂಡಾವು.

ಮೀನ: ಆಗಾಗ ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಲಿವೆ. ಆದರೆ ನಿಮ್ಮ ಅರ್ಥಿಕ ಸ್ಥಿತಿಯು ಒಂದು ಹಂತದಲ್ಲಿ ವೃದ್ಧಿಗೊಳ್ಳುತ್ತಲೇ ಹೋಗುತ್ತದೆ. ದೂರ ಸಂಚಾರದಿಂದ ನಿರೀಕ್ಷಿತ ಕಾರ್ಯ ಸಿದ್ಧಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next