Advertisement

Daily Horoscope:ಉದ್ಯೋಗ ಸ್ಥಾನದಲ್ಲಿ ಮತ್ತೆ ವಿಭಾಗ ಬದಲಾವಣೆ, ಅವಿವಾಹಿತರಿಗೆ ಶೀಘ್ರ ವಿವಾಹ

07:22 AM Jan 13, 2024 | Team Udayavani |

ಮೇಷ: ನಿಮ್ಮ ಇಚ್ಛೆಗಳು ಬಹುಪಾಲು ಫ‌ಲಿಸುವ ದಿನ. ಉದ್ಯೋಗ ಸ್ಥಾನದಲ್ಲಿ ನಿಮ್ಮ ಇಚ್ಛೆಯಂತೆ ಏರ್ಪಾಡುಗಳು. ಉದ್ಯಮ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ಇಂದಿನ ಮಟ್ಟಿಗೆ ಅನುಕೂಲ.

Advertisement

ವೃಷಭ: ನಿಮ್ಮ ಅಪೇಕ್ಷೆಗಳು ಬಹಪಾಲು ನೆರವೇರುವ ದಿನ ಇಂದು. ಹಿಂದೆಯೇ ಆಗಬೇಕಾಗಿದ್ದ ವೇತನಾದಿ ಸೌಲಭ್ಯ ಸುಧಾರಣೆ. ಸರಕಾರಿ ಅಧಿಕಾರಿಗಳಿಗೆ ಇಷ್ಟಾರ್ಥ ಸಿದ್ಧಿ. ಉದ್ಯಮದ ಉತ್ಪನ್ನಗಳ ಗ್ರಾಹಕರ ಸಂಖ್ಯೆ ಹೆಚ್ಚಳ.

ಮಿಥುನ: ಹಲವು ಬಗೆಯ ಸಂದರ್ಭಗಳಲ್ಲಿ ವಿಜಯ. ಉದ್ಯೋಗ ಸ್ಥಾನದಲ್ಲಿ ಮತ್ತೆ ವಿಭಾಗ ಬದಲಾವಣೆ. ಸ್ವಂತ ಉದ್ಯಮದ ಪರಿಸ್ಥಿತಿ ಸುಧಾರಣೆ. ಕೆಲವು ಬಗೆಯ ಉದ್ಯಮಗಳಿಗೆ ಮುನ್ನಡೆ. ಅಲ್ಪಕಾಲಿಕ ಹೂಡಿಕೆಗಳ ಯೋಚನೆ ಬೇಡ.

ಕರ್ಕಾಟಕ: ಅಕಾರಣವಾಗಿ ಅಪವಾದಗಳಿಗೆ ಗುರಿಯಾಗದಂತೆ ಎಚ್ಚರವಾಗಿರಿ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಾಧೆ. ಉದ್ಯಮಗಳ ಕಾನೂನು ಸಮಸ್ಯೆ ನಿವಾರಣೆ. ನೌಕರರ ಕ್ಷೇಮಾಭಿವೃದ್ಧಿ ಯೋಜನೆ ಜಾರಿ. ಖಾದಿ, ಗ್ರಾಮೋದ್ಯೋಗಗಳಿಗೆ ಉತ್ಕರ್ಷದ ಕಾಲ.

ಸಿಂಹ: ಕಳೆದ ದಿನಗಳ ಕಾರ್ಯಗಳ ಹಿನ್ನೋಟ ದಿಂದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆಗಳು ಆರಂಭ. ಉದ್ಯಮದ ಉತ್ಪನ್ನಗಳಿಗೆ ಹೊರಗಿನ ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಬೇಡಿಕೆ ಹೆಚ್ಚಳ ಉದ್ಯಮ ವಲಯಗಳಿಂದ ಪ್ರೋತ್ಸಾಹ.

Advertisement

ಕನ್ಯಾ: ಉದ್ಯೋಗ, ವ್ಯವಹಾರಗಳಲ್ಲಿ ಹೊಸ ಅನುಭವ. ಸರಕಾರಿ ಉದ್ಯೋಗಿಗಳಿಗೆ ಕೊಂಚ ನೆಮ್ಮದಿ. ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉದ್ಯಮಗಳಿಗೆ ಅಧಿಕ ಲಾಭ. ಅವಿವಾಹಿತರಿಗೆ ಶೀಘ್ರ ವಿವಾಹ. ಯೋಗ. ಸಣ್ಣ ಉದ್ಯಮ ಗಳನ್ನು ಬೆಳೆಸಲು ಹೊಸ ಯೋಜನೆ.

ತುಲಾ: ಮನುಷ್ಯ ಪ್ರಯತ್ನದಿಂದ ದೈವಾನುಗ್ರಹದ ಸಮಯ ಸನ್ನಿಹಿತ. ಉದ್ಯೋಗದಲ್ಲಿ ಕೊಂಚ ಸಮಾಧಾನ. ಹಳೆಯ ಪರಿಚಿತರಿಂದ ವೃತ್ತಿ ಪರಿಣತಿ ವೃದ್ಧಿಗೆ ಸಹಾಯ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿ ಗಳ ಭೇಟಿ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ.

ವೃಶ್ಚಿಕ: ಬದಲಾಗುವ ಬದುಕಿಗೆ ಹೊಂದಿ ಕೊಂಡ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಕೊಂಚ ಮುನ್ನಡೆಯ ಸಾಧ್ಯತೆ. ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆಯೊಂದಿಗೆ ನಿಧಾನಗತಿಯಲ್ಲಿ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ.

ಧನು: ಬದುಕಿನಲ್ಲಿ ನಿತ್ಯ ಹೋರಾಟದಲ್ಲಿ ವಿಜಯದ ಆನಂದ. ಉದ್ಯೋಗದಲ್ಲಿ ಲಭಿಸಿದ ಹಿರಿಯ ಸ್ಥಾನ ಭದ್ರ. ಸಣ್ಣ ಪ್ರಮಾಣದ ಗೃಹೋದ್ಯಮ ಶರಂಭ. ಸ್ವಂತ ಮನೆ ಹೊಂದುವ ಹಂಬಲ ಈಡೇರುವ ಭರವಸೆ. ಊರಿನ ದೇವಾಲಯಕ್ಕೆ ಸಂದರ್ಶನ.

ಮಕರ: ವೃದ್ಧಿಯಾದ ಉತ್ಸಾಹದೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿರ್ವಹಣೆ ಮುಂದುವರಿಕೆ. ಉದ್ಯಮಕ್ಕೆ ಹೊಸ ನೌಕರರ. ಸೇರ್ಪಡೆ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ , ಸಿದ್ಧ ಉಡುಪು ವ್ಯಾಪಾರಿಗಳಿಗೆ ಸಪ್ತಾಹದ ಕೊನೆಯಲ್ಲಿ ನಿರೀಕ್ಷೆ ಮೀರಿದ ಲಾಭ.

ಕುಂಭ: ಸತ್ಕರ್ಮಗಳಿಂದ ಭಗವಂತನಿಂದ ಫ‌ಲ ನೀಡಿಕೆ. ಉದ್ಯೋಗ ಸ್ಥಾನದಲ್ಲಿ ಮುಂದು ವರಿದ ಗುರುಸ್ಥಾನ. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳಿಗೆ ಅಧಿಕ ಬೇಡಿಕೆ.

ಮೀನ: ಸಪ್ತಾಹದ ಕೊನೆಯಲ್ಲಿ ಕೆಲಸದ ಹೊರೆಯನ್ನು ಕಂಡು ಗಾಬರಿಯಾಗದಿರಿ. ವೃತ್ತಿ ಬಾಂಧವರ ಸರ್ವವಿಧ ಸಹಾಯ. ಇಲಾಖೆಗಳವರಿಂದ ಸಕಾರಾತ್ಮಕ ಸ್ಪಂದನ. ಜನಸೇವಾ ಕಾರ್ಯಗಳು ಮುಂದುವರಿಕೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ವ್ಯವಸ್ಥೆ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next