Advertisement

Daily Horoscope: ಅನಿರೀಕ್ಷಿತ ಧನಾಗಮ ಸಂಭವ, ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು

10:50 AM Jul 20, 2024 | Team Udayavani |

ಮೇಷ: ಯಶಸ್ಸಿನ ಕಡೆಗೆ ಹೆಜ್ಜೆಯಿಡುತ್ತೀರಿ. ಉದ್ಯೋಗಸ್ಥರಿಗೆ ಸುಖಾನುಭವದೊಂದಿಗೆ ಹೆಚ್ಚಿನ ಹೊಣೆಗಾರಿಕೆಗಳು. ಗೃಹಾಲಂಕಾರ ಸಾಮಗ್ರಿ ಮಾರಾಟಗಾರರಿಗೆ ಅಧಿಕ ಲಾಭ. ಕೃಷಿಕರಿಗೆ, ಶ್ರಮಜೀವಿಗಳಿಗೆ ತಕ್ಕ ಪ್ರತಿಫಲ.

Advertisement

ವೃಷಭ: ಆತುರವಿಲ್ಲದೆ ಮುಂದುವರಿದರೆ ಯಶಸ್ಸು ಖಚಿತ. ವಸ್ತ್ರೋದ್ಯಮಿಗಳಿಗೆ ಮಂದಗತಿಯ ಮುನ್ನಡೆ. ಹಿರಿಯರ ಆರೋಗ್ಯ, ಆವಶ್ಯಕತೆಗಳನ್ನು ಗಮನಿಸುತ್ತಿರಿ. ಹಿರಿಯ ಮಹಿಳೆಯರಿಗೆ ಸಮಾಧಾನದ ವಾತಾವರಣ.

ಮಿಥುನ: ಧಾರ್ಮಿಕ ಚಿಂತನೆ, ದೇವತಾರ್ಚನೆಯಲ್ಲಿ ಆಸಕ್ತಿ. ಹಿರಿಯ ಸಹೋದ್ಯೋಗಿ ಗಳ ಮಾರ್ಗದರ್ಶನದಿಂದ ಪ್ರಾವೀಣ್ಯ ಪ್ರಾಪ್ತಿ. ಖಾದಿ, ಗ್ರಾಮೋದ್ಯೋಗ ವ್ಯವಹಾರಸ್ಥರಿಗೆ ಹೆಚ್ಚು ಬೇಡಿಕೆ.

ಕರ್ಕಾಟಕ: ಅನಿರೀಕ್ಷಿತ ಧನಾಗಮ ಸಂಭವ. ಗುರು ಹಿರಿಯರಿಂದ ಸಕಾಲಿಕ ಮಾರ್ಗದರ್ಶನ ಲಭ್ಯ. ಸಂಗಾತಿಯಿಂದ ಉತ್ತಮ ಸಹಕಾರ. ಹೂವು, ತರಕಾರಿ ಬೆಳೆಗಾರರಿಗೆ ಅಧಿಕ ಲಾಭ. ಗೃಹಿಣಿಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ.

ಸಿಂಹ: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು ಗಳಿಸುವಿರಿ. ದೀರ್ಘ‌ಕಾಲೀನ ಹೂಡಿಕೆಗಳಲ್ಲಿ ಆಸಕ್ತಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ, ಶುಭ ಕಾರ್ಯಕ್ಕಾಗಿ ಸಡಗರದ ವಾತಾವರಣ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ.

Advertisement

ಕನ್ಯಾ: ದೈವಾನುಗ್ರಹಕ್ಕಾಗಿ ವಿಶೇಷ ಪ್ರಯತ್ನ. ಇಷ್ಟ ಮಿತ್ರರೊಡನೆ ಭೇಟಿ. ಉದ್ಯೋಗ ರಂಗದಲ್ಲಿ ಕಾರ್ಯ ನಿರ್ವಿಘ್ನ. ಆಪ್ತ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ನಿರ್ಮಾಣ ಸಾಮಗ್ರಿ ವಿತರಕರಿಗೆ ಅನುಕೂಲದ ವಾತಾವರಣ.

ತುಲಾ: ಮನಸ್ಸಿನ ಸಮತೋಲನ ಕಾಯ್ದುಕೊಳ್ಳಿರಿ. ಹತ್ತಿರದ ದೇವತಾ ಸನ್ನಿಧಿ ಸಂದರ್ಶನದಿಂದ ಮನಸ್ಸಿಗೆ ನೆಮ್ಮದಿ. ಉದ್ಯೋಗದಲ್ಲಿ ಅಭಿವೃದ್ಧಿ. ವ್ಯವಹಾರ ಕ್ಷೇತ್ರದಲ್ಲಿ ಮಂದಗತಿಯ ಮುನ್ನಡೆ. ಹಿತಶತ್ರುಗಳ ಕುರಿತು ಎಚ್ಚರಿಕೆಯಲ್ಲಿರಿ.

ವೃಶ್ಚಿಕ: ಕೇಡು ಬಗೆದವರ ಮೇಲೆ ಸೇಡು ತೀರಿಸಿಕೊಳ್ಳುವ ಯೋಚನೆ ಬೇಡ. ವ್ಯವಹಾರ ಪ್ರಸ್ತಾವದ ವಿಷಯದಲ್ಲಿ ಎಚ್ಚರದಿಂದ ಹೆಜ್ಜೆಯಿಡಿರಿ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಕಿರಿಕಿರಿಯಾದರೂ ಪ್ರತಿಫಲಕ್ಕೆ ಅಡ್ಡಿಯಾಗದು.

ಧನು: ಹೊಂದಾಣಿಕೆಯ ಮನೋಭಾವ ವ್ಯವ ಹಾರಕ್ಕೆ ಅನುಕೂಲ. ದೀರ್ಘ‌ಕಾಲದಿಂದ ನಿರೀಕ್ಷಿ ಸಲಾಗಿದ್ದ ಲಾಭ ಕೈಸೇರಿ ಮನಸ್ಸು ನಿರಾಳ. ಸಹಾಯಕರಿಂದ ಅಪೇಕ್ಷಿತ ಸಹಕಾರದ ವರ್ತನೆ. ಹಿರಿಯರ ಆರೋಗ್ಯ ಸಮಾಧಾನಕರ.

ಮಕರ: ಅಪೇಕ್ಷಿತ ಕಾರ್ಯಗಳೆಲ್ಲವೂ ಸುಗಮ. ಆಗಾಗ ಎದುರಾಗುವ ವಿಘ್ನಗಳು ದೂರ. ಉದ್ಯೋಗ ಕ್ಷೇತ್ರದ ಕಿರಿಕಿರಿಗಳು ತೊಲಗಿ ಮನ ಸ್ಸಿಗೆ ಶಾಂತಿ. ಆರ್ಥಿಕ ವ್ಯವಹಾರ ಸಂಸ್ಥೆಗಳ ನಿರ್ವಾ ಹಕರಿಗೆ ಹೊಸ ಜವಾಬ್ದಾರಿಗಳು.

ಕುಂಭ: ಸತ್ಕಾರ್ಯಗಳಿಗೆ ಸಕ್ರಿಯವಾಗಿ ನೆರವಾಗುವ ಅವಕಾಶ. ಆಶಾಭಾವನೆಯಿಂದ ಮುನ್ನಡೆಯುವ ನಿಮಗೆ ಜವಾಬ್ದಾರಿಗಳ ನಿರ್ವಹಣೆ ಸುಲಭ. ಹತ್ತಿರದ ಬಂಧುವರ್ಗದಲ್ಲಿ ಶುಭಕಾರ್ಯ. ಪ್ರಕೃತಿ ಸೌಂದರ್ಯದ ತಾಣವೊಂದಕ್ಕೆ ಭೇಟಿ. ಆರೋಗ್ಯ ಉತ್ತಮ.

ಮೀನ: ಗುರು ದೇವತಾನುಗ್ರಹದಿಂದ ಕಾರ್ಯಗಳು ನಿರ್ವಿಘ್ನವಾಗಿ ಸಾಗಲಿವೆ. ಹೊಸ ವ್ಯವಹಾರ ಪ್ರಸ್ತಾವದ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿರಿ. ವಾಹನಾದಿ ವ್ಯವಹಾರಗಳನ್ನು ನಡೆಸುವವರಿಗೆ ಸಂಧಿಕಾಲ. ಮುದ್ರಣ ವ್ಯವಹಾರಸ್ಥರಿಗೆ ಶುಭ.

Advertisement

Udayavani is now on Telegram. Click here to join our channel and stay updated with the latest news.

Next