Advertisement

Daily Horoscope: ಉದ್ಯೋಗ ಬದಲಾವಣೆಯ ಯೋಚನೆ, ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ

07:27 AM Jan 30, 2024 | Team Udayavani |

ಮೇಷ: ಕಾರ್ಯರಂಗದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಲವಲವಿಕೆಯ ವಾತಾ ವರಣ. ಉದ್ಯಮಗಳ ನಡುವೆ ಉತ್ಪನ್ನಗಳ ಮಾರಾಟ ದಲ್ಲಿ ಪೈಪೋಟಿ. ವಿಸ್ತರಣಾ ಯೋಜನೆಗೆ ಬ್ಯಾಂಕ್‌ ನೆರವು. ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ.

Advertisement

ವೃಷಭ: ಉದ್ಯೋಗ ಬದಲಾವಣೆಯ ಯೋಚನೆ. ಸರಕಾರಿ ಅಧಿಕಾರಿಗಳಿಗೆ ದೂರದ ಊರಿಗೆ ವರ್ಗಾವಣೆ ಸಂಭವ. ಖಾಸಗಿ ರಂಗದ ಉತ್ಪಾದನೆ ಹೆಚ್ಚಳ. ಅಲ್ಪಾವಧಿಯ ಷೇರು ವ್ಯವಹಾರದಲ್ಲಿ ನಷ್ಟ. ದೇವತಾ ಸಾನ್ನಿಧ್ಯಕ್ಕೆ ಭೇಟಿ ಸಂಗೀತ ಶ್ರವಣದ ಅವಕಾಶ.

ಮಿಥುನ: ಹಿತಶತ್ರುಗಳು ಮತ್ತು ವಿಘ್ನ ಸಂತೋಷಿಗಳನ್ನು ದೂರವಿಡಿ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ. ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ.

ಕರ್ಕಾಟಕ: ಪರಿಸ್ಥಿತಿ ನಿಭಾಯಿಸಲು ಶಕ್ತಿ ಉಳ್ಳವರಾಗಿದ್ದೀರಿ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಅನುಭವಕ್ಕೆ ಪ್ರಾಶಸ್ತ್ಯ. ಉದ್ಯಮದ ಉತ್ಪಾದನೆಗಳ ಗುಣಮಟ್ಟ ಸುಧಾರಣೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ.

ಸಿಂಹ: ನಿಧಾನವಾದರೂ ನಿಲ್ಲದ ಪ್ರಗತಿ. ಉದ್ಯೋಗಸ್ಥರಿಗೆ ಸಂತೃಪ್ತಿಯ ಭಾವನೆ. ಗ್ರಾಹಕರ ಪ್ರಚಾರದಿಂದ ವ್ಯಾಪಾರಕ್ಕೆ ಪೋಷಣೆ. ಕಟ್ಟಡ ನಿರ್ಮಾಣ ಕಂಟ್ರಾಕ್ಟರರಿಗೆ ಕಾರ್ಮಿಕರ ಸಮಸ್ಯೆ. ನಿವೇಶನ ಖರೀದಿ ಮಾತುಕತೆ ಅಂತಿಮ.

Advertisement

ಕನ್ಯಾ: ಇಡೀ ದಿನದ ವ್ಯವಹಾರಗಳಲ್ಲಿ ಅರ್ಧಪಾಲು ನೆಮ್ಮದಿ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ, ಹೊಸ ನೌಕರರ ಸೇರ್ಪಡೆ. ಉದ್ಯೋಗಾಸಕ್ತರನ್ನು ಅರಸಿ ಬರುವ ಅವಕಾಶಗಳು.

ತುಲಾ: ಸಕಾಲದಲ್ಲಿ ಪರಿಹಾರಗೊಂಡ ಸಮ ಸ್ಯೆಗಳು. ಎಣಿಸದ ಮೂಲದಿಂದ ಧನಪ್ರಾಪ್ತಿ. ವಿತ್ತ ಸಂಸ್ಥೆಯ ನೆರವಿನಿಂದ ಉದ್ಯಮದ ಕಟ್ಟಡ ನವೀಕರಣ ಹಾಗೂ ವಿಸ್ತರಣೆ. ಎಲೆಕ್ಟ್ರಾನಿಕ್ಸ್‌ ಸಾಮಗ್ರಿಗಳ ಖರೀದಿ. ಆರೋಗ್ಯ ಉತ್ತಮ.

ವೃಶ್ಚಿಕ: ಎಲ್ಲ ರೀತಿಯ ಸಂಕಟಗಳಿಂದ ವಿಮೋಚನೆ. ಉದ್ಯೋಗ ಸ್ಥಾನದಲ್ಲಿ ವಿಶ್ವಾಸ ವೃದ್ಧಿ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಕೆಲವಡೆ ಮುಂದುವರಿದ ಹಬ್ಬದ ವಾತಾವರಣ.

ಧನು: ಕುಟುಂಬದೊಳಗಿನ ವೈಮನಸ್ಯ ತೊಲಗಿ ನೆಮ್ಮದಿ. ಉದ್ಯೋಗ ಸ್ಥಾನದಲ್ಲಿ ಸಜ್ಜ ನರ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿಯಲ್ಲಿ ಮುಂದು ವರಿದ ಪ್ರಯೋಗಗಳು.

ಮಕರ: ನ್ಯಾಯಾಲಯ ವ್ಯವಹಾರ ತೀರ್ಮಾನ ವಿಳಂಬ. ಉದ್ಯೋಗ ಸ್ಥಾನದಲ್ಲಿ ಬಹುಪಾಲು ನೆಮ್ಮದಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನೂತನ ನಿವೇಶನ ಖರೀದಿ ಪ್ರಕ್ರಿಯೆ ಕೊನೆಯ ಹಂತದಲ್ಲಿ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.

ಕುಂಭ: ಹೊಸ ಆದಾಯ ಮೂಲಗಳು ಗೋಚರ. ಸರಕಾರಿ ನೌಕರರಿಗೆ ಅನುಕೂಲ ವಾದ ವರ್ಗಾವಣೆ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಸಹಕಾರ.

ಮೀನ: ಶನಿಮಹಾತ್ಮನ ಅನುಗ್ರಹದಿಂದ ಧರ್ಮ ಮಾರ್ಗದಲ್ಲಿ ನಡೆಯಲು ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಅಜಾತಶತ್ರುತ್ವ. ಸರಕಾರಿ ಇಲಾಖೆ ನೌಕರರಿಂದ ಸಹಕಾರ. ಸೋದರಿಯ ಕುಟುಂಬದಲ್ಲಿ ಶುಭಕಾರ್ಯದ ಸಿದ್ಧತೆ. ದೇವಾಲಯದ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

Advertisement

Udayavani is now on Telegram. Click here to join our channel and stay updated with the latest news.

Next