Advertisement

Daily Horoscope: : ಮಾತಿನಲ್ಲಿ ತಾಳ್ಮೆ ಇರಲಿ, ಅನವಶ್ಯ ಚರ್ಚೆಗೆ ಅವಕಾಶ ನೀಡದಿರಿ

07:28 AM Jul 31, 2023 | Team Udayavani |

ಮೇಷ: ದೂರ ಪ್ರಯಾಣ. ಬಂಧು ಮಿತ್ರರ ಮಿಲನ. ಸಂತೋಷ ವೃದ್ಧಿ. ಸಂಸಾರ ಸುಖ ವೃದ್ಧಿ. ಗೃಹದಲ್ಲಿ ಮನೋರಂಜನೆಯ ವಾತಾವರಣ. ಮಕ್ಕಳಿಂದ ಸಂತೋಷ ವಾರ್ತೆ ಆರ್ಥಿಕ ಸುದೃಢತೆ ಇತ್ಯಾದಿ ಶುಭಫ‌ಲ.

Advertisement

ವೃಷಭ: ಆರೋಗ್ಯದ ಕಡೆಗೆ ಗಮನ ಇರಲಿ. ಸ್ಥಿರ ಬುದ್ಧಿಯಿಂದ ಕಾರ್ಯಪ್ರವೃತ್ತಿ. ಹಣಕಾಸು ವಿಚಾರದಲ್ಲಿ ಒತ್ತಡ. ಸಾಲ ಮಾಡುವಾಗ ಎಚ್ಚರ. ಆಪ್ತರ ಪರಿಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ.

ಮಿಥುನ: ಮಾತಿನಲ್ಲಿ ತಾಳ್ಮೆ ಇರಲಿ. ಅನವಶ್ಯ ಚರ್ಚೆಗೆ ಅವಕಾಶ ನೀಡದಿರಿ. ಗುರು ಹಿರಿಯರಲ್ಲಿ ಸಮಾಧಾನದಿಂದ ವರ್ತಿಸಿ. ಅವರ ಮಾರ್ಗದರ್ಶನದಂತೆ ವರ್ತಿಸುವುದರಿಂದ ಶ್ರೇಯಸ್ಸು. ಹಣಕಾಸು ವಿಚಾರದಲ್ಲಿ ಸ್ಪಷ್ಟತೆ ಇರಲಿ.

ಕರ್ಕ: ಚುರುಕುತನ ಪಟುತ್ವ, ವಿದ್ಯೆ, ವಿನಯ ಸಂಪನ್ನರೊಂದಿಗೆ ದಿನಚರಿ ಆರಂಭ. ಸಮಾಜದಲ್ಲಿ ಸ್ಥಾನ ಗೌರವಾದಿ ವೃದ್ಧಿ. ಕೀರ್ತಿ ಪ್ರಾಪ್ತಿ. ಸ್ಥಿರ ಸಂಪತ್ತು ವೃದ್ಧಿ. ಸಂಸಾರ ಸುಖ ತೃಪ್ತಿಕರ. ಜವಾಬ್ದಾರಿಯ ನಡೆಯಿಂದ ಪ್ರಗತಿ ಸಂಭವ.

ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ . ನಿಷ್ಠೆ ಪ್ರಾಮಾಣಿಕತೆಯಿಂದ ಕೀರ್ತಿ ಸಂಪಾದನೆ. ಉತ್ತಮ ವಾಕ್‌ಚಾತುರ್ಯದ ಕಾರ್ಯವೈಖರಿ. ಅಧಿಕ ಧನ ಸಂಚಾಯ. ಬಂಧು ಗಳಿಂದ ಕುಟುಂಬದವರಿಂದ ಮಾರ್ಗದರ್ಶನ ಪ್ರೋತ್ಸಾಹ.

Advertisement

ಕನ್ಯಾ: ಭೂಮಾದಿ ವ್ಯವಹಾರಗಳಲ್ಲಿ ಪ್ರಗತಿ. ಮಾತೃ ಸಮಾನರಿಂದ ಪ್ರೋತ್ಸಾಹ. ಜವಾಬ್ದಾರಿಯ ವರ್ತನೆಯಿಂದ ಕುಟುಂಬದಲ್ಲಿ ಮನ್ನಣೆ. ನಿರೀಕ್ಷಿಸಿದಷ್ಟು ಧನಸಂಪತ್ತು ಲಭಿಸದಿದ್ದರೂ ಮನಃ ತೃಪ್ತಿಗೆ ಕೊರತೆಯಾಗದು.

ತುಲಾ: ಆರೋಗ್ಯ ಸ್ಥಿರ ಅನೇಕ ಹೂಡಿಕೆಗಳಲ್ಲಿ ಧನವಿನಿಯೋಗ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ದಾಂಪತ್ಯ ತೃಪ್ತಿಕರ. ಉದ್ಯೋಗ ವ್ಯವಹಾರದಲ್ಲಿ ಚುರುಕು ನಡೆಯಿಂದ ಅಭಿವೃದ್ಧಿ. ಮನೆಯಲ್ಲಿ ಸಂಭ್ರಮ. ನೂತನ ಬಂಧುಮಿತ್ರರ ಆಗಮನ.

ವೃಶ್ಚಿಕ: ಉತ್ತಮ ವಾಕ್‌ಚಾತುರ್ಯದಿಂದ ಕೂಡಿದ ಕಾರ್ಯವೈಖರಿ. ನಿರಂತರ ಧನಾರ್ಜನೆ. ಬಂಧು ಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಮಾಜದಲ್ಲಿ ಹೆಚ್ಚಿದ ಗೌರವ.

ಧನು: ಹೆಚ್ಚಿದ ಪರಿಶ್ರಮದ ಜವಾಬ್ದಾರಿ. ಸ್ಥಾನ ಗೌರವಕ್ಕಾಗಿ ದೇಹಾಯಾಸ. ಮನಃಕ್ಷೇಶ ಸಂಭವ. ಅನವಶ್ಯ ವಿಚಾರಗಳಿಗೆ ಆದ್ಯತೆ ನೀಡದಿರಿ. ಪತಿ, ಪತ್ನಿಯರ ನಡುವೆ ಪರಸ್ಪರ ಸಹಕಾರ. ದೇವತಾ ಪ್ರಾರ್ಥನೆಯಿಂದ ಅನುಕೂಲಕರ.

ಮಕರ: ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳಿಂದಲೂ ಸುವಾರ್ತೆ. ಸಹಕಾರದ ಲಾಭ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆಯ ನಡೆಯಿಂದ ಲಾಭ. ಅಧ್ಯಯನಶೀಲರಿಗೆ ಉತ್ತಮ ವಾತಾವರಣ.

ಕುಂಭ: ರಾಜಕೀಯ ಚಟುವಟಿಕೆಗಳಲ್ಲಿ ಯಶಸ್ಸು. ಸರಕಾರಿ ಉದೋಗದಲ್ಲಿ ಪಗತಿ. ಆಸ್ತಿ ಸಂಚಯನದಲ್ಲಿ ಯಶಸ್ಸು. ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಮನೆಯಲ್ಲಿ ಸಂತಸದ ವಾತಾರಣ. ಅಧಿಕ ಮನಃ ಸಂತೋಷ.

ಮೀನ: ವೈವಾಹಿಕ ವಿಚಾರದಲ್ಲಿ ಪ್ರಗತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಗುರು ಹಿರಿಯರಿಂದ ಪ್ರೀತಿಯ ಸಹಕಾರ. ನಿರಾಯಾಸ ಧನಾರ್ಜನೆ. ಉತ್ತಮ ವಾಕ್‌ಚಾತುರ್ಯದ ಕಾರ್ಯವೈಖರಿ. ಹಣಕಾಸು ವಿಚಾರದಲ್ಲಿ ಸ್ಪಷ್ಟತೆ ಇರಲಿ. ದೂರದ ಮಿತ್ರರಿಂದ ಸಹಕಾರ.

 

Advertisement

Udayavani is now on Telegram. Click here to join our channel and stay updated with the latest news.

Next