Advertisement

Daily Horoscope: ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ, ವ್ಯಾಪಾರಿಗಳಿಗೆ ಲಾಭ

07:25 AM Jan 14, 2024 | Team Udayavani |

ಮೇಷ: ಕಚೇರಿಗೆ ವಿರಾಮದ ದಿನವಾದರೂ ಮಕರ ಸಂಕ್ರಾಂತಿಯ ಪರ್ವದಿನವಾಗಿರುವುದರಿಂದ ಹಲವು ಬಗೆಯ ಚಟುವಟಿಕೆಗಳು. ವ್ಯವಹಾರ ಕ್ಷೇತ್ರದಿಂದಲೂ ಅನೇಕ ಒತ್ತಡಗಳು. ಮನೆಯಲ್ಲಿ ಸಂಭ್ರಮದ ವಾತಾವರಣ.

Advertisement

ವೃಷಭ: ವಿರಾಮದ ಸಂದರ್ಭದಲ್ಲಿ ಓಡಾಟದಿಂದ ಹೊಸಬರ ಪರಿಚಯ. ಕುಟುಂಬದಲ್ಲಿ ಎಲ್ಲರಿಗೂ ಉಲ್ಲಾಸದ ಮನೋಭಾವ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶ. ಮನೆಯಲ್ಲಿ ಹಬ್ಬದ ವಾತಾವರಣದ ನಡುವೆ ವಿವಾಹ ಮಾತುಕತೆ.

ಮಿಥುನ: ಪರ್ಯಾಪ್ತ ಪೂರ್ವಸಿದ್ಧತೆಯೊಂದಿಗೆ ರಂಗಪ್ರವೇಶಕ್ಕೆ ಸಿದ್ಧತೆ. ಮನೆಯಲ್ಲಿ ಹಬ್ಬ ಆಚರಣೆಯ ಸಂಭ್ರಮ. ಉದ್ಯೋಗಸ್ಥರಿಗೆ ಬಾಕಿ ಯುಳಿದಿರುವ ಕೆಲಸಗಳನ್ನು ನಾಳೆ ಮುಗಿಸುವ ಚಿಂತೆ.

ರ್ಕಾಟಕ: ದೇವತಾರಾಧನೆಯಿಂದ ಮನೆಯಲ್ಲಿ ಶಾಂತಿ.ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ. ವ್ಯವಹಾರ ಕ್ಷೇತ್ರದ ಮಿತ್ರರ ಆಗಮನ. ಉದ್ಯೋಗ ಅರಸುತ್ತಿರುವ ಶಿಕ್ಷಿತರಿಗೆ ಅವಕಾಶಗಳು ಗೋಚರ. ಮಕ್ಕಳಿಗೆ ವ್ಯಾಸಂಗದಲ್ಲಿ ಸೂಕ್ತ ಮಾರ್ಗದರ್ಶನ.

ಸಿಂಹ: ಮಕರ ಸಂಕ್ರಾಂತಿ ಪರ್ವದ ಸಂದರ್ಭವಾದರೂ ವ್ಯವಹಾರ ಮತ್ತು ಕಾರ್ಯ ಸುಧಾರಣೆಯ ಚಿಂತೆ. ನೂತನ ಗೃಹ ನಿರ್ಮಾಣ ಆರಂಭ.ಕಟ್ಟಡ ನಿರ್ಮಾಪಕರಿಗೆ ಕೆಲಸದ ಒತ್ತಡ ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ.

Advertisement

ಕನ್ಯಾ: ಸತ್ಪಾತ್ರರಿಗೆ ದಾನ ಮಾಡುವುದು ಮಾತ್ರ ಮೆಚ್ಚ ಬೇಕಾದ ಕಾರ್ಯ. ಎಲ್ಲರ ದೇಹಾರೋಗ್ಯ ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ.

ತುಲಾ: ಮಾನಸಿಕ ಸ್ಥೈರ್ಯ ಸಾಧನೆಯೊಂದಿಗೆ ಭವಿಷ್ಯದ ಹಾದಿಯಲ್ಲಿ ಸ್ಪಷ್ಟ ಹೆಜ್ಜೆ. ಹಿರಿಯ ಬಂಧುವಿನಿಂದ ಭರವಸೆಯ ಮಾರ್ಗದರ್ಶನ. ದೂರದ ಬಂಧುಗಳಿಂದ ಶುಭ ಸಮಾಚಾರ. ಬಾಲ್ಯಕಾಲದ ಒಡ ನಾಡಿಯ ಅಕಸ್ಮಾತ್‌ ಭೇಟಿಯಿಂದ ಹೆಚ್ಚಿದ ಹುಮ್ಮಸ್ಸು.

ವೃಶ್ಚಿಕ: ಐಹಿಕ ವೈಭೋಗದ ತುತ್ತತುದಿಗೆ ಏರದಿದ್ದರೂ ಸುಖಜೀವನಕ್ಕೆ ಕೊರತೆಯಿಲ್ಲ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಏರುಪೇರು. ಪರ್ಯಾಯ ಚಿಕಿತ್ಸೆ, ಪರಿಹಾರ.

ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಮಕ್ಕಳ ಮದುವೆಯ ಮಾತುಕತೆ. ದೂರದ ನೆಂಟರ ಆಗಮನ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿಯ ಪ್ರಗತಿ ನೂತನ ವಾಹನ ಖರೀದಿಯ ವಿಷಯದಲ್ಲಿ ಸಮಾಲೋಚನೆ.

ಮಕರ: ತಾಳ್ಮೆ, ಜಾಣ್ಮೆಗಳೇ ನಿಮ್ಮ ಯಶಸ್ಸಿನ ಪ್ರಮುಖ ಸಾಧನಗಳು ಎಂಬುದನ್ನು ಯಾವಾಗಲೂ ನೆಮಪಿನಲ್ಲಿಟ್ಟುಕೊಳ್ಳಿ. ಕಾರ್ಯ ಕೌಶಲಕ್ಕೆಎಲ್ಲರ ಹರ್ಷ ಹಾಗೂ ಮೆಚ್ಚುಗೆ ಪ್ರಕಟ. ಸಾಧನೆಯ ಮಾರ್ಗದಲ್ಲಿ ಅಚಲವಾಗಿ ನಿಲ್ಲುವುದರಿಂದ ಇಷ್ಟಾರ್ಥ ಸಿದ್ಧಿ.

ಕುಂಭ: ಧಾರ್ಮಿಕ ಚಿಂತನೆಯೊಂದಿಗೆ ಜನಸೇವೆಯಲ್ಲಿ ಆಸಕ್ತಿ. ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನು ಷ್ಠಾನದಲ್ಲಿ ವಿಶೇಷ ಪಾತ್ರ.ಸಮಾಜದಲ್ಲಿ ಗೌರವ ಪ್ರಾಪ್ತಿ. ಮನೆಯಲ್ಲಿ ಹಬ್ಬ ಆಚರಣೆಯ ಸಂಭ್ರಮ.

ಮೀನ: ಶುಭಫಲಗಳ ದಿನ. ಕರ್ಮಕಾರಕನಾದ ಶನಿಯು ಸತ್ಕರ್ಮಗಳಿಗೆ ಪ್ರೇರಣೆ ನೀಡಿ ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ. ವಾಹನಾದಿ ವ್ಯವಹಾರಗಳನ್ನು ನಡೆಸುವವರಿಗೆ ಲಾಭ ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಶಿವ ವಿಷ್ಣು,ಆಂಜನೇಯರ ಉಪಾಸನೆಯಿಂದ ಸಮಸ್ಯೆಗಳು ದೂರ.ಹಿರಿಯರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next