Advertisement

Daily Horoscope: ಸರಕಾರಿ ನೌಕರರಿಗೆ ವರ್ಗಾವಣೆ ಖಚಿತ, ಲಕ್ಷ್ಮೀ ಕಟಾಕ್ಷಕ್ಕೆ ಗುರಿಯಾಗುವಿರಿ

07:33 AM Jul 24, 2024 | Team Udayavani |

ಮೇಷ: ದಿನಾರಂಭದಲ್ಲೇ ಶುಭಸೂಚನೆಗಳು. ಉದ್ಯೋಗ ಸ್ಥಾನದಲ್ಲಿ ಪುನವ್ಯìವಸ್ಥೆ. ಉದ್ಯಮ ಗಳ ನಿರ್ವಹಣೆಗೆದುರಾದ ಸಮಸ್ಯೆಗಳು ದೂರ. ಲಕ್ಷ್ಮೀ ಕಟಾಕ್ಷಕ್ಕೆ ಗುರಿಯಾಗುವಿರಿ. ಪೂರ್ವದಿಕ್ಕಿನಿಂದ ಆಪ್ತಮಿತ್ರರ ಆಗಮನ.

Advertisement

ವೃಷಭ: ಪೂರ್ವಯೋಜನೆಯಂತೆ ಕೈಗೊಂಡ ಕ್ರಮಗಳಿಂದಾಗಿ ಕಾರ್ಯಗಳು ಸುಗಮ. ಸರಕಾರಿ ನೌಕರರಿಗೆ ವರ್ಗಾವಣೆ ಖಚಿತ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ.

ಮಿಥುನ: ಅರ್ಹತೆಗೆ ಸರಿಯಾದ ಗೌರವದ ಸ್ಥಾನ ಪ್ರಾಪ್ತಿ. ಉದ್ಯಮಿಗಳಿಗೆ ಸಂತೋಷ ತರುವ ಯೋಜನೆಗಳು. ಸರಕಾರಿ ನೌಕರರಿಗೆ ಹೆಚ್ಚಿದ ಜವಾಬ್ದಾರಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಯಥೇಚ್ಚ ಲಾಭ.

ಕರ್ಕಾಟಕ: ಬಡವರಿಗೆ ವಿದ್ಯಾರ್ಜನೆ, ವಿವಾಹ, ಚಿಕಿತ್ಸೆ ಮೊದಲಾದ ಆವಶ್ಯಕತೆಗಳಿಗೆ ಧನಸಹಾಯ. ಉದ್ಯೋಗದಲ್ಲಿ ವೇತನ ಏರಿಕೆ. ನೌಕರ ವರ್ಗಕ್ಕೆ ಮಾಲಿಕರ ಔದಾರ್ಯದಿಂದ ಹರ್ಷ. ಹೊಸ ನೌಕರರರಿಗೆ ಮಾರ್ಗದರ್ಶನದ ಜವಾಬ್ದಾರಿ.

ಸಿಂಹ: ಉದ್ಯೋಗ ಸ್ಥಾನದಲ್ಲಿ ಪುನರಾ ರಂಭಗೊಂಡಿದ್ದ ಕಾಮಗಾರಿಗಳ ಮುಕ್ತಾಯ. ಅಧಿಕಾರಿ ವರ್ಗಕ್ಕೆ ತೃಪ್ತಿ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಯಂತ್ರೋಪಕರಣ ಮಾರಾಟಗಾರರಿಗೆ ನಿರೀಕ್ಷೆ ಮೀರಿದ ವ್ಯಾಪಾರ.

Advertisement

ಕನ್ಯಾ: ಕ್ರಿಯಾಶೀಲತೆಯೊಂದಿಗೆ ದೈವಾನು ಗ್ರಹವೂ ಇರುವುದರಿಂದ ಹಿನ್ನಡೆಯ ಪ್ರಶ್ನೆಯಿಲ್ಲ. ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಉದ್ಯೋಗ ಮುಂದುವರಿಕೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ.

ತುಲಾ: ಮನೋಬಲ ವೃದ್ಧಿಯೊಂದಿಗೆ ಕಾರ್ಯದ ವೇಗ ಹೆಚ್ಚಳ. ಕಾರ್ಯ ಕ್ಷೇತ್ರದಲ್ಲಿ ಪರಿಸ್ಥಿತಿ ಸುಧಾರಣೆ. ಸಂಗಾತಿಯ ಮನೋ ಧರ್ಮದೊಡನೆ ಉತ್ತಮ ಹೊಂದಾಣಿಕೆ. ಹಿರಿಯರ ಆರೋಗ್ಯದಲ್ಲಿ ಗಣನೀಯ ಸುಧಾರಣೆ.

ವೃಶ್ಚಿಕ: ಸಪ್ತಾಹ ಮುಂದುವರಿದಂತೆ ಸಂತೋಷ ತರುವ ಬೆಳವಣಿಗೆಗಳು. ಸಂಸ್ಥೆಯ ಮುಖ್ಯಸ್ಥರಿಂದ ಯೋಗಕ್ಷೇಮ ವಿಚಾರಣೆ. ಗೃಹೋದ್ಯಮದ ಉತ್ಪನ್ನಗಳ ಕಡೆಗೆ ಆಕರ್ಷಿತರಾದ ಗ್ರಾಹಕರು. ಮಕ್ಕಳಿಂದ ಹೊಸ ಉದ್ಯಮ ಆರಂಭ.

ಧನು: ಒಂದು ವಾರದ ಸಣ್ಣಪುಟ್ಟ ಹಿನ್ನಡೆಗಳ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ನಿರಾತಂಕ ಮುನ್ನಡೆ. ಸಮಾಜ ಅಭಿವೃದ್ಧಿ ಮತ್ತು ಸುಧಾರಣೆಯ ಕಾರ್ಯಕ್ರಮಗಳಲ್ಲಿ ಭಾಗಿ. ಪರಿಸರ ಸ್ವತ್ಛತೆಯ ಕಾರ್ಯಕ್ರಮಗಳ ನೇತೃತ್ವ.

ಮಕರ: ಪರಿಸರದಲ್ಲಿ ಪರಿವರ್ತನೆಯಿಂದ ಸಮಾಧಾನ. ವೃತ್ತಿಸ್ಥಾನದಲ್ಲಿ ಕಡಿಮೆಯಾದ ಒತ್ತಡ. ಹೆಚ್ಚುವರಿ ಆದಾಯ ಹೊಂದುವ ಪ್ರಯತ್ನ ಯಶಸ್ವಿ. ವಸ್ತ್ರ, ಸಿದ್ಧ ಉಡುಪು, ಆಭರಣ. ಉದ್ಯಮಗಳಿಗೆ ಶುಭಕಾಲ.

ಕುಂಭ: ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆಗಳು. ಉದ್ಯಮದ ಉತ್ಪನ್ನ ಗಳಿಗೆ ಮಾರಾಟಗಾರರ ಅನ್ವೇಷಣೆ. ಗ್ರಾಹಕರ ಬೇಡಿಕೆ ಗಳಿಗೆ ಶೀಘ್ರ ಸ್ಪಂದಿಸುವ ಪ್ರಯತ್ನ. ಗೃಹಿಣಿಯರ ಸ್ವೊದ್ಯೋಗ ಯೋಜನೆಗಳು ಯಶಸ್ವಿ. ಹಿರಿಯರು, ಗೃಹಿಣಿ, ಮಕ್ಕಳಿಗೆ ಸಮಾಧಾನದ ವಾತಾವರಣ.

ಮೀನ: ದಿನಾರಂಭದಲ್ಲಿ ಪ್ರಗತಿಯ ವೇಗವರ್ಧನೆ. ವೃತ್ತಿಬಾಂಧವರಿಂದ ಉತ್ಸಾಹಪೂರ್ಣ ಸಹಕಾರ. ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಸರಕಾರಿ ನೌಕರರಿಗೆ ಸಾರ್ವಜನಿಕರಿಂದ ಪ್ರಶಂಸೆ. ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಗೌರವ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next