Advertisement

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ, ಆತಂಕದಿಂದ ಬಿಡುಗಡೆ

07:18 AM Jan 22, 2024 | Team Udayavani |

ಮೇಷ: ಶ್ರೀರಾಮನ ಕೃಪೆಯಿಂದ ಇಂದು ಲಾಭವೇ ಅಧಿಕ. ಉದ್ಯೋಗದಲ್ಲಿ ತಕ್ಕ ಮಟ್ಟಿಗೆ ಆನಂದಾನುಭವ. ಬಹುಪಾಲು ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ ಅಧಿಕ ಲಾಭ. ವ್ಯವಹಾರ ವಿಸ್ತರಣೆಯಿಂದ ಅನುಕೂಲ ವೃದ್ಧಿ.

Advertisement

ವೃಷಭ: ಎಲ್ಲ ಆದಾಯ ಮೂಲಗಳಲ್ಲೂ ತಡೆಯಿಲ್ಲದ ಅಭಿವೃದ್ಧಿ. ಉದ್ಯೋಗಸ್ಥರಿಗೆ ಶೀಘ್ರವಾಗಿ ಕಾರ್ಯ ಮುಗಿಸಲು ಒತ್ತಡ. ಉದ್ಯಮಗಳ ಮುನ್ನಡೆ ಅಬಾಧಿತ. ವಸ್ತ್ರ, , ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ.

ಮಿಥುನ: ಅಕಾರಣ ಆತಂಕದಿಂದ ಬಿಡುಗಡೆ. ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ. ಕೃಷಿ ಕ್ಷೇತ್ರದಲ್ಲಿ ಪ್ರಯೋಗಗಳು ಯಶಸ್ವಿ. ಉದ್ಯಮಿಗಳಿಗೆ ಕಾನೂನು ಸಂಬಂಧಿ ಸಮಸ್ಯೆಗಳಿಂದ ವಿಮೋಚನೆ. ಧಾರ್ಮಿಕ ಸಾಹಿತ್ಯ ಅಧ್ಯಯನ.

ಕರ್ಕಾಟಕ: ನಿಮ್ಮ ವೃದ್ಧಿಯಾದ ಕಾರ್ಯ ಸಾಮರ್ಥ್ಯದ ಮೇಲಿನ ವಿಶ್ವಾಸದಿಂದ ಇನ್ನಷ್ಟು ಜವಾಬ್ದಾರಿಗಳು. ಉದ್ಯೋಗದಲ್ಲಿ ಹೊಸಬಗೆಯ ಕಾರ್ಯ ಗಳ ಆರಂಭ. ಉದ್ಯಮಗಳಲ್ಲಿ ಮಾಲಕರು ಮತ್ತು ನೌಕರರ ನಡುವೆ ಸಾಮರಸ್ಯ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ.

ಸಿಂಹ: ಉದ್ಯಮದ ಎಲ್ಲ ವಿಭಾಗಗಳಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ಸರಕಾರಿ ನೌಕರರಿಗೆ ಸಮಾಧಾನದ ಜತೆಯಲ್ಲೇ ಆತಂಕದ ಭಾವ. ಸೊÌàದ್ಯೋಗಿ ಮಹಿಳೆಯರಿಗೆ ಸರ್ವ ವಿಧದಲ್ಲೂ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

Advertisement

ಕನ್ಯಾ: ಎಲ್ಲ ನಿಯೋಜಿತ ಕಾರ್ಯಗಳನ್ನು ಸಕಾಲದಲ್ಲಿ ಮಾಡಿ ಮುಗಿಸಿದ ತೃಪ್ತಿ. ಉದ್ಯೋಗದಲ್ಲಿ ಶಿಸ್ತುಗಾರಿಕೆಗಾಗಿ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ರಾಮಪೂಜಾ ಕಾರ್ಯಕ್ರಮ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ.

ತುಲಾ: ಕೆಲವು ತಿಂಗಳುಗಳಿಂದ ಪೀಡಿಸುತ್ತಿದ್ದ ಅನಾರೋಗ್ಯದಿಂದ ಬಿಡುಗಡೆ.ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮ ಘಟಕಗಳಿಗೆ ಏಳಿಗೆಯ ಕಾಲ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಸಾಧ್ಯತೆ.

ವೃಶ್ಚಿಕ: ಬೇರೆಯವರಿಗೆ ಹೋಲಿಸಿ ನೋಡಿದಾಗ ನೀವೇ ಭಾಗ್ಯವಂತರು. ವೈಯಕ್ತಿಕ ಬದುಕಿನಲ್ಲಿ ಎಲ್ಲ ಬಗೆಯ ಸಂತೃಪ್ತಿಯ ಅನುಭವ. ಉದ್ಯೋಗ, ವ್ಯವಹಾರ, ಎರಡರಲ್ಲೂ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.

ಧನು: ಜೀವನಕ್ಕೆ ಭದ್ರವಾದ ಆದಾಯದ ಮೂಲ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಕಾರ್ಯಗಳು ಶೀಘ್ರಗತಿಯಲ್ಲಿ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ಪ್ರಯೋಗಗಳು. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಯಥೇತ್ಛ ಆದಾಯ.

ಮಕರ: ನಿಯೋಜಿತ ಕಾರ್ಯಗಳು ನಿರ್ವಿ ಘ್ನವಾಗಿ ನಡೆದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ಕಟ್ಟಡ ನಿರ್ಮಾಪಕರಿಗೆ ಕೊನೆಯ ಹಂತದ ಕಾರ್ಯ ಮುಗಿಸುವ ತರಾತುರಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ.

ಕುಂಭ: ಶೀಘ್ರ ಕಾರ್ಯ ಮುಗಿಸಲು ಪೂರಕ ವಾದ ವಾತಾವರಣ. ಉದ್ಯಮದ ಉತ್ಪನ್ನಗಳಿಗೆ ಎಲ್ಲೆಡೆಗಳಿಂದ ಬೇಡಿಕೆ.ಯಂತ್ರೋಪಕರಣ ಮತ್ತು ವಾಹನ ಬಿಡಿಭಾಗಗಳ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ ಹೆಚ್ಚಿದ ಜನಪ್ರಿಯತೆ. ಸಂಸಾರದಲ್ಲಿ ಎಲ್ಲರ ನಡುವೆ ಪ್ರೀತಿ.

ಮೀನ: ಶ್ರೀರಾಮನ ದಯದಿಂದ ಎಲ್ಲ ಕಾರ್ಯಗಳು ತೀವ್ರಗತಿಯಲ್ಲಿ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ. ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಪೂರಕ ವೃತ್ತಿಯ ಆಯ್ಕೆಯಲ್ಲಿ ಗೊಂದಲ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ. ಹಿರಿಯರಿಗೆ, ಸಂಗಾತಿಗೆ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next