Advertisement

Daily Horoscope: ತರಾತುರಿಯಲ್ಲಿ ಕಾರ್ಯ ಮುಗಿಸುವ ಪ್ರಯತ್ನ ಬೇಡ, ವ್ಯವಹಾರದಲ್ಲಿ ಲಾಭ

07:12 AM Mar 15, 2024 | Team Udayavani |

ಮೇಷ: ಹಳೆಯ ಸಮಸ್ಯೆ ಸುಲಭದಲ್ಲಿ ನಿವಾರಣೆ. ಉದ್ಯಮ ವೈವಿಧ್ಯೀಕರಣ ಯೋಜನೆಗೆ ಚಾಲನೆ. ಹೊಸ ಪಾಲುದಾರರ ಸೇರ್ಪಡೆಯಿಂದ ಲಾಭ. ಒಂದೇ ಲಕ್ಷ್ಯವನ್ನು ಸಾಧಿಸಲು ಸರ್ವಶಕ್ತಿಯಿಂದ ಪ್ರಯತ್ನಿಸಿ. ಲೇವಾದೇವಿ ವ್ಯವಹಾರದಿಂದ ದೂರವಿರಿ.

Advertisement

ವೃಷಭ: ತರಾತುರಿಯಲ್ಲಿ ಕಾರ್ಯ ಮುಗಿಸುವ ಪ್ರಯತ್ನ ಬೇಡ. ಹಿತಶತ್ರುಗಳ ಬಾಧೆಯಿಂದ ಪಾರಾಗುವ ಮಾರ್ಗವನ್ನು ಹುಡುಕಿ. ಉದ್ಯೋಗ ಸ್ಥಾನದಲ್ಲಿ ಗೌರವದ ನೆಲೆ. ಉದ್ಯಮದಲ್ಲಿ ಪೈಪೋಟಿಯ ಸಮಸ್ಯೆ. ಮನೆಯಲ್ಲಿ ಶಾಂತಿ, ನೆಮ್ಮದಿ.

ಮಿಥುನ: ಸಂಬಂಧಗಳ ನಡುವೆ ಸಮ ತೋಲನ ಪಾಲನೆ. ಉದ್ಯೋಗ ಸ್ಥಾನದಲ್ಲಿ ಅನುಕೂಲ. ಸ್ವಂತ ಉದ್ಯಮ ಆಡಳಿತ ಸಮಸ್ಯೆ ಪರಿಹಾರ. ಪಾಲುದಾರಿಕೆ ಉದ್ಯಮ ಅನುಕೂಲಕರ. ಪರಿಣತರ ಸಲಹೆಯಿಂದ ಸಮಾಧಾನ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ಕಾರ್ಯತತ್ಪರತೆಗೆ ಶ್ಲಾಘನೆ. ಹೊಸ ಉದ್ಯಮ ಆರಂಭಕ್ಕೆ ಚಿಂತನೆ. ಮನೆಗೆ ಬಂದ ನೆಂಟರಿಗೆ ಹರ್ಷ. ದೇವತಾ ಕಾರ್ಯದಲ್ಲಿ ಭಾಗಿ. ವ್ಯವಹಾರ ಸಂಬಂಧ ಪಶ್ಚಿಮಕ್ಕೆ ಪ್ರಯಾಣ.

ಸಿಂಹ: ನಡೆದು ಬಂದ ದಾರಿಯ ಅವ ಲೋಕನ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ನೌಕರ ವೃಂದಕ್ಕೆ ಸಂತೃಪ್ತಿ. ಹೊಸ ವಿದ್ಯೆಯನ್ನು ಕಲಿಯುವ ಆಸಕ್ತಿ. ಕುಟುಂಬ ಕಲಹ ಪರಿಹಾರ. ವೇದಾಧ್ಯಯನಕ್ಕೆ ಪ್ರೋತ್ಸಾಹ.

Advertisement

ಕನ್ಯಾ: ಬದುಕಿನ ಜಂಜಾಟಗಳ ನಡುವೆ ಆನಂದ ವನ್ನು ಅರಸುವ ಪ್ರಯತ್ನ. ಹೊಸ ವ್ಯಕ್ತಿಗಳ ಪರಿಚಯ. ಉದ್ಯೋಗ ಸ್ಥಳದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ನೆರವು. ಧ್ಯಾನ ಮಾರ್ಗದ ಮೂಲಕ ಸ್ಥಿರ ಚಿತ್ತ ಪ್ರಾಪ್ತಿ.

ತುಲಾ: ಇಷ್ಟಾರ್ಥ ಸಿದ್ಧಿಗಾಗಿ ದೇವತಾರ್ಚನೆ. ನೆಮ್ಮದಿ ಅನ್ವೇಷಣೆಯಲ್ಲಿ ಯಶಸ್ವಿ ಯಾಗಿದ್ದೀರಿ. ಹೊಸ ಸಹೋದ್ಯೋಗಿಗಳ ಸೇರ್ಪಡೆ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಗೃಹೋಪಯೋಗಿ ಸಾಧನಗಳ ಖರೀದಿ. ಕುಟುಂಬದ ಸದಸ್ಯರೆಲ್ಲರಿಗೂ ಆರೋಗ್ಯ.

ವೃಶ್ಚಿಕ: ಅರಸದೆ ಬಂದ ಸುಖವನ್ನು ಅನುಭವಿ ಸುವ ಆನಂದ. ಉದ್ಯೋಗದಲ್ಲಿ ವೇತನ ವೃದ್ಧಿ. ಉದ್ಯಮಕ್ಕೆ ಹೊಸ ನೌಕರರ ಸೇರ್ಪಡೆ. ಕಾರ್ಮಿಕ ಸಂಬಂಧಿ ವಿವಾದ ಪರಿಹಾರ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿಗಳ ವಿತರಕರಿಗೆ ಲಾಭ.

ಧನು: ಕಷ್ಟಗಳ ನಡುವೆ ಸುಖದ ಅರಸುವಿಕೆ ಯಲ್ಲಿ ಯಶಸ್ವಿ. ಉದ್ಯೋಗಿಗಳಿಗೆ ಸಮಾಧಾನ. ಕೃಷಿಯಲ್ಲಿ ಹೊಸ ಪ್ರಯೋಗದಲ್ಲಿ ಯಶಸ್ವಿ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಲಾಭ ಮಧ್ಯಮ. ಬಂಧು ಕಲಹದ ಪರಿಹಾರಕ್ಕೆ ಮಧ್ಯಸ್ಥಿಕೆ.

ಮಕರ: ಎಲ್ಲರಿಗೂ ಮಾದರಿಯಾಗುವ ವ್ಯಕ್ತಿತ್ವ. ಉದ್ಯೋಗ ನಿರ್ವಹಣ ಸಾಮರ್ಥ್ಯಕ್ಕೆ ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮ ವಿಸ್ತರಣೆಗೆ ಕಾನೂನಿನ ತೊಡಕು ನಿವಾರಣೆ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ.

ಕುಂಭ: ಶಾಕ್‌ ಅಬ್ಸಾರ್ಬರಿನಂತೆ ಆಘಾತ ಗಳನ್ನು ತಾಳಿಕೊಳ್ಳುವ ಸಾಮರ್ಥ್ಯ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮ ನಿರಾತಂಕ ಬೆಳವಣಿಗೆ. ಉತ್ಪನ್ನಗಳಿಗೆ ಹೊಸ ರೂಪ ಕೊಡಲು ಚಿಂತನೆ. ಔಷಧ ವಿತರಕರಿಗೆ ಲಾಭ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿ.

ಮೀನ: ಉದ್ಯೋಗ ಸ್ಥಾನದಲ್ಲಿ ಜಯ ಹಾಗೂ ಕೀರ್ತಿ ಎರಡೂ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಆಸ್ತಿ ವಿಸ್ತರಣೆ ಪ್ರಯತ್ನದಲ್ಲಿ ಮುನ್ನಡೆ. ಕೃಷ್ಯುತ್ಪನ್ನಗಳ ಮಾರಾಟದಲ್ಲಿ ಗಣನೀಯ ಲಾಭ. ಕಟ್ಟಡ ನಿರ್ಮಾಣ ವ್ಯವಹಾರದಲ್ಲಿ ಮಧ್ಯಮ ಲಾಭ. ಲೇವಾದೇವಿ ವ್ಯವಹಾರದಿಂದ ದೂರವಿರಿ.

Advertisement

Udayavani is now on Telegram. Click here to join our channel and stay updated with the latest news.

Next